ಆ್ಯಪ್ನಗರ

ಹುಚ್ಚು ಅಭಿಮಾನ; ಧೋನಿ ಕಾಲಿಗೆ ಬಿದ್ದ ಅಭಿಮಾನಿ

ಇದನ್ನು ಹುಚ್ಚು ಅಭಿಮಾನ ಎಂದು ಕರೆಯಬೇಕೋ ಅಥವಾ ಮಹೇಂದ್ರ ಸಿಂಗ್ ಧೋನಿ ಮೇಲೆ ಇಟ್ಟುಕೊಂಡಿರುವ ಅಪಾರ ಪ್ರೀತಿಯೇ?

Vijaya Karnataka Web 3 May 2018, 9:24 pm
ಕೋಲ್ಕೊತಾ: ಇದನ್ನು ಹುಚ್ಚು ಅಭಿಮಾನ ಎಂದು ಕರೆಯಬೇಕೋ ಅಥವಾ ಮಹೇಂದ್ರ ಸಿಂಗ್ ಧೋನಿ ಮೇಲೆ ಇಟ್ಟುಕೊಂಡಿರುವ ಅಪಾರ ಪ್ರೀತಿಯೇ?
Vijaya Karnataka Web ms-dhoni-13


ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ಧೋನಿ ಕಾಲಿಗೆ ಬಿದ್ದಿರುವ ಅಭಿಮಾನಿಯೊಬ್ಬರು ಆಶೀರ್ವಾದ ಪಡೆದಿದ್ದಾರೆ.

ಟಾಸ್ ಗೆದ್ದ ಕೋಲ್ಕೊತಾ ನೈಟ್ ರೈಡರ್ಸ್ ತಂಡವು ಮೊದಲು ಫೀಲ್ಡಿಂಗ್ ಆರಿಸಿತ್ತು. ಇದರಂತೆ ಸಿಎಸ್‌ಕೆ ನಾಯಕ ಧೋನಿ ಸೇರಿದಂತೆ ತಂಡದ ಆಟಗಾರರು ಡಗೌಟ್‌ನಲ್ಲಿ ಕುಳಿತುಕೊಂಡಿದ್ದರು.

ಈ ವೇಳೆ ಭದ್ರತಾ ಕೋಟೆಯನ್ನು ಬೇಧಿಸಿರುವ ಅಭಿಮಾನಿ, ನೇರವಾಗಿ ಧೋನಿ ಬಳಿ ಬಂದು ಕಾಲಿಗೆರಗಿದರು. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಇಂತಹ ದೃಷ್ಟಾಂತ ಎದುರಾಗಿದೆ.

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಇಂತಹ ಘಟನೆಯು ನಡೆಯುತ್ತಿರುವುದು. ಸಚಿನ್ ತೆಂಡೂಲ್ಕರ್ ಬಳಿಕ ಅಭಿಮಾನಿಗಳು ಧೋನಿಯನ್ನು ಅತಿ ಹೆಚ್ಚು ಆರಾಧಿಸುತ್ತಾರೆ. ಅಲ್ಲದೆ ತಮ್ಮ ಅಚ್ಚುಮೆಚ್ಚಿನ ಆಟಗಾರನ ಮೇಲೆ ಅತೀವ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌