ಆ್ಯಪ್ನಗರ

ಐಪಿಎಲ್ ಸ್ಪಾಟ್ ಫಿಕ್ಸಿಂಗ್; ಕೊನೆಗೂ ಮೌನ ಮುರಿದ ಧೋನಿ

ಕೊನೆಗೂ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೊಸದಾಗಿ ನಿರ್ಮಿಸುತ್ತಿರುವ ಸಾಕ್ಷ್ಯಚಿತ್ರದಲ್ಲಿ ಧೋನಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

Vijaya Karnataka Web 15 Mar 2019, 10:57 am
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳು ಎರಡು ವರ್ಷಗಳ ನಿಷೇಧಕ್ಕೊಳಗಾಗಿದ್ದವು. ಅಲ್ಲದೆ ಎಸ್ ಶ್ರೀಶಾಂತ್ ಸೇರಿದಂತೆ ಮೂವರು ರಾಜಸ್ಥಾನ ಆಟಗಾರರು ಜೀವಮಾನ ನಿಷೇಧಕ್ಕೊಳಗಾಗಿದ್ದರು.
Vijaya Karnataka Web ms-dhoni-01


ಇದೀಗ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಂದ್ರ ಸಿಂಗ್ ಧೋನಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ ಎಂಬುದು ತಿಳಿದು ಬಂದಿದೆ. ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ನಿರ್ದೇಶನ ಮಾಡಿರುವ ವಿಶೇಷ ಸಾಕ್ಷ್ಮಚಿತ್ರವೊಂದರಲ್ಲಿ ಧೋನಿ ಅನೇಕ ವಿಚಾರಗಳನ್ನು ಬಯಲು ಮಾಡಿದ್ದಾರೆ.

'ರೋರ್ ಆಫ್ ದಿ ಲಯನ್' ಸಾಕ್ಷ್ಮಚಿತ್ರದಲ್ಲಿ ಧೋನಿ ವೈಯಕ್ತಿಕ ಬದುಕಿನ ಮೇಲೂ ಬೆಳಕು ಚೆಲ್ಲಿದೆ. 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಳಿಕ ಸಿಎಸ್‌ಕೆ ಹಾಗೂ ರಾಜಸ್ಥಾನ ಮೇಲೆ ಎರಡು ವರ್ಷಗಳ ನಿಷೇಧವನ್ನು ಹೇರಲಾಗಿತ್ತು.

ಎಲ್ಲರಿಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ತಿಳಿದಿದೆ. ಆದರೆ ಸ್ಪಾಟ್ ಫಿಕ್ಸಿಂಗ್ ಕರಾಳ ದಿನಗಳಲ್ಲಿ ಧೋನಿ ವೈಯಕ್ತಿಕ ಬದುಕು ಹೇಗಿತ್ತು? ಹೆಡ್‌ಲೈನ್‌ಗಳ ಹಿಂದೆ ನಡೆದಿದ್ದೇನು? ಧೋನಿ ಮೇಲೆ ಹೇಗೆ ಪರಿಣಾಮ ಬೀರಿತ್ತು? ಖಂಡಿತವಾಗಿಯೂ ಧೋನಿ ಇದುವರೆಗೆ ಬಹಿರಂಗಪಡಿಸದ ವಿಚಾರಗಳು ಇದರಲ್ಲಿ ಅಡಗಿದೆ ಎಂದು ಕಬೀರ್ ಪಿಟಿಐಗೆ ತಿಳಿಸಿದ್ದಾರೆ.

ಇಂತಹ ವಿಷಯಗಳನ್ನು ನಿಭಾಯಿಸುವಾಗ ಧೋನಿ ಯಾವತ್ತೂ ಮೌನಿಯಾಗಿದ್ದರು. ಆದರೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದೇ ಕಾರಣಕ್ಕಾಗಿ ಚೆನ್ನೈ ಪರ ನಾಯಕನಾಗಿ ಮರಳಿದಾಗ ಮತ್ತೆ ಪ್ರಶಸ್ತಿ ಗೆಲ್ಲುವ ಹಂಬಲ ಅವರಲ್ಲಿತ್ತು ಎಂಬುದನ್ನು ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌