ಹೊಸದಿಲ್ಲಿ: ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ದಿನೇಶ್ ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ಇಯಾನ್ ಮಾರ್ಗನ್ ನೀಡುವ ಮೂಲಕ ಅಚ್ಚರಿ ತಂದಿದ್ದರು. ಇದರ ನಡುವೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಾರ್ತಿಕ್ ನಾಯಕತ್ವದಿಂದ ಕೆಳಗೆ ಇಳಿಯುವಷ್ಟು ಕೆಕೆಆರ್ ಅಷ್ಟೊಂದು ಕೆಟ್ಟ ಪ್ರದರ್ಶನ ತೋರಿರಲಿಲ್ಲ. ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ದಿನೇಶ್ ಕಾರ್ತಿಕ್ ಕೆಕೆಆರ್ ಫ್ರಾಂಚೈಸಿಗೆ ತಿಳಿಸಿದ್ದರು. ಆದರೆ, ಎರಡು ಬಾರಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ಮಾಜಿ ನಾಯಕ ಗೌತಮ್ ಗಂಭೀರ್, ಪ್ರಸಕ್ತ ಋತುವಿನ ಮಧ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವಕ್ಕೆ ರಾಜೀನಾಮೆ ನೀಡಲು ಅಸಲಿ ಕಾರಣ ಬೇರೆಯೇ ಇದೆ ಎಂದು ಗುಡುಗಿದ್ದಾರೆ.
ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅತ್ಯಂತ ಯಶಸ್ವಿ ನಾಯಕನಾಗಿರುವ ಗೌತಮ್ ಗಂಭೀರ್, ಪ್ರಸಕ್ತ ಆವೃತ್ತಿಯ ಮಧ್ಯದಲ್ಲಿ ನಾಯಕನ ಬದಲಾವಣೆಯು ಹೆಚ್ಚು ಪ್ರಯೋಜನಕಾರಿಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಲ್ಲದ ಹೊರತಾಗಿಯೂ ಈ ಬಾರಿ ಐಪಿಎಲ್ ಫ್ರಾಂಚೈಸಿಗಳಿಗೆ ಆದಾಯ ಹೇಗೆ.?
"ಕ್ರಿಕೆಟ್ ಸಂಬಂಧಗಳ ಬಗ್ಗೆ ಅಲ್ಲ. ಪ್ರಾಮಾಣಿಕವಾಗಿ ಇದು ಆಟದ ಬಗ್ಗೆ. ಮಾರ್ಗನ್ ನಾಯಕನಾಗಿರುವುದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಮಾರ್ಗನ್ ಅವರನ್ನು ಲೀಗ್ನ ಆರಂಭದಲ್ಲಿ ನಾಯಕನನ್ನಾಗಿ ನೇಮಿಸಿದ್ದರೆ ಅವರಿಗೆ ಹಲವಾರು ಬದಲಾವಣೆಗಳನ್ನು ಮಾಡಲು ಅವಕಾಶವಿತ್ತು. ಆದರೆ ಋತುವಿನ ಮಧ್ಯದಲ್ಲಿ ಯಾರೂ ಪ್ರದರ್ಶನದ ಚಿತ್ರಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಕೋಚ್ ಮತ್ತು ಕ್ಯಾಪ್ಟನ್ ನಡುವೆ ಉತ್ತಮ ಸಂಬಂಧ ಇರುವುದು ಒಳ್ಳೆಯದು," ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
ಡಿ'ಕಾಕ್ ಹೊಡೆತಕ್ಕೆ ಕಂಗಾಲಾದ ಕೆಕೆಆರ್, 8 ವಿಕೆಟ್ಗಳ ಜಯ ದಾಖಲಿಸಿದ ಇಂಡಿಯನ್ಸ್!
"ಕಾರ್ತಿಕ್ ಕಳೆದ ಎರಡು ವರ್ಷಗಳಿಂದ ನಾಯಕನಾಗಿದ್ದಾರೆ. ಋತುವಿನ ಮಧ್ಯದಲ್ಲಿ ನಾಯಕನನ್ನು ಬದಲಾಯಿಸುವಷ್ಟು ಕೋಲ್ಕತ್ತಾದ ಪ್ರದರ್ಶನ ಅಷ್ಟೊಂದು ಕೆಟ್ಟದಾಗಿರಲಿಲ್ಲ. ನಾಯಕತ್ವದ ಬದಲಾವಣೆಯ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದೇನೆ. ಖಂಡಿತಾ ಟೀಮ್ ಮ್ಯಾನೇಜ್ಮೆಂಟ್ಗೆ ದಿನೇಶ್ ಕಾರ್ತಿಕ್ ನಾಯಕನಾಗಿರುವುದು ಇಷ್ಟವಿಲ್ಲ ಎಂದು ಭಾವಿಸುತ್ತೇನೆ," ಎಂದು ಗಂಭೀರ್ ಹೇಳಿದರು.
ಕಾರ್ತಿಕ್ ಕೆಕೆಆರ್ ಕ್ಯಾಪ್ಟನ್ಸಿ ಬಿಡಲು ನಿಜವಾದ ಕಾರಣ ಬಹಿರಂಗ ಪಡಿಸಿದ ಮಾರ್ಗನ್!
ವಿಶ್ವಕಪ್ ಗೆದ್ದ ನಾಯಕ ತಂಡದಲ್ಲಿದ್ದಾನೆ ಮತ್ತು ದಿನೇಶ್ ಕಾರ್ತಿಕ್ ಮೇಲೆ ಒತ್ತಡ ಹೇರುವ ಬದಲು ನಾಯಕತ್ವವನ್ನು ಮುಂಚಿತವಾಗಿ ಮೋರ್ಗನ್ಗೆ ಒಪ್ಪಿಸಬೇಕಾಗಿತ್ತು. ಆದರೆ, ಇದೀಗ ಟೂರ್ನಿಯ ಮಧ್ಯದಲ್ಲಿ ನಾಯಕತ್ವದ ಬದಲಾವಣೆ ಮಾಡುವುದು ಒಳ್ಳೆಯದಲ್ಲ. ಇದರಿಂದ ತಂಡದ ಪ್ರದರ್ಶನವನ್ನು ಬದಲಾಯಿಸಲು ಸಾಧ್ಯವಿಲ್ಲ," ಎಂದು ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅತ್ಯಂತ ಯಶಸ್ವಿ ನಾಯಕನಾಗಿರುವ ಗೌತಮ್ ಗಂಭೀರ್, ಪ್ರಸಕ್ತ ಆವೃತ್ತಿಯ ಮಧ್ಯದಲ್ಲಿ ನಾಯಕನ ಬದಲಾವಣೆಯು ಹೆಚ್ಚು ಪ್ರಯೋಜನಕಾರಿಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಲ್ಲದ ಹೊರತಾಗಿಯೂ ಈ ಬಾರಿ ಐಪಿಎಲ್ ಫ್ರಾಂಚೈಸಿಗಳಿಗೆ ಆದಾಯ ಹೇಗೆ.?
"ಕ್ರಿಕೆಟ್ ಸಂಬಂಧಗಳ ಬಗ್ಗೆ ಅಲ್ಲ. ಪ್ರಾಮಾಣಿಕವಾಗಿ ಇದು ಆಟದ ಬಗ್ಗೆ. ಮಾರ್ಗನ್ ನಾಯಕನಾಗಿರುವುದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಮಾರ್ಗನ್ ಅವರನ್ನು ಲೀಗ್ನ ಆರಂಭದಲ್ಲಿ ನಾಯಕನನ್ನಾಗಿ ನೇಮಿಸಿದ್ದರೆ ಅವರಿಗೆ ಹಲವಾರು ಬದಲಾವಣೆಗಳನ್ನು ಮಾಡಲು ಅವಕಾಶವಿತ್ತು. ಆದರೆ ಋತುವಿನ ಮಧ್ಯದಲ್ಲಿ ಯಾರೂ ಪ್ರದರ್ಶನದ ಚಿತ್ರಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಕೋಚ್ ಮತ್ತು ಕ್ಯಾಪ್ಟನ್ ನಡುವೆ ಉತ್ತಮ ಸಂಬಂಧ ಇರುವುದು ಒಳ್ಳೆಯದು," ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
ಡಿ'ಕಾಕ್ ಹೊಡೆತಕ್ಕೆ ಕಂಗಾಲಾದ ಕೆಕೆಆರ್, 8 ವಿಕೆಟ್ಗಳ ಜಯ ದಾಖಲಿಸಿದ ಇಂಡಿಯನ್ಸ್!
"ಕಾರ್ತಿಕ್ ಕಳೆದ ಎರಡು ವರ್ಷಗಳಿಂದ ನಾಯಕನಾಗಿದ್ದಾರೆ. ಋತುವಿನ ಮಧ್ಯದಲ್ಲಿ ನಾಯಕನನ್ನು ಬದಲಾಯಿಸುವಷ್ಟು ಕೋಲ್ಕತ್ತಾದ ಪ್ರದರ್ಶನ ಅಷ್ಟೊಂದು ಕೆಟ್ಟದಾಗಿರಲಿಲ್ಲ. ನಾಯಕತ್ವದ ಬದಲಾವಣೆಯ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದೇನೆ. ಖಂಡಿತಾ ಟೀಮ್ ಮ್ಯಾನೇಜ್ಮೆಂಟ್ಗೆ ದಿನೇಶ್ ಕಾರ್ತಿಕ್ ನಾಯಕನಾಗಿರುವುದು ಇಷ್ಟವಿಲ್ಲ ಎಂದು ಭಾವಿಸುತ್ತೇನೆ," ಎಂದು ಗಂಭೀರ್ ಹೇಳಿದರು.
ಕಾರ್ತಿಕ್ ಕೆಕೆಆರ್ ಕ್ಯಾಪ್ಟನ್ಸಿ ಬಿಡಲು ನಿಜವಾದ ಕಾರಣ ಬಹಿರಂಗ ಪಡಿಸಿದ ಮಾರ್ಗನ್!
ವಿಶ್ವಕಪ್ ಗೆದ್ದ ನಾಯಕ ತಂಡದಲ್ಲಿದ್ದಾನೆ ಮತ್ತು ದಿನೇಶ್ ಕಾರ್ತಿಕ್ ಮೇಲೆ ಒತ್ತಡ ಹೇರುವ ಬದಲು ನಾಯಕತ್ವವನ್ನು ಮುಂಚಿತವಾಗಿ ಮೋರ್ಗನ್ಗೆ ಒಪ್ಪಿಸಬೇಕಾಗಿತ್ತು. ಆದರೆ, ಇದೀಗ ಟೂರ್ನಿಯ ಮಧ್ಯದಲ್ಲಿ ನಾಯಕತ್ವದ ಬದಲಾವಣೆ ಮಾಡುವುದು ಒಳ್ಳೆಯದಲ್ಲ. ಇದರಿಂದ ತಂಡದ ಪ್ರದರ್ಶನವನ್ನು ಬದಲಾಯಿಸಲು ಸಾಧ್ಯವಿಲ್ಲ," ಎಂದು ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದರು.