ಆ್ಯಪ್ನಗರ

ಐಪಿಎಲ್ ಉದ್ಘಾಟನಾ ನಿಧಿ 20 ಕೋಟಿ ರೂ. ಭಾರತೀಯ ಸೇನೆಗೆ ಹಂಚಿಕೆ

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮಗೊಂಡಿರುವ ಹಿನ್ನಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭಕ್ಕೆ ಮೀಸಲಿರಿಸಲಾಗಿರುವ 20 ಕೋಟಿ ರೂ.ಗಳನ್ನು ಭಾರತೀಯ ಸಶಸ್ತ್ರ ಸೇನೆಗೆ ನೀಡಿದೆ.

Vijaya Karnataka Web 23 Mar 2019, 7:50 pm
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೊತ್ತವನ್ನು ಭಾರತೀಯ ಸೇನೆಗೆ ದೇಣಿಗೆ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.
Vijaya Karnataka Web ipl-2019-01


ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮಗೊಂಡಿದ್ದರು. ಬಳಿಕ ಜನರ ಅನುಕಂಪವನ್ನು ಅರಿತು ಭಾರತೀಯ ಸೇನೆಯ ಗೌರವಾರ್ಥ ಉದ್ಘಾಟನಾ ಸಮಾರಂಭಕ್ಕೆ ಕತ್ತರಿ ಪ್ರಯೋಗ ಮಾಡಲು ಬಿಸಿಸಿಐ ಸಿಒಎ ಸಮಿತಿ ನಿರ್ಧರಿಸಿತ್ತು.

ಇದರಂತೆ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಮೀಸಲಿರಿಸಲಾಗಿರುವ 20 ಕೋಟಿ ರೂ.ಗಳ ಮೊತ್ತವನ್ನು ಭಾರತೀಯ ಸೇನೆಗೆ ನೀಡಲಾಗಿದೆ.

ಇದರಲ್ಲಿ ಇಂಡಿಯನ್ ಆರ್ಮಿಗೆ 11 ಕೋಟಿ ರೂ. ಸಿಆರ್‌ಪಿಎಫ್‌ಗೆ 7 ಕೋಟಿ ಹಾಗೂ 1 ಕೋಟಿ ರೂ.ಗಳನ್ನು ಭಾರತೀಯ ವಾಯು ಸೇನೆ ಹಾಗೂ ನೌಕಾಪಡೆಗೆ ಹಂಚಿದೆ.

ಅದೇ ಹೊತ್ತಿಗೆ ಮೊದಲ ಪಂದ್ಯದ ಟಿಕೆಟ್‌ನಿಂದ ಸಂಗ್ರಹಿಸಿದ ಎರಡು ಕೋಟಿ ರೂ.ಗಳನ್ನು ಮಹೇಂದ್ರ ಸಿಂಗ್ ಧೋನಿ ಹಂಚಿದರು.

ಐಪಿಎಲ್ 12ನೇ ಆವೃತ್ತಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌