ದುಬೈ: ಗುರುವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲನೇ ಓವರ್ನಲ್ಲಿಯೇ ಔಟ್ ಆಗಲು ಕಾರಣವನ್ನು ಸನ್ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ವಿವರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 155 ರನ್ಗಳ ಗುರಿ ಹಿಂಬಾಲಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿಯೇ ಆಘಾತ ಉಂಟಾಯಿತು. ಮೊದಲನೇ ಓವರ್ನಲ್ಲಿಯೇ ಜೋಫ್ರ ಆರ್ಚರ್, ಡೇವಿಡ್ ವಾರ್ನರ್(4) ಅವರನ್ನು ಔಟ್ ಮಾಡಿದರು. ನಂತರ, ಮೂರನೇ ಓವರ್ನಲ್ಲಿ ಜಾನಿ ಬೈರ್ಸ್ಟೋವ್ ಅವರ ವಿಕೆಟ್ ಪಡೆದರು.
ಪಂದ್ಯದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, "ಮೊದಲನೇ ಓವರ್ನಿಂದಲೇ ಇನಿಂಗ್ಸ್ ಮೇಲೆ ಪ್ರಾಬಲ್ಯ ಸಾಧಿಸಲು ಕಠಿಣವಾಗಿ ಪ್ರಯತ್ನ ನಡೆಸುತ್ತಿರುವಾಗ, ಯಾರಾದರೂ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದಾಗ, ನೀವು ಏನನ್ನೂ ಹೆಚ್ಚು ಮಾಡಲು ಸಾಧ್ಯವಿಲ್ಲ ಅಥವಾ ಏನಾದರೂ ಮಾಡಬಹುದು. ಮೊದಲನೇ ಓವರ್ನಲ್ಲಿ ಔಟ್ ಆಗಿದ್ದು,ನಿಜಕ್ಕೂ ನಿರಾಸೆ ಉಂಟುಮಾಡಿತು," ಎಂದು ಹೇಳಿದರು.
ರಾಜಸ್ಥಾನ Vs ಹೈದರಾಬಾದ್ ಸ್ಕೋರ್ಕಾರ್ಡ್
ಮೊದಲು ಬ್ಯಾಟಿಂಗ್ ಮಾಡಿದ ರಾಜದಸ್ಥಾನ್ ರಾಯಲ್ಸ್, ನಿಗದಿತ 20 ಓವರ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು 154 ರನ್ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್ರೈಸರ್ಸ್ ಹೈದರಾಬಾದ್, ಮನೀಶ್ ಪಾಂಡೆ (83*) ಹಾಗೂ ವಿಜಯ್ ಶಂಕರ್(52*) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಎಂಟು ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿತು.
ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಮನೀಶ್ ಪಾಂಡೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಪಾಯಿಂಟ್ಸ್ ಟೇಬಲ್ನಲ್ಲಿ ಎಂಟು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಿಗಿಯಿತು. ರಾಜಸ್ಥಾನ್ ರಾಯಲ್ಸ್ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ಕುಸಿಯಿತು.
ಆರ್ಚರ್ಗೆ ಇನ್ನೊಂದು ಓವರ್ ನೀಡದೆ ತಪ್ಪು ಮಾಡಿದೆ ಎಂದ ಸ್ಮಿತ್!
"ನಾವು ಪ್ರಾರಂಭಿಸಿದ ರೀತಿ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಪವರ್ಪ್ಲೇ ನಂತರ ಅದನ್ನು ಮರಳಿ ತರಲು ನಮಗೆ ಸಾಧ್ಯವಾಯಿತು. ಇದು ನಮ್ಮ ಸಂಪೂರ್ಣ ಪ್ರದರ್ಶನವಾಗಿದೆ, ಇದೇ ನಮಗೂ ಬೇಕಾಗಿತ್ತು. ನಮ್ಮ ಇಬ್ಬರು ಆಟಗಾರರು ಬಹುಮಾನ ಪಡೆಯುವುದನ್ನು ನೋಡುವುದು ಒಳ್ಳೆಯದು," ಎಂದು ಸ್ಟಾರ್ಸ್ಪೋರ್ಟ್ಸ್ಗೆ ಡೇವಿಡ್ ವಾರ್ನರ್ ತಿಳಿಸಿದರು.
ಇದಕ್ಕೂ ಮುನ್ನ ಅದ್ಭುತವಾಗಿ ಬೌಲಿಂಗ್ ಮಾಡಿದ ಜೇಸನ್ ಹೋಲ್ಡರ್, ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ಅನ್ನು 154/6ಕ್ಕೆ ನಿಯಂತ್ರಿಸಲು ನೆರವಾಗಿದ್ದರು. ಸಂಜು ಸ್ಯಾಮ್ಸನ್(36) ಹಾಗೂ ಬೆನ್ ಸ್ಟೋಕ್ಸ್(30) ಬಿಟ್ಟರೆ ಇನ್ನುಳಿದವರು ವಿಫಲರಾದರು.
'ಇವರ ಬೌಲಿಂಗ್ಗೆ ಮಾತ್ರ ಯೋಜನೆ ರೂಪಿಸಲಾಗಿತ್ತು' : ಗೇಮ್ ಪ್ಲ್ಯಾನ್ ರಿವೀಲ್ ಮಾಡಿದ ಪಾಂಡೆ!
ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, "ಕಳೆದ ರಾತ್ರಿ ನಾವು ಇಲ್ಲಿ ಅಭ್ಯಾಸ ನಡೆಸುವಾಗ ಸಾಕಷ್ಟು ಮಂಜು ಇತ್ತು, ಇಂದು(ಗುರುವಾರ) ಕೂಡ ಮುಂದುವರಿಯಿತು. ಈ ಕಾರಣದಿಂದಲೇ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡೆವು. ಜೇಸನ್ ಹೋಲ್ಡರ್ ನಮ್ಮ ಬೌಲಿಂಗ್ ಹಾಗೂ ಅನುಭವದಿಂದ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ. ಅವರು ನಮಗೆ ಸಂಪೂರ್ಣ ಆಲ್ರೌಂಡರ್ ಪ್ಯಾಕೇಜ್," ಎಂದು ವಿಂಡೀಸ್ ಆಟಗಾರನನ್ನು ಶ್ಲಾಘಿಸಿದರು.
ಅ.24 ರಂದು ಶನಿವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಪೈಪೋಟಿ ನಡೆಸಲಿದೆ.
ರಾಜಸ್ಥಾನ್ ರಾಯಲ್ಸ್ಗೆ 8 ವಿಕೆಟ್ಗಳ ಹೀನಾಯ ಸೋಲುಣಿಸಿದ ಸನ್ರೈಸರ್ಸ್!
ಪಂದ್ಯದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, "ಮೊದಲನೇ ಓವರ್ನಿಂದಲೇ ಇನಿಂಗ್ಸ್ ಮೇಲೆ ಪ್ರಾಬಲ್ಯ ಸಾಧಿಸಲು ಕಠಿಣವಾಗಿ ಪ್ರಯತ್ನ ನಡೆಸುತ್ತಿರುವಾಗ, ಯಾರಾದರೂ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದಾಗ, ನೀವು ಏನನ್ನೂ ಹೆಚ್ಚು ಮಾಡಲು ಸಾಧ್ಯವಿಲ್ಲ ಅಥವಾ ಏನಾದರೂ ಮಾಡಬಹುದು. ಮೊದಲನೇ ಓವರ್ನಲ್ಲಿ ಔಟ್ ಆಗಿದ್ದು,ನಿಜಕ್ಕೂ ನಿರಾಸೆ ಉಂಟುಮಾಡಿತು," ಎಂದು ಹೇಳಿದರು.
ರಾಜಸ್ಥಾನ Vs ಹೈದರಾಬಾದ್ ಸ್ಕೋರ್ಕಾರ್ಡ್
ಮೊದಲು ಬ್ಯಾಟಿಂಗ್ ಮಾಡಿದ ರಾಜದಸ್ಥಾನ್ ರಾಯಲ್ಸ್, ನಿಗದಿತ 20 ಓವರ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು 154 ರನ್ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್ರೈಸರ್ಸ್ ಹೈದರಾಬಾದ್, ಮನೀಶ್ ಪಾಂಡೆ (83*) ಹಾಗೂ ವಿಜಯ್ ಶಂಕರ್(52*) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಎಂಟು ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿತು.
ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಮನೀಶ್ ಪಾಂಡೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಪಾಯಿಂಟ್ಸ್ ಟೇಬಲ್ನಲ್ಲಿ ಎಂಟು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಿಗಿಯಿತು. ರಾಜಸ್ಥಾನ್ ರಾಯಲ್ಸ್ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ಕುಸಿಯಿತು.
ಆರ್ಚರ್ಗೆ ಇನ್ನೊಂದು ಓವರ್ ನೀಡದೆ ತಪ್ಪು ಮಾಡಿದೆ ಎಂದ ಸ್ಮಿತ್!
"ನಾವು ಪ್ರಾರಂಭಿಸಿದ ರೀತಿ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಪವರ್ಪ್ಲೇ ನಂತರ ಅದನ್ನು ಮರಳಿ ತರಲು ನಮಗೆ ಸಾಧ್ಯವಾಯಿತು. ಇದು ನಮ್ಮ ಸಂಪೂರ್ಣ ಪ್ರದರ್ಶನವಾಗಿದೆ, ಇದೇ ನಮಗೂ ಬೇಕಾಗಿತ್ತು. ನಮ್ಮ ಇಬ್ಬರು ಆಟಗಾರರು ಬಹುಮಾನ ಪಡೆಯುವುದನ್ನು ನೋಡುವುದು ಒಳ್ಳೆಯದು," ಎಂದು ಸ್ಟಾರ್ಸ್ಪೋರ್ಟ್ಸ್ಗೆ ಡೇವಿಡ್ ವಾರ್ನರ್ ತಿಳಿಸಿದರು.
ಇದಕ್ಕೂ ಮುನ್ನ ಅದ್ಭುತವಾಗಿ ಬೌಲಿಂಗ್ ಮಾಡಿದ ಜೇಸನ್ ಹೋಲ್ಡರ್, ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ಅನ್ನು 154/6ಕ್ಕೆ ನಿಯಂತ್ರಿಸಲು ನೆರವಾಗಿದ್ದರು. ಸಂಜು ಸ್ಯಾಮ್ಸನ್(36) ಹಾಗೂ ಬೆನ್ ಸ್ಟೋಕ್ಸ್(30) ಬಿಟ್ಟರೆ ಇನ್ನುಳಿದವರು ವಿಫಲರಾದರು.
'ಇವರ ಬೌಲಿಂಗ್ಗೆ ಮಾತ್ರ ಯೋಜನೆ ರೂಪಿಸಲಾಗಿತ್ತು' : ಗೇಮ್ ಪ್ಲ್ಯಾನ್ ರಿವೀಲ್ ಮಾಡಿದ ಪಾಂಡೆ!
ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, "ಕಳೆದ ರಾತ್ರಿ ನಾವು ಇಲ್ಲಿ ಅಭ್ಯಾಸ ನಡೆಸುವಾಗ ಸಾಕಷ್ಟು ಮಂಜು ಇತ್ತು, ಇಂದು(ಗುರುವಾರ) ಕೂಡ ಮುಂದುವರಿಯಿತು. ಈ ಕಾರಣದಿಂದಲೇ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡೆವು. ಜೇಸನ್ ಹೋಲ್ಡರ್ ನಮ್ಮ ಬೌಲಿಂಗ್ ಹಾಗೂ ಅನುಭವದಿಂದ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ. ಅವರು ನಮಗೆ ಸಂಪೂರ್ಣ ಆಲ್ರೌಂಡರ್ ಪ್ಯಾಕೇಜ್," ಎಂದು ವಿಂಡೀಸ್ ಆಟಗಾರನನ್ನು ಶ್ಲಾಘಿಸಿದರು.
ಅ.24 ರಂದು ಶನಿವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಪೈಪೋಟಿ ನಡೆಸಲಿದೆ.
ರಾಜಸ್ಥಾನ್ ರಾಯಲ್ಸ್ಗೆ 8 ವಿಕೆಟ್ಗಳ ಹೀನಾಯ ಸೋಲುಣಿಸಿದ ಸನ್ರೈಸರ್ಸ್!