ಆ್ಯಪ್ನಗರ

'ಭಾರತಕ್ಕೆ ಆಯ್ಕೆಯಾದರೂ ಅಚ್ಚರಿ ಇಲ್ಲ': ತಮ್ಮ ಮನಸು ಕದ್ದಿರುವ ಯುವ ವೇಗಿಗಳನ್ನು ಹೆಸರಿಸಿದ ಗಂಗೂಲಿ!

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತ ತಲುಪಿದೆ. ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಸಾಕಷ್ಟು ಯುವ ಪ್ರತಿಭೆಗಳು ಗಮನ ಸೆಳೆದಿದ್ದಾರೆ. ಅದರಂತೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ತಮ್ಮ ಗಮನ ಸೆಳೆದಿರುವ ಇಬ್ಬರು ಯುವ ವೇಗಿಗಳನ್ನು ಹೆಸರಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಉಮ್ರಾನ್‌ ಮಲಿಕ್ ಹಾಗೂ ರಾಜಸ್ಥಾನ್‌ ರಾಯಲ್ಸ್‌ನ ಕುಲ್ದೀಪ್‌ ಯಾದವ್‌ ಅವರು ತಮ್ಮ ಗಮನ ಸೆಳೆದಿದ್ದಾರೆ. ಉಮ್ರಾನ್ ಮಲಿಕ್‌ ಭಾರತ ತಂಡಕ್ಕೆ ಆಯ್ಕೆಯಾದರೂ ತಮಗೆ ಅಚ್ಚರಿ ಇಲ್ಲ ಎಂದು ಅವರು ಹೇಳಿದ್ದಾರೆ.

Authored byರಮೇಶ ಕೋಟೆ | Vijaya Karnataka Web 17 May 2022, 10:20 am

ಹೈಲೈಟ್ಸ್‌:

  • ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ.
  • 2022ರ ಐಪಿಎಲ್‌ನಲ್ಲಿ ತಮ್ಮ ಗಮನ ಸೆಳೆದಿರುವ ಯುವ ವೇಗಿಗಳನ್ನು ಹೆಸರಿಸಿದ ಗಂಗೂಲಿ.
  • ಉಮ್ರಾನ್‌ ಮಲಿಕ್ ಭಾರತ ತಂಡಕ್ಕೆ ಆಯ್ಕೆಯಾದರೂ ತಮಗೆ ಅಚ್ಚರಿ ಇಲ್ಲವೆಂದ ದಾದಾ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ganguly-malik
ಗಂಗೂಲಿ-ಮಲಿಕ್‌ (ಚಿತ್ರ: ಐಪಿಎಲ್‌/ಟಿಒಐ)
ಹೊಸದಿಲ್ಲಿ: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಇನ್ನೂ ರಾಷ್ಟ್ರೀಯ ತಂಡ ಪ್ರತಿನಿಧಿಸದ ಇಬ್ಬರು ಯುವ ವೇಗಿಗಳು ತಮ್ಮ ಗಮನ ಸೆಳೆದಿದ್ದಾರೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸ್ಟಾರ್‌ ಆಟಗಾರರ ಎದುರು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಾಬೀತುಪಡಿಸಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಯುವ ಆಟಗಾರರಿಗೆ ಹಾಗೂ ರಾಷ್ಟ್ರೀಯ ತಂಡ ಪ್ರತಿನಿಧಿಸದ ಆಟಗಾರರಿಗೆ ಅತ್ಯುತ್ತಮ ವೇದಿಕೆಯಾಗಿದೆ. ಅದರಂತೆ ಐಪಿಎಲ್‌ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಆಯ್ಕೆಯಾದ ಹಲವು ಆಟಗಾರರು ಉದಾಹರಣೆ ಇದ್ದಾರೆ.

ಇತ್ತೀಚೆಗೆ ಮಿಡ್‌ಡೇ ಜೊತೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಇಬ್ಬರು ಯುವ ವೇಗಿಗಳು ತಮ್ಮ ಗಮನ ಸೆಳೆದಿದ್ದಾರೆಂದು ಹೇಳಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಉಮ್ರಾನ್‌ ಮಲಿಕ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ನ ಕುಲ್ದೀಪ್‌ ಸೇನ್‌ ಈ ಇಬ್ಬರ ಬೌಲಿಂಗ್‌ಗೆ ಪ್ರಭಾವಿತನಾಗಿದ್ದೇನೆಂದು ಗಂಗೂಲಿ ತಿಳಿಸಿದ್ದಾರೆ.

ವಿರಾಟ್‌-ರೋಹಿತ್‌ ಬ್ಯಾಟಿಂಗ್‌ ವೈಫಲ್ಯದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ: ಸೌರವ್ ಗಂಗೂಲಿ!

"150 ಕಿಮೀ ವೇಗದಲ್ಲಿ ಎಷ್ಟು ಮಂದಿ ಬೌಲ್‌ ಮಾಡಬಹುದು? ಭಾರತ ತಂಡಕ್ಕೆ ಉಮ್ರನ್‌ ಮಲಿಕ್ ಆಯ್ಕೆಯಾದರೂ ತಮಗೆ ಅಚ್ಚರಿ ಇಲ್ಲ. ಆದರೆ, ಅವರನ್ನು ಬಳಸಿಕೊಳ್ಳುವುದರಲ್ಲಿ ನಾವು ಎಚ್ಚರಿಂದ ಇರಬೇಕು. ಉಮ್ರಾನ್‌ ಅತ್ಯಂತ ವೇಗದ ಬೌಲರ್‌. ಇವರ ಜೊತೆಗೆ ಕುಲ್ದೀಪ್‌ ಸೇನ್‌ ಅವರನ್ನೂ ಇಷ್ಟಪಡುತ್ತೇನೆ. ಟಿ ನಟರಾಜನ್‌ ಕಮ್‌ಬ್ಯಾಕ್‌ ಮಾಡಿದ್ದಾರೆ. ಮತ್ತೊಂದು ಕಡೆ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಇದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಆಯ್ಕೆದಾರರು ತೆಗೆದುಕೊಳ್ಳಲಿದ್ದಾರೆ," ಎಂದು ಹೇಳಿದರು.

"ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಿರುವುದನ್ನು ನೋಡಲು ತಮಗೆ ತುಂಬಾ ಖುಷಿಯಾಗುತ್ತಿದೆ. ಮುಂಬೈ ಹಾಗೂ ಪುಣೆ ಪಿಚ್‌ಗಳು ಅತ್ಯುತ್ತಮವಾಗಿವೆ ಹಾಗೂ ಅದರಂತೆ ವೇಗಿಗಳು ಅತ್ಯುತ್ತಮ ಬೌನ್ಸ್‌ ಅನ್ನು ಹೊರ ತೆಗೆದಿದ್ದಾರೆ. ವೇಗಿಗಳ ಜೊತೆಗೆ ಸ್ಪಿನ್ನರ್‌ಗಳು ಕೂಡ ಉತ್ತಮವಾಗಿ ಬೌಲ್‌ ಮಾಡುತ್ತಿದ್ದಾರೆ," ಎಂದು ಸೌರವ್ ಗಂಗೂಲಿ ಗುಣಗಾನ ಮಾಡಿದರು.

ಪಂಜಾಬ್‌ಗೆ ನಾಕ್‌ಔಟ್‌ ಪಂಚ್‌ ಕೊಟ್ಟು ಪ್ಲೇ-ಆಫ್ಸ್‌ ಹತ್ತಿರವಾದ ಕ್ಯಾಪಿಟಲ್ಸ್‌!

ಸೌರವ್‌ ಗಂಗೂಲಿ ಹೇಳಿದಂತೆ ಉಮ್ರಾನ್‌ ಮಲಿಕ್‌ ಸನ್‌ರೈಸರ್ಸ್ ಹೈದರಾಬಾದ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿಯವರೆಗೂ ಆಡಿರುವ 12 ಪಂದ್ಯಗಳಲ್ಲಿ 22.06ರ ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಉರುಳಿಸಿದ್ದಾರೆ ಹಾಗೂ ಒಮ್ಮೆ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ತಂಡ ಪ್ರತಿನಿಧಿಸದ ಆಟಗಾರರ ಪೈಕಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ.

ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ಪರ ಗಮನಾರ್ಹ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಕುಲ್ದೀಪ್‌ ಸೇನ್‌ ಅವರು ಇಲ್ಲಿಯವರೆಗೂ ಆಡಿರುವ 7 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಅವರು ಡೆತ್‌ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

14 ಅಂಕಗಳಿದ್ದರೂ ಆರ್‌ಸಿಬಿ ಪ್ಲೇಆಫ್ಸ್ ಹಾದಿ ಕಠಿಣ; ಕೆಕೆಆರ್‌ಗೆ ಇನ್ನೂ ಚಾನ್ಸ್ ಇದೆ!
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌