ಆ್ಯಪ್ನಗರ

ಕೆಕೆಆರ್‌ಗೆ ಅನುಕೂಲ ವೇಳಾಪಟ್ಟಿ: ಸುನಿಲ್‌ ಗವಾಸ್ಕರ್‌

ಮೊದಲಿನ ಪಂದ್ಯಗಳ ಫಲಿತಾಂಶ ನೋಡಿಕೊಂಡು ತಾನು ಮುಂಬಯಿ ಇಂಡಿಯನ್ಸ್‌ ವಿರುದ್ಧ ಗೆದ್ದರಷ್ಟೇ ಸಾಕೇ ಅಥವಾ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕೇ ಎಂಬುದನ್ನು ನಿರ್ಧರಿಸಲು ಕೆಕೆಆರ್‌ಗೆ ಅವಕಾಶ ಲಭಿಸಿದೆ.

Agencies 5 May 2019, 9:55 am
ಮುಂಬಯಿ: ಭಾನುವಾರ ಐಪಿಎಲ್‌ನ ಪಂದ್ಯದಲ್ಲಿ ಮುಂಬಯಿಯಲ್ಲಿ ನಡೆಯುವ ಕೆಕೆಆರ್ ಮತ್ತು ಮುಂಬಯಿ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ವೇಳಾಪಟ್ಟಿ ಕೆಕೆಆರ್‌ಗೆ ಅನುಕೂಲವಾಗಲಿದೆ ಎಂದು ಎಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
Vijaya Karnataka Web KKR


ಭಾನುವಾರ ಲೀಗ್‌ ಹಂತದ ಕೊನೆಯ ಪಂದ್ಯ ಆಡುವುದರಿಂದ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡಕ್ಕೆ ತುಂಬ ಅನುಕೂಲ. ಅದಕ್ಕೂ ಮೊದಲಿನ ಪಂದ್ಯಗಳ ಫಲಿತಾಂಶ ನೋಡಿಕೊಂಡು ತಾನು ಮುಂಬಯಿ ಇಂಡಿಯನ್ಸ್‌ ವಿರುದ್ಧ ಗೆದ್ದರಷ್ಟೇ ಸಾಕೇ ಅಥವಾ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕೇ ಎಂಬುದನ್ನು ನಿರ್ಧರಿಸಲು ಕೆಕೆಆರ್‌ಗೆ ಅವಕಾಶ ಲಭಿಸಿದೆ.

ಭಾನುವಾರ ಮೊದಲ ಪಂದ್ಯದಲ್ಲಿ ಚೆನ್ನೈ ಖಂಡಿತವಾಗಿಯೂ ಅಗ್ರಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಸಿಎಸ್‌ಕೆ ಆಡುತ್ತಿರುವುದು ಉತ್ತಮ ಆರಂಭದ ಬಳಿಕ ದಿಢೀರನೆ ಪ್ರಪಾತಕ್ಕೆ ಕುಸಿದ ಪಂಜಾಬ್‌ ತಂಡದ ವಿರುದ್ಧ.

ದಿನದ ಎರಡನೇ ಪಂದ್ಯದಲ್ಲಿ ಮುಂಬಯಿ ಮತ್ತು ಕೋಲ್ಕೊತಾ ನಡುವೆ ಕದನ ನಡೆಯಲಿದೆ. ಅಷ್ಟರಲ್ಲಿ ಎಲ್ಲ ಲೆಕ್ಕಾಚಾರಗಳು ಮುಗಿದಿರುವುದರಿಂದ ದಿನೇಶ್‌ ಕಾರ್ತಿಕ್‌ ಬಳಗ ಸಂದರ್ಭೋಚಿತವಾಗಿ ಆಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌