ಹೊಸದಿಲ್ಲಿ: ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್, ಆಟದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದನ್ನು ಈಗಲೂ ಗಂಭೀರವಾಗಿಯೇ ಮುಂದುವರಿಸಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದ ಗಂಭೀರ್, 2012 ಮತ್ತು 2014 ಆವೃತ್ತಿಗಳಲ್ಲಿ ತಂಡಕ್ಕೆ ಪ್ರಶಸ್ತಿಯನ್ನೂ ಗೆದ್ದುಕೊಟ್ಟಿದ್ದಾರೆ. ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರದಾ ಎಡಗೈ ಬ್ಯಾಟ್ಸ್ಮನ್ ಗೌತಮ್, ಇದೀಗ ಐಪಿಎಲ್ 2020 ಟೂರ್ನಿಯಲ್ಲಿ ಮಿಂಚಬಲ್ಲ ಸ್ಟಾರ್ ಸ್ಪಿನ್ನರ್ ಯಾರೆಂದು ಆಯ್ಕೆ ಮಾಡಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಯೋಜಿಸಲಾಗುತ್ತಿದೆ. ಅಂದಹಾಗೆ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳು ದೊಡ್ಡದಾಗಿದ್ದು, ಅಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತವೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಸ್ಪಿನ್ನರ್ಗಳ ಪ್ರಾಬಲ್ಯತೆಯನ್ನು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲದೆ ಯಾವ ತಂಡದಲ್ಲಿ ಉತ್ತಮ ಸ್ಪಿನ್ನರ್ಗಳಿದ್ದಾರೋ ಆ ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯುವ ಉತ್ತಮ ಅವಕಾಶವಿದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ.
ಐಪಿಎಲ್ 2020 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಅಂದಹಾಗೆ ದಿಲ್ಲಿ ಮೂಲದ ಮಾಜಿ ಕ್ರಿಕೆಟಿಗ ಗಂಭೀರ್ ಪ್ರಕಾರ ಈ ಬಾರಿಯ ಐಪಿಎಲ್ನಲ್ಲಿ ಮಿಂಚುವ ಎಲ್ಲಾ ಸಾಮರ್ಥ್ಯ ಕೋಲ್ಕತಾ ನೈಟ್ ರೈಡರ್ಸ್ನ ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೇನ್ ಅವರಲ್ಲಿದೆ ಎಂದಿದ್ದಾರೆ. ಟ್ರಿನಿಡಾಡ್ ಮೂಲದ ಕ್ರಿಕೆಟಿಗ 32 ವರ್ಷದ ಸುನಿಲ್ ನರೇನ್ ಕೆಕೆಆರ್ ತಂಡಕ್ಕೆ ಬ್ಯಾಟಿಂಗ್ಲ್ಲೂ ಅಷ್ಟೇ ಪರಿಣಾಮಕಾರಿ ಕಾಣಿಕೆ ನೀಡಬಲ್ಲವರಾಗಿದ್ದಾರೆ.
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ಗೆ ಪದಾರ್ಪಣೆ ಮಾಡಿದ ಸುನಿಲ್ ನರೇನ್, ತಂಡಕ್ಕೆ ಎರಡು ಪ್ರಶಸ್ತಿ ಗೆದ್ದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆದರೆ, 2015ರಲ್ಲಿ ಅವರ ಬೌಲಿಂಗ್ ಶೈಲಿ ವಿರುದ್ಧ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರು. ಆದರೆ ಇದಾದ ಬಳಿಕ ಅವರ ಬೌಲಿಂಗ್ನಲ್ಲಿ ಅಷ್ಟು ಖದರ್ ಉಳಿದಿರಲಿಲ್ಲ. ಆದರೀಗ ಅವರ ಬೌಲಿಂಗ್ನ ಗತಿಯಲ್ಲಿ ಬದಲಾವಣೆ ತಂದುಕೊಂಡು ಅಪಾಯಕಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಸಿಎಸ್ಕೆಗೆ ಮುಂದಿನ ನಾಯಕನನ್ನು ಈಗಾಗಲೇ ಆಯ್ಕೆ ಮಾಡಿರುವ ಧೋನಿ!
"ಸುನಿಲ್ ತಮ್ಮ ಬೌಲಿಂಗ್ ವೇಳೆ ಯಾವ ರೀತಿಯ ಚೆಂಡನ್ನು ಎಸೆಯಲ್ಲಿದ್ದಾರೆ ಎಂಬದನ್ನು ಬಹಿರಂಗ ಪಡಿಸುವುದಿಲ್ಲ. ಕೈ ಮರೆಯಲ್ಲಿ ಚೆಂಡನ್ನು ಹಿಡದು ತಂದು ಬೌಲ್ ಮಾಡುತ್ತಾರೆ. ಹೀಗಾಗಿ ಬ್ಯಾಟ್ಸ್ಮನ್ಗಳಿಗೆ ಅವರ ಚೆಂಡನ್ನು ಅರಿಯಲು ಕೇಲವೇ ಕೆಲ ಕ್ಷಣಗಳು ಮಾತ್ರವೇ ಲಭ್ಯವಾಗುತ್ತದೆ. ಹೀಗಾಗಿ ಒಳ ಹೊಕ್ಕುವ ಚೆಂಡು ಯಾವುದು, ಹೊರ ಹೋಗುವ ಚೆಂಡು ಯಾವುದು ಎಂದು ನಿರ್ಧರಿಸುವುದು ಬ್ಯಾಟ್ಸ್ಮನ್ಗಳಿಗೆ ಬಹಳಾ ಕಷ್ಟ," ಎಂದು ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
ಆರ್ಸಿಬಿಗೆ ಪವರ್ಫುಲ್ ಆರಂಭಿಕ ಬ್ಯಾಟ್ಸ್ಮನ್ಸ್ ಆಯ್ಕೆ ಮಾಡಿದ ಚೋಪ್ರಾ!
"ಯುಎಇ ಪಿಚ್ಗಳಲ್ಲಿ ಸುನಿಲ್ಗೆ ಕೊಂಚ ಹಿಡಿತ ಲಭ್ಯವಾದರೆ, ಅವರ ಬೌಲಿಂಗ್ ಅತ್ಯಂತ ಪರಿಣಾಮಕಾರಿ ಆಗಿರಲಿದೆ. ಜೊತೆಗೆ ಅವರ ಗತಿಯಲ್ಲಿನ ಬದಲಾವಣೆ ಕೂಡ ಅಪಾಯಕಾರಿ ಎಂಬ ದೀಪ್ ದಾಸ್ ಗುಪ್ತ ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ರಶೀದ್ ಖಾನ್ ಯಶಸ್ಸು ಗಳಿಸಲು ಅವರ ಬೌಲಿಂಗ್ನಲ್ಲಿನ ವೇಗವೇ ಕಾರಣ. ಹಾಗೆಯೇ ಸುನಿಲ್ ಕೊಂಚ ವೇಗವಾಗಿ ಬೌಲಿಂಗ್ ಮಾಡಿದಾಗಲೆಲ್ಲಾ ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಅವರು ಮಿಂಚುವ ವಿಶ್ವಾಸವಿದೆ," ಎಂದು ಗಂಭೀರ್ ವಿವರಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಯೋಜಿಸಲಾಗುತ್ತಿದೆ. ಅಂದಹಾಗೆ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳು ದೊಡ್ಡದಾಗಿದ್ದು, ಅಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತವೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಸ್ಪಿನ್ನರ್ಗಳ ಪ್ರಾಬಲ್ಯತೆಯನ್ನು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲದೆ ಯಾವ ತಂಡದಲ್ಲಿ ಉತ್ತಮ ಸ್ಪಿನ್ನರ್ಗಳಿದ್ದಾರೋ ಆ ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯುವ ಉತ್ತಮ ಅವಕಾಶವಿದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ.
ಐಪಿಎಲ್ 2020 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಅಂದಹಾಗೆ ದಿಲ್ಲಿ ಮೂಲದ ಮಾಜಿ ಕ್ರಿಕೆಟಿಗ ಗಂಭೀರ್ ಪ್ರಕಾರ ಈ ಬಾರಿಯ ಐಪಿಎಲ್ನಲ್ಲಿ ಮಿಂಚುವ ಎಲ್ಲಾ ಸಾಮರ್ಥ್ಯ ಕೋಲ್ಕತಾ ನೈಟ್ ರೈಡರ್ಸ್ನ ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೇನ್ ಅವರಲ್ಲಿದೆ ಎಂದಿದ್ದಾರೆ. ಟ್ರಿನಿಡಾಡ್ ಮೂಲದ ಕ್ರಿಕೆಟಿಗ 32 ವರ್ಷದ ಸುನಿಲ್ ನರೇನ್ ಕೆಕೆಆರ್ ತಂಡಕ್ಕೆ ಬ್ಯಾಟಿಂಗ್ಲ್ಲೂ ಅಷ್ಟೇ ಪರಿಣಾಮಕಾರಿ ಕಾಣಿಕೆ ನೀಡಬಲ್ಲವರಾಗಿದ್ದಾರೆ.
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ಗೆ ಪದಾರ್ಪಣೆ ಮಾಡಿದ ಸುನಿಲ್ ನರೇನ್, ತಂಡಕ್ಕೆ ಎರಡು ಪ್ರಶಸ್ತಿ ಗೆದ್ದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆದರೆ, 2015ರಲ್ಲಿ ಅವರ ಬೌಲಿಂಗ್ ಶೈಲಿ ವಿರುದ್ಧ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರು. ಆದರೆ ಇದಾದ ಬಳಿಕ ಅವರ ಬೌಲಿಂಗ್ನಲ್ಲಿ ಅಷ್ಟು ಖದರ್ ಉಳಿದಿರಲಿಲ್ಲ. ಆದರೀಗ ಅವರ ಬೌಲಿಂಗ್ನ ಗತಿಯಲ್ಲಿ ಬದಲಾವಣೆ ತಂದುಕೊಂಡು ಅಪಾಯಕಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಸಿಎಸ್ಕೆಗೆ ಮುಂದಿನ ನಾಯಕನನ್ನು ಈಗಾಗಲೇ ಆಯ್ಕೆ ಮಾಡಿರುವ ಧೋನಿ!
"ಸುನಿಲ್ ತಮ್ಮ ಬೌಲಿಂಗ್ ವೇಳೆ ಯಾವ ರೀತಿಯ ಚೆಂಡನ್ನು ಎಸೆಯಲ್ಲಿದ್ದಾರೆ ಎಂಬದನ್ನು ಬಹಿರಂಗ ಪಡಿಸುವುದಿಲ್ಲ. ಕೈ ಮರೆಯಲ್ಲಿ ಚೆಂಡನ್ನು ಹಿಡದು ತಂದು ಬೌಲ್ ಮಾಡುತ್ತಾರೆ. ಹೀಗಾಗಿ ಬ್ಯಾಟ್ಸ್ಮನ್ಗಳಿಗೆ ಅವರ ಚೆಂಡನ್ನು ಅರಿಯಲು ಕೇಲವೇ ಕೆಲ ಕ್ಷಣಗಳು ಮಾತ್ರವೇ ಲಭ್ಯವಾಗುತ್ತದೆ. ಹೀಗಾಗಿ ಒಳ ಹೊಕ್ಕುವ ಚೆಂಡು ಯಾವುದು, ಹೊರ ಹೋಗುವ ಚೆಂಡು ಯಾವುದು ಎಂದು ನಿರ್ಧರಿಸುವುದು ಬ್ಯಾಟ್ಸ್ಮನ್ಗಳಿಗೆ ಬಹಳಾ ಕಷ್ಟ," ಎಂದು ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
ಆರ್ಸಿಬಿಗೆ ಪವರ್ಫುಲ್ ಆರಂಭಿಕ ಬ್ಯಾಟ್ಸ್ಮನ್ಸ್ ಆಯ್ಕೆ ಮಾಡಿದ ಚೋಪ್ರಾ!
"ಯುಎಇ ಪಿಚ್ಗಳಲ್ಲಿ ಸುನಿಲ್ಗೆ ಕೊಂಚ ಹಿಡಿತ ಲಭ್ಯವಾದರೆ, ಅವರ ಬೌಲಿಂಗ್ ಅತ್ಯಂತ ಪರಿಣಾಮಕಾರಿ ಆಗಿರಲಿದೆ. ಜೊತೆಗೆ ಅವರ ಗತಿಯಲ್ಲಿನ ಬದಲಾವಣೆ ಕೂಡ ಅಪಾಯಕಾರಿ ಎಂಬ ದೀಪ್ ದಾಸ್ ಗುಪ್ತ ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ರಶೀದ್ ಖಾನ್ ಯಶಸ್ಸು ಗಳಿಸಲು ಅವರ ಬೌಲಿಂಗ್ನಲ್ಲಿನ ವೇಗವೇ ಕಾರಣ. ಹಾಗೆಯೇ ಸುನಿಲ್ ಕೊಂಚ ವೇಗವಾಗಿ ಬೌಲಿಂಗ್ ಮಾಡಿದಾಗಲೆಲ್ಲಾ ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಅವರು ಮಿಂಚುವ ವಿಶ್ವಾಸವಿದೆ," ಎಂದು ಗಂಭೀರ್ ವಿವರಿಸಿದ್ದಾರೆ.