ಆ್ಯಪ್ನಗರ

ಟಾಸ್‌ ಜಯಿಸುವವರೇ ಬಾಸ್‌?: ಶ್ರೀಕಾಂತ್‌

ಡೆಲ್ಲಿ ತಂಡ ಬುಧವಾರ ಸನ್‌ರೈಸರ್ಸ್‌ ತಂಡವನ್ನು ಸೋಲಿಸಿರುವುದು ನಿಜವೇ ಆದರೂ, ಶುಕ್ರವಾರ ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ತುಂಬ ಅನುಕೂಲವಾಗಲಿದೆ.

Agencies 10 May 2019, 2:34 pm
ಮುಂಬಯಿ: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿಕ್ಯಾಪಿಟಲ್ಸ್‌ ನಡುವೆ ಶುಕ್ರವಾರ ವಿಶಾಖಪಟ್ಟಣದಲ್ಲಿ ನಡೆಯಲಿರುವ ಐಪಿಎಲ್‌ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಜಯಿಸುವ ತಂಡ ಭಾನುವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಗೆ ಪ್ರವೇಶ ಪಡೆಯಲಿದೆ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಎಂ ಎಸ್ ಧೋನಿ ಟಾಸ್ ಜಯಿಸುತ್ತಾರೆಯೇ ಎಂದು ಭಾರತ ತಂಡದ ಮಾಜಿ ನಾಯಕ ಕೆ.ಶ್ರೀಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web MSD


ಐಪಿಎಲ್‌ ಟೂರ್ನಿ ಇದೀಗ ಮಹಾರಾಜ ಮತ್ತು ಯುವರಾಜರ ನಡುವಣ ಅಗ್ನಿಪರೀಕ್ಷೆಯ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಮುಂಬಯಿ ಇಂಡಿಯನ್ಸ್‌ ವಿರುದ್ಧ ಕಾದಾಡುವ ಹಕ್ಕು ಯಾರಿಗೆ ದಕ್ಕುತ್ತದೆ ಎನ್ನುವುದನ್ನು ಎಂ.ಎಸ್‌.ಧೋನಿ ಮತ್ತು ರಿಷಭ್‌ ಪಂತ್‌ ಸಾಧನೆಗಳೇ ಬಹುತೇಕ ನಿರ್ಧರಿಸಿಬಿಡುತ್ತವೆ.

ಪಂತ್‌, ಪೃಥ್ವಿ ಶಾರಂಥ ಚಿಗುರು ಮೀಸೆಯ ತರುಣರು ಹಾಗೂ ಧವನ್‌ರಂಥ ಹಿರಿಯ ಆಟಗಾರರನ್ನೊಳಗೊಂಡ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದು ಅಧಿಕಾರಯುತವಾಗಿ ನಾಕೌಟ್‌ ಪ್ರವೇಶಿಸಿದೆ. ಇನ್ನು, ಸಿಎಸ್‌ಕೆ ಬಗ್ಗೆ ಹೇಳಬೇಕೆಂದರೆ ಬ್ಯಾಟಿಂಗ್‌ನಲ್ಲಾಗಲೀ, ಮುಂದಾಳತ್ವದಲ್ಲಾಗಲೀ ನಾಯಕ ಧೋನಿಯಷ್ಟು ಸ್ಫೂರ್ತಿ ತುಂಬಬಲ್ಲವರು ಯಾರೂ ಸಿಗಲಿಕ್ಕಿಲ್ಲ.

ಡೆಲ್ಲಿ ತಂಡ ಬುಧವಾರ ಸನ್‌ರೈಸರ್ಸ್‌ ತಂಡವನ್ನು ಸೋಲಿಸಿರುವುದು ನಿಜವೇ ಆದರೂ, ಶುಕ್ರವಾರ ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ತುಂಬ ಅನುಕೂಲವಾಗಲಿದೆ ಎಂದು ನಾನು ಹೇಳಬಲ್ಲೆ. ಆದರೂ, ಇದು ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುವಷ್ಟು ಸುಲಭದ ಪಂದ್ಯವಲ್ಲ ಎನ್ನುವುದಂತೂ ಖರೆ. ಟಾಸ್‌ ಗೆಲ್ಲುವವರೇ ಬಾಸ್‌ ಆಗುವ ಎಲ್ಲ ಲಕ್ಷಣಗಳಿವೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌