ಅಬುಧಾಬಿ: ಎದುರಾಳಿ ತಂಡದ ನಿದ್ರೆ ಕೆಡಿಸುವಂತಹ ಬೌಲರ್ ರಶೀದ್ ಖಾನ್. ಅಂಗಣದಲ್ಲಿ ಕಾಣಿಸಿಕೊಳ್ಳುವಷ್ಟೇ ವೈಯಕ್ತಿಕವಾಗಿಯೂ ಅಷ್ಟೇ ಕಠಿಣ ಸ್ವಭಾವದ ವ್ಯಕ್ತಿ ಅವರು. 2020 ಬಹುತೇಕರ ಪಾಲಿಗೆ ಕಠಿಣವಾಗಿದೆ. ಆದರೆ, ಅಫಘಾನಿಸ್ತಾನದ ಲೆಗ್ ಸ್ಪಿನ್ನರ್ಗೆ ಮತ್ತೂ ಕಠಿಣವಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಅವರ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಮ್ಮ.. ಪ್ರತಿಯೊಬ್ಬರ ಜೀವನದ ಬಹುಮುಖ್ಯ ವ್ಯಕ್ತಿ. ರಶೀದ್ ಪಾಲಿಗೂ ಅಮ್ಮ ಅವರ ಪ್ರಪಂಚ. ರಶೀದ್ ಅವರ ಬಹುದೊಡ್ಡ ಅಭಿಮಾನಿ ಕೂಡ ಅವರೇ. ಹೀಗಾಗಿ ಮಂಗಳವಾರ ಡೆಲ್ಲಿ ಕ್ಯಾಪಿಲಟ್ಸ್ ವಿರುದ್ಧ ಸನ್ರೈಸರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟು ಪಡೆದಂತಹ ಪಂದ್ಯಶ್ರೇಷ್ಠ ಗೌರವವನ್ನು ರಶೀದ್ ತಮ್ಮ ತಾಯಿಗೆ ಅರ್ಪಿಸಿದ್ದಾರೆ.
ಐಪಿಎಲ್ 2020 ಟೂರ್ನಿಯಲ್ಲಿ ಸನ್ರೈಸರ್ಸ್ ತಂಡ ತನ್ನ ಮೊದಲ 2 ಪಂದ್ಯಗಳನ್ನು ಸೋತು ಕಂಗಾಲಾಗಿತ್ತು. ಆದರೆ, ತನ್ನ ಮೂರನೇ ಪಂದ್ಯದಲ್ಲಿ ಪುಟಿದೆದ್ದು ಅಂಕಪಟ್ಟಿಯ ಅಗ್ರಸ್ಥಾನಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎದುರು 15 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಇದಕ್ಕೆ ರಶೀದ್ ಖಾನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಮುಖ್ಯ ಪಾತ್ರವಹಿಸಿತು.
ಐಪಿಎಲ್ 2020 ಟೂರ್ನಿಯ ಅಂಕಪಟ್ಟಿ
ತಮ್ಮ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ ಕೇವಲ 14 ರನ್ಗಳನ್ನು ಮಾತ್ರವೇ ಬಿಟ್ಟುಕೊಟ್ಟ ರಶೀದ್, ಎದುರಾಳಿ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಶಿಖರ್ ಧವನ್ ಅವರನ್ನು ಔಟ್ ಮಾಡಿ ಜಯದ ರೂವಾರಿ ಎನಿಸಿದರು. ಇದು ಐಪಿಎಲ್ನಲ್ಲಿ ರಶೀದ್ ಖಾನ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಹೀಗಾಗಿ ಈ ವಿಶೇಷ ಪಂದ್ಯಶ್ರೇಷ್ಠ ಗೌರವವನ್ನು ರಶೀದ್ ತಮ್ಮ ತಾಯಿಗೆ ಅರ್ಪಿಸಿದ್ದಾರೆ.
ಸನ್ರೈಸರ್ಸ್ ವಿರುದ್ಧದ ಅಚ್ಚರಿಯ ಸೋಲಿಗೆ ಕಾರಣ ಕೊಟ್ಟ ಕ್ಯಾಪಿಟಲ್ಸ್ ಕೋಚ್: ವಿಡಿಯೋ
"ಕಳೆದ ಒಂದೂವರೆ ವರ್ಷ ನನ್ನ ಪಾಲಿಗೆ ಬಹಳ ಕಠಿಣವಾದುದ್ದಾಗಿದೆ. ಮೊದಲು ನನ್ನ ತಂದೆಯನ್ನು ಕಳೆದುಕೊಂಡೆ. ಇದೀಗ ಕೆಲ ತಿಂಗಳ ಹಿಂದೆ (ಜೂನ್ 2020) ನನ್ನ ತಾಯಿ ಕೂಡ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ನನ್ನ ಲಯ ಕಂಡುಕೊಳ್ಳಲು ಕೊಂಚ ಸಮಯ ಬೇಕಾಯಿತು. ನನ್ನ ಅಮ್ಮನೇ ನನ್ನ ದೊಡ್ಡ ಅಭಿಮಾನಿ. ಅದರಲ್ಲೂ ಐಪಿಎಲ್ ವೇಳೆ ನನಗೆ ಪಂದ್ಯಶ್ರೇಷ್ಠ ಸಿಕ್ಕಾಗಲೆಲ್ಲಾ ಅವರು ರಾತ್ರಿಯಿಡೀ ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಪ್ರಶಸ್ತಿ ಅವರಿಗೆ," ಎಂದು ರಶೀದ್ ತಮ್ಮ ತಾಯಿಯ ಅಗಲಿಕೆ ಬಳಿಕ ಶ್ರೇಷ್ಠ ಲಯ ಕಂಡುಕೊಳ್ಳಲು ಸಮಯ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ರಶೀದ್ ಖಾನ್ ಅವರ ಹೇಳಿಕೆಯನ್ನು ಈ ಟ್ವೀಟ್ನಲ್ಲಿ ವೀಕ್ಷಿಸಬಹುದಾಗಿದೆ
"ಇಂದು ನಾನು ವೇಗವಾಗಿ ಬೌಲಿಂಗ್ ಮಾಡಿದೆ. ಮೊದಲ ಎಸೆತದಲ್ಲೇ ಈ ಪಿಚ್ನಲ್ಲಿ ಕೊಂಚ ವೇಗವಾಗಿ ಬೌಲಿಂಗ್ ಮಾಡಬೇಕು ಎಂಬುದನ್ನು ಅರಿತುಕೊಂಡೆ. ಸಾಮಾನ್ಯವಾಗಿ ಒಂದೆರಡು ಎಸೆತಗಳ ಬಳಿಕ ಯಾವ ಲಯದಲ್ಲಿ ಎಸೆಯಬೇಕು ಎಂಬುದರ ಅರಿವು ಬರುತ್ತದೆ. ಬ್ಯಾಕ್ ಆಫ್ ದಿ ಲೆನ್ತ್ ಬೌಲಿಂಗ್ ಈ ಪಿಚ್ಗೆ ಹೆಚ್ಚು ಸೂಕ್ತ," ಎಂದಿದ್ದಾರೆ.
ಇನ್ನು ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತಕ್ಕೆ ಒಳಗಾದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, ಪಿಚ್ನ ಸ್ಥಿತಿ ಗತಿ ಅರಿಯುವಲ್ಲಿ ತಾವು ಸಂಪೂರ್ಣ ವಿಫಲರಾಗಿದ್ದಾಗಿ ಹಾಗೂ ಎದುರಾಳಿ ತಂಡ ತಮ್ಮನ್ನು ಎಲ್ಲಾ ವಿಭಾಗಗಳಲ್ಲೂ ಸೋಲಿಸಿದ್ದಾಗಿ ಒಪ್ಪಿಕೊಂಡರು.
ಸನ್ರೈಸರ್ಸ್ ವಿರುದ್ಧದ ಅಚ್ಚರಿಯ ಸೋಲಿಗೆ ಕಾರಣ ಕೊಟ್ಟ ಕ್ಯಾಪಿಟಲ್ಸ್ ಕೋಚ್: ವಿಡಿಯೋ
"ಮೂರೂ ಆಯಾಮಗಳಲ್ಲಿ ನಮ್ಮೆದುರು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಇದಕ್ಕಾಗಿ ಎದುರಾಳಿ ತಂಡವನ್ನು ಶ್ಲಾಘಿಸಲೇ ಬೇಕು. 162 ರನ್ ಈ ಪಿಚ್ನಲ್ಲಿ ಉತ್ತಮ ಸ್ಕೋರ್. ಪಿಚ್ 2ನೇ ಇನಿಂಗ್ಸ್ ಹೊತ್ತಿಗೆ ಕೊಂಚ ಮಂದಗತಿಯಂತಾಗಿದ್ದು ಅಚ್ಚರಿ ಮೂಡಿಸಿತ್ತು. ನಾನು ಬ್ಯಾಟಿಂಗ್ ಮಾಡಲು ಹೋದಾಗ ಬೀಸಿ ಆಡಲು ಚೆಂಡು ಸರಿಯಾಗಿ ಸಿಗುತ್ತಿರಲಿಲ್ಲ. 2ನೇ ಇನಿಂಗ್ಸ್ನಲ್ಲಿ ತೇವಾಂಶ ಬೌಲರ್ಗಳಿಗೆ ತೊಂದರೆ ನೀಡುತ್ತದೆ ಅಂದುಕೊಂಡಿದ್ದೆವು. ಆದರೆ, ಅದ್ಯಾವುದೂ ನಡೆಯಲಿಲ್ಲ," ಎಂದು ಶ್ರೇಯಸ್ ಹೇಳಿದ್ದಾರೆ.
ಐಪಿಎಲ್ 2020 ಟೂರ್ನಿಯಲ್ಲಿ ಸನ್ರೈಸರ್ಸ್ ತಂಡ ತನ್ನ ಮೊದಲ 2 ಪಂದ್ಯಗಳನ್ನು ಸೋತು ಕಂಗಾಲಾಗಿತ್ತು. ಆದರೆ, ತನ್ನ ಮೂರನೇ ಪಂದ್ಯದಲ್ಲಿ ಪುಟಿದೆದ್ದು ಅಂಕಪಟ್ಟಿಯ ಅಗ್ರಸ್ಥಾನಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎದುರು 15 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಇದಕ್ಕೆ ರಶೀದ್ ಖಾನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಮುಖ್ಯ ಪಾತ್ರವಹಿಸಿತು.
ಐಪಿಎಲ್ 2020 ಟೂರ್ನಿಯ ಅಂಕಪಟ್ಟಿ
ತಮ್ಮ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ ಕೇವಲ 14 ರನ್ಗಳನ್ನು ಮಾತ್ರವೇ ಬಿಟ್ಟುಕೊಟ್ಟ ರಶೀದ್, ಎದುರಾಳಿ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಶಿಖರ್ ಧವನ್ ಅವರನ್ನು ಔಟ್ ಮಾಡಿ ಜಯದ ರೂವಾರಿ ಎನಿಸಿದರು. ಇದು ಐಪಿಎಲ್ನಲ್ಲಿ ರಶೀದ್ ಖಾನ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಹೀಗಾಗಿ ಈ ವಿಶೇಷ ಪಂದ್ಯಶ್ರೇಷ್ಠ ಗೌರವವನ್ನು ರಶೀದ್ ತಮ್ಮ ತಾಯಿಗೆ ಅರ್ಪಿಸಿದ್ದಾರೆ.
ಸನ್ರೈಸರ್ಸ್ ವಿರುದ್ಧದ ಅಚ್ಚರಿಯ ಸೋಲಿಗೆ ಕಾರಣ ಕೊಟ್ಟ ಕ್ಯಾಪಿಟಲ್ಸ್ ಕೋಚ್: ವಿಡಿಯೋ
"ಕಳೆದ ಒಂದೂವರೆ ವರ್ಷ ನನ್ನ ಪಾಲಿಗೆ ಬಹಳ ಕಠಿಣವಾದುದ್ದಾಗಿದೆ. ಮೊದಲು ನನ್ನ ತಂದೆಯನ್ನು ಕಳೆದುಕೊಂಡೆ. ಇದೀಗ ಕೆಲ ತಿಂಗಳ ಹಿಂದೆ (ಜೂನ್ 2020) ನನ್ನ ತಾಯಿ ಕೂಡ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ನನ್ನ ಲಯ ಕಂಡುಕೊಳ್ಳಲು ಕೊಂಚ ಸಮಯ ಬೇಕಾಯಿತು. ನನ್ನ ಅಮ್ಮನೇ ನನ್ನ ದೊಡ್ಡ ಅಭಿಮಾನಿ. ಅದರಲ್ಲೂ ಐಪಿಎಲ್ ವೇಳೆ ನನಗೆ ಪಂದ್ಯಶ್ರೇಷ್ಠ ಸಿಕ್ಕಾಗಲೆಲ್ಲಾ ಅವರು ರಾತ್ರಿಯಿಡೀ ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಪ್ರಶಸ್ತಿ ಅವರಿಗೆ," ಎಂದು ರಶೀದ್ ತಮ್ಮ ತಾಯಿಯ ಅಗಲಿಕೆ ಬಳಿಕ ಶ್ರೇಷ್ಠ ಲಯ ಕಂಡುಕೊಳ್ಳಲು ಸಮಯ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ರಶೀದ್ ಖಾನ್ ಅವರ ಹೇಳಿಕೆಯನ್ನು ಈ ಟ್ವೀಟ್ನಲ್ಲಿ ವೀಕ್ಷಿಸಬಹುದಾಗಿದೆ
"ಇಂದು ನಾನು ವೇಗವಾಗಿ ಬೌಲಿಂಗ್ ಮಾಡಿದೆ. ಮೊದಲ ಎಸೆತದಲ್ಲೇ ಈ ಪಿಚ್ನಲ್ಲಿ ಕೊಂಚ ವೇಗವಾಗಿ ಬೌಲಿಂಗ್ ಮಾಡಬೇಕು ಎಂಬುದನ್ನು ಅರಿತುಕೊಂಡೆ. ಸಾಮಾನ್ಯವಾಗಿ ಒಂದೆರಡು ಎಸೆತಗಳ ಬಳಿಕ ಯಾವ ಲಯದಲ್ಲಿ ಎಸೆಯಬೇಕು ಎಂಬುದರ ಅರಿವು ಬರುತ್ತದೆ. ಬ್ಯಾಕ್ ಆಫ್ ದಿ ಲೆನ್ತ್ ಬೌಲಿಂಗ್ ಈ ಪಿಚ್ಗೆ ಹೆಚ್ಚು ಸೂಕ್ತ," ಎಂದಿದ್ದಾರೆ.
ಇನ್ನು ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತಕ್ಕೆ ಒಳಗಾದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, ಪಿಚ್ನ ಸ್ಥಿತಿ ಗತಿ ಅರಿಯುವಲ್ಲಿ ತಾವು ಸಂಪೂರ್ಣ ವಿಫಲರಾಗಿದ್ದಾಗಿ ಹಾಗೂ ಎದುರಾಳಿ ತಂಡ ತಮ್ಮನ್ನು ಎಲ್ಲಾ ವಿಭಾಗಗಳಲ್ಲೂ ಸೋಲಿಸಿದ್ದಾಗಿ ಒಪ್ಪಿಕೊಂಡರು.
ಸನ್ರೈಸರ್ಸ್ ವಿರುದ್ಧದ ಅಚ್ಚರಿಯ ಸೋಲಿಗೆ ಕಾರಣ ಕೊಟ್ಟ ಕ್ಯಾಪಿಟಲ್ಸ್ ಕೋಚ್: ವಿಡಿಯೋ
"ಮೂರೂ ಆಯಾಮಗಳಲ್ಲಿ ನಮ್ಮೆದುರು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಇದಕ್ಕಾಗಿ ಎದುರಾಳಿ ತಂಡವನ್ನು ಶ್ಲಾಘಿಸಲೇ ಬೇಕು. 162 ರನ್ ಈ ಪಿಚ್ನಲ್ಲಿ ಉತ್ತಮ ಸ್ಕೋರ್. ಪಿಚ್ 2ನೇ ಇನಿಂಗ್ಸ್ ಹೊತ್ತಿಗೆ ಕೊಂಚ ಮಂದಗತಿಯಂತಾಗಿದ್ದು ಅಚ್ಚರಿ ಮೂಡಿಸಿತ್ತು. ನಾನು ಬ್ಯಾಟಿಂಗ್ ಮಾಡಲು ಹೋದಾಗ ಬೀಸಿ ಆಡಲು ಚೆಂಡು ಸರಿಯಾಗಿ ಸಿಗುತ್ತಿರಲಿಲ್ಲ. 2ನೇ ಇನಿಂಗ್ಸ್ನಲ್ಲಿ ತೇವಾಂಶ ಬೌಲರ್ಗಳಿಗೆ ತೊಂದರೆ ನೀಡುತ್ತದೆ ಅಂದುಕೊಂಡಿದ್ದೆವು. ಆದರೆ, ಅದ್ಯಾವುದೂ ನಡೆಯಲಿಲ್ಲ," ಎಂದು ಶ್ರೇಯಸ್ ಹೇಳಿದ್ದಾರೆ.