ಆ್ಯಪ್ನಗರ

ಚೆನ್ನೈ ಗೆಲುವಿನ ರೂವಾರಿ ಹರ್ಭಜನ್ ಸಿಂಗ್

ಚೆನ್ನೈ ತಂಡದ ಬೌಲರ್ ಹರ್ಭಜನ್ ಸಿಂಗ್, 4 ಓವರ್‌ನಲ್ಲಿ ಒಂದು ಮೇಡನ್, 17 ರನ್ ನೀಡಿ, 2 ವಿಕೆಟ್ ಕಬಳಿಸುವಲ್ಲಿ ಸಫಲರಾದರು.

Vijaya Karnataka Web 6 Apr 2019, 8:49 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 22 ರನ್‌ಗಳ ಗೆಲುವು ದಾಖಲಿಸಿದೆ.
Vijaya Karnataka Web Harbhajan Singh


ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ನಿಗದಿತ 20 ಓವರ್‌ನಲ್ಲಿ 160 ರನ್ ಗಳಿಸಿತು.

ನಂತರ ಚೆನ್ನೈ ಸವಾಲನ್ನು ಸ್ವೀಕರಿಸಿ ಬ್ಯಾಟಿಂಗ್ ಮಾಡಿದ ಪಂಜಾಬ್, 20 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್‌ ಮಾತ್ರ ಗಳಿಸಿತು. ಇದರಿಂದ ಚೆನ್ನೈ 22 ರನ್ ಸುಲಭ ಗೆಲುವು ದಾಖಲಿಸಿತು.

ಚೆನ್ನೈ ತಂಡದ ಬೌಲರ್ ಹರ್ಭಜನ್ ಸಿಂಗ್, 4 ಓವರ್‌ನಲ್ಲಿ ಒಂದು ಮೇಡನ್, 17 ರನ್ ನೀಡಿ, 2 ವಿಕೆಟ್ ಕಬಳಿಸುವಲ್ಲಿ ಸಫಲರಾದರು. ಹರ್ಭಜನ್ ಸಿಂಗ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಕಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌