ಆ್ಯಪ್ನಗರ

ಪ್ರತಿಭಾವಂತರಿಗಷ್ಟೇ ಟ್ರೋಫಿ ಚುಂಬಿಸುವ ಅವಕಾಶ: ಸುನಿಲ್‌ ಗವಾಸ್ಕರ್‌

ಹಾಲಿ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಹಿಂದಿನ ಮೂರೂ ಮುಖಾಮುಖಿಗಳಲ್ಲಿ ಸಲೀಸಾಗಿ ಸೋಲಿಸಿರುವ ಮುಂಬಯಿ ಇಂಡಿಯನ್ಸ್‌ ಫೇವರಿಟ್‌ ಪಟ್ಟದೊಂದಿಗೆ ಸ್ಪರ್ಧೆಗೆ ಧುಮುಕುತ್ತಿದೆ. ಆದರೂ, ಅಂತಿಮ ಕದನದ ತೀವ್ರತೆ ಬೇರೆಯೇ ತೆರನಾಗಿರುತ್ತದೆ.

Agencies 12 May 2019, 12:46 pm
ಮುಂಬಯಿ: ಭಾನುವಾರದ ಸಿಎಸ್‌ಕೆ ವರ್ಸಸ್ ಮುಂಬಯಿ ಫೈನಲ್‌ ಪಂದ್ಯದಲ್ಲಿ ಪ್ರತಿಭಾವಂತ ತಂಡ ಟ್ರೋಫಿ ಜಯಿಸುವ ಅವಕಾಶ ಪಡೆಯುತ್ತದೆ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಹೇಳಿದ್ದಾರೆ.
Vijaya Karnataka Web mi


ಚೆನ್ನೈ ತಂಡ ಸುಲಲಿತವಾಗಿ ಡೆಲ್ಲಿ ತಂಡವನ್ನು ಸೋಲಿಸುವುದರೊಂದಿಗೆ ಸಾರ್ವಭೌಮತ್ವವನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದನ್ನು 'ಅನುಭವ' ತೋರಿಸಿಕೊಟ್ಟಿತು. ಉತ್ತುಂಗ ಫಾರ್ಮ್‌ನಲ್ಲಿರುವ ಉದಯೋನ್ಮುಖ ಬ್ಯಾಟ್ಸ್‌ಮನ್‌ಗಳಿಗೆ ಚೆನ್ನೈ ಬೌಲರ್‌ಗಳು ಲಗಾಮು ತೊಡಿಸಿದ ರೀತಿ ಮನಮೋಹಕವಾಗಿತ್ತು.

ಹೈದರಾಬಾದ್‌ನಲ್ಲಿ ಚೆನ್ನೈ-ಮುಂಬಯಿ ಹೈವೋಲ್ಟೇಜ್‌ ಹಣಾಹಣಿ

ನಂಬಿಕಸ್ತ ಬ್ಯಾಟ್ಸ್‌ಮನ್‌ಗಳ ಮೇಲೆ ವಿಶ್ವಾಸ ಇರಿಸಿದರೆ ಎಷ್ಟೇ ಒತ್ತಡದ ಸಂದರ್ಭಗಳಲ್ಲೂ ಅವರು ಟೊಂಕಕಟ್ಟಿ ನಿಲ್ಲಲಿದ್ದಾರೆ ಎಂಬುದನ್ನು ಇದೀಗ ಫೈನಲ್‌ ಪ್ರವೇಶಿಸಿರುವ ತಂಡಗಳು ತೋರಿಸಿಕೊಟ್ಟಿವೆ. ತಂಡಗಳ ಸಮೀಕರಣವನ್ನು ವೀಕ್ಷಿಸಿದ್ದೇ ಆದರೆ, ಅಲ್ಲಿ ನಮಗೆ ಕಿಂಚಿತ್ತೂ ಗೊಂದಲ ಕಾಣಸಿಗುವುದಿಲ್ಲ. ಪ್ರತಿಯೊಬ್ಬನಿಗೆ ಮುಖ್ಯ ವೇದಿಕೆಯಲ್ಲಿ ಮಿಂಚುವ ಸಾಮರ್ಥ್ಯ‌ವಿದೆ.

ಹಾಲಿ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಹಿಂದಿನ ಮೂರೂ ಮುಖಾಮುಖಿಗಳಲ್ಲಿ ಸಲೀಸಾಗಿ ಸೋಲಿಸಿರುವ ಮುಂಬಯಿ ಇಂಡಿಯನ್ಸ್‌ ಫೇವರಿಟ್‌ ಪಟ್ಟದೊಂದಿಗೆ ಸ್ಪರ್ಧೆಗೆ ಧುಮುಕುತ್ತಿದೆ. ಆದರೂ, ಅಂತಿಮ ಕದನದ ತೀವ್ರತೆ ಬೇರೆಯೇ ತೆರನಾಗಿರುತ್ತದೆ.
ಕೂಲ್‌ ಧೋನಿ ವರ್ಸಸ್‌ ರೋರಿಂಗ್‌ ರೋಹಿತ್‌

ಫೈನಲ್‌ನಲ್ಲಿ ಗುರಿ ಬೆನ್ನಟ್ಟುವುದು ಅಪಾಯಕಾರಿ: ಎಬಿ ಡಿ

ಇದು ಅನುಭವದ ವಿರುದ್ಧ ಅನುಭವದ ಸೆಣಸಾಟ ಎನಿಸಿಕೊಂಡಿದೆ. ಆದರೆ, ಐಪಿಎಲ್‌ನಂಥ ಟೂರ್ನಿಗಳಲ್ಲಿ, ಸಿಕ್ಕಿದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರತಿಭಾವಂತರಷ್ಟೇ ಟ್ರೋಫಿ ಚುಂಬಿಸುತ್ತಾರೆ.

ಮುತ್ತಿನ ನಗರಿಯಲ್ಲಿ ಟ್ರೋಫಿಗೆ ಮುತ್ತಿಡುವವರಾರು?

ಸಿಎಸ್‌ಕೆ Vs ಮುಂಬಯಿ ಪಂದ್ಯದ ಇಂಟೆರೆಸ್ಟಿಂಗ್‌ ಸಂಗತಿಗಳಿವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌