ಆ್ಯಪ್ನಗರ

IPL 2020: ನೋ ಬಾಲ್‌ ನಿರ್ಧರಿಸಲು ಪ್ರತ್ಯೇಕ ಅಂಪೈರ್‌

ಇಂಡಿಯನ್ ಪ್ರೀಮಿಯರ್ ಲೀಗ್ 2020ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅನೇಕ ಬದಲಾವಣೆಗಳು ಕಂಡುಬರಲಿದೆ. ನೋ ಬಾಲ್ ನೋಡಿಕೊಳ್ಳಲು ಪ್ರತ್ಯೇಕ ಅಂಪೈರ್‌ವೊಬ್ಬರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

Vijaya Karnataka Web 6 Nov 2019, 8:50 am
ಮುಂಬಯಿ: ಮುಂದಿನ ಋುತುವಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ನೋ ಬಾಲ್‌ ನೋಡಿಕೊಳ್ಳಲು ಪ್ರತ್ಯೇಕ ಅಂಪೈರ್‌ವೊಬ್ಬರನ್ನು ನಿಯುಕ್ತಿಗೊಳಿಸುವ ಹೊಸ ಯೋಜನೆಯೊಂದು ಮಂಗಳವಾರ ನಡೆದ ಐಪಿಎಲ್‌ ಆಡಳಿತ ಸಮಿತಿ ಸಭೆಯಲ್ಲಿ ಪ್ರಕಟವಾಗಿದೆ.
Vijaya Karnataka Web ಲಸಿತ್ ಮಾಲಿಂಗ ನೋ ಬಾಲ್


2019ರ ಟೂರ್ನಿಯಲ್ಲಿ ಫೀಲ್ಡ್‌ ಅಂಪೈರ್‌ಗಳು ಹಲವು ಪಂದ್ಯಗಳಲ್ಲಿ ನೋ ಬಾಲ್‌ ಗುರುತಿಸಲು ವಿಫಲಗೊಂಡಿದ್ದರು. ಇದು ದೇಶಿ ಟೂರ್ನಿಗಳ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜನ ಪ್ರಶ್ನಿಸುವಂತೆ ಮಾಡಿತ್ತು. ಮುಂಬಯಿ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಲಸಿತ್‌ ಮಾಲಿಂಗ ಎಸೆದ ಕೊನೆಯ ಎಸೆತ ನೋ ಬಾಲ್‌ ಆಗಿದ್ದರೂ, ಅಂಪೈರ್‌ ಗಮನಿಸದ ಕಾರಣ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪಂದ್ಯ ಕಳೆದುಕೊಂಡಿತ್ತು. ಈ ಬಗ್ಗೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಅಂದು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.

IPL 2020: ಕಿಂಗ್ಸ್‌ ಇಲೆವೆನ್‌ ತಂಡದಿಂದ ಕ್ಯಾಪಿಟಲ್ಸ್‌ಗೆ ಹಾರಿದ ರವಿಚಂದ್ರನ್‌ ಅಶ್ವಿನ್‌

ಮುಂಬಯಿನಲ್ಲಿ ಮಂಗಳವಾರ ನಡೆದ ಆಡಳಿತ ಸಮಿತಿ ಸಭೆಯಲ್ಲಿಅಂಪೈರ್‌ ತಪ್ಪುಗಳ ಕುರಿತು ಚರ್ಚೆ ನಡೆದು, ಬೌಲರ್‌ ಎಸೆಯುವ ಪ್ರತಿ ಎಸೆತದ ಕಡೆಗೆ ಗಮನ ನೀಡಲು ಪ್ರತ್ಯೇಕ ಅಂಪೈರ್‌ವೊಬ್ಬರನ್ನು ನಿಯೋಜನೆಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ಅಂಪೈರ್‌ಗಳು 'ಫ್ರಂಟ್‌ ಫೂಟ್‌ ನೋ ಬಾಲ್‌' ಹಾಗೂ 'ಹೈಟ್‌ ನೋ ಬಾಲ್‌' ಎರಡನ್ನೂ ಗಮನಿಸಲಿದ್ದಾರೆ.

ವಿಚಿತ್ರವಾದರೂ ಅನಿವಾರ್ಯ:
ಸಭೆಯ ಬಳಿಕ ಮಾತನಾಡಿದ ಆಡಳಿತ ಸಮಿತಿಯ ಹಿರಿಯ ಸದಸ್ಯರೊಬ್ಬರು, ''ಈ ನಿರ್ಧಾರ ಕೇಳಿದಾಗ ನಿಮಗೆ ಅವಾಸ್ತವಿಕ ಅಥವಾ ವಿಚಿತ್ರ ಎಂದು ಅನಿಸಬಹುದು. ಆದರೆ, ಸುಧಾರಿತ ಕ್ರಿಕೆಟ್‌ನಲ್ಲಿಇದು ಅನಿವಾರ್ಯ. ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ರಿಕೆಟ್‌ನಲ್ಲಿ ಸುಧಾರಣೆ ತರಬೇಕಾಗಿದೆ. ಹಾಗೆಂದು ಈ ಅಂಪೈರ್‌ಗಳು ಥರ್ಡ್‌ ಅಂಪೈರ್‌ ಅಥವಾ ಫೋರ್ಥ್ ಅಂಪೈರ್‌ ಆಗುವುದಿಲ್ಲ,'' ಎಂದರು. ''ದೇಶಿ ಟೂರ್ನಿಯೊಂದರಲ್ಲಿ ಪ್ರಾಯೋಗಿಕವಾಗಿ ಅಳವಡಿಸಿ ಅದರ ಯಶಸ್ಸಿನ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು,'' ಅವರು ಇದೇ ವೇಳೆ ಹೇಳಿದರು.

ಟೀಮ್‌ ಇಂಡಿಯಾದ ಐತಿಹಾಸಿಕ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಧೋನಿ ಕಾಮೆಂಟರಿ!

ಮುಷ್ತಾಕ್‌ ಅಲಿ ಟೂರ್ನಿಗಿಲ್ಲ ಪವರ್‌ ಪ್ಲೇಯರ್‌:
ಐಪಿಎಲ್‌ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗಳ ವೇಳೆ ಯಾವುದೇ ಸಮಯದಲ್ಲಿ ಬೇಕಾದರೂ ಬದಲಿ ಆಟಗಾರನನ್ನು ಕಣಕ್ಕಿಳಿಸುವ 'ಪವರ್‌ ಪ್ಲೇಯರ್‌' ಜಾರಿ ಮಾಡುವ ಬಗ್ಗೆ ಸೋಮವಾರವಷ್ಟೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ, ಇದೇ ನವೆಂಬರ್‌ 8ರಂದು ಆರಂಭವಾಗಲಿರುವ ಸೈಯದ್‌ ಮುಷ್ತಾಕ್‌ ಅಲಿ ದೇಶಿ ಟಿ20 ಟೂರ್ನಿಯಲ್ಲಿಅದು ಜಾರಿಗೆ ಬರುವುದಿಲ್ಲಎಂದು ಸಭೆಯ ಬಳಿಕ ಸದಸ್ಯರು ತಿಳಿಸಿದ್ದಾರೆ.

ಮೊದಲು ತಂಡ ಕಟ್ಟಿ, ಟ್ರೋಫಿ ಗೆಲ್ಲಿ; ಆರ್‌ಸಿಬಿ ಮಸಾಜ್ ಥೆರಪಿಸ್ಟ್ ನೇಮಕಕ್ಕೆ ಬುದ್ಧಿವಾದ ಹೇಳಿದ ಫ್ಯಾನ್ಸ್!

ಹರಾಜು ಬೆಂಗಳೂರಿನಿಂದ ಕೋಲ್ಕೊತಾಗೆ ಸ್ಥಳಾಂತರ:
ಮುಂದಿನ ಐಪಿಎಲ್‌ಗೆ ಇದೇ ಡಿಸೆಂಬರ್‌ 19ರಂದು ಕೋಲ್ಕೊತಾದಲ್ಲಿಆಟಗಾರರ ಹರಾಜು ನಡೆಯಲಿದೆ. ಮುಂಬಯಿಯಲ್ಲಿ ಶ್ರೀಮಂತ ಕ್ರಿಕೆಟ್‌ ಲೀಗ್‌ ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್‌-ಮೇ ತಿಂಗಳಲ್ಲಿ ನಡೆಯುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಆಟಗಾರರ ಹರಾಜು ನಡೆಯುತ್ತದೆ. ಐಪಿಎಲ್‌ ಹರಾಜು ಬೆಂಗಳೂರಿನಲ್ಲಿನಡೆಯುವುದು ವಾಡಿಕೆ. ಆದರೆ, ಇದೇ ಮೊದಲ ಬಾರಿ ಶಾರುಖ್‌ ಖಾನ್‌ ಒಡೆತನದ ಕೋಲ್ಕೊತಾ ನೈಟ್‌ ರೈಡರ್ಸ್‌ ಫ್ರಾಂಚೈಸಿಯ ತವರು ಕೋಲ್ಕೊತಾದಲ್ಲಿ ಹರಾಜು ನಿಗದಿಯಾಗಿದೆ. 2020ರ ಋುತುವಿನಲ್ಲಿಆಟಗಾರರ ಹರಾಜಿಗೆ ಪ್ರತಿ ಫ್ರಾಂಚೈಸಿ 85 ಕೋಟಿ ರೂಪಾಯಿ ವ್ಯಯಿಸಬಹುದಾಗಿದೆ. 2019ರಲ್ಲಿಈ ಮೊತ್ತ 82 ಕೋಟಿ ರೂಪಾಯಿ ಆಗಿತ್ತು. ಕಳೆದ ಆವೃತ್ತಿಯಲ್ಲಿ ಬಾಕಿ ಉಳಿದ ಹಣದ ಜತೆ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಬಳಕೆ ಮಾಡಲು ಪ್ರತಿ ಫ್ರಾಂಚೈಸಿಗೆ ಅವಕಾಶ ನೀಡಲಾಗಿದೆ. ಈ ವರ್ಷದ ಆಟಗಾರರ ಹರಾಜು ಪ್ರಸಕ್ತ ಸಾಲಿನಲ್ಲಿಕೊನೆಯದು. 2021ರ ಆವೃತ್ತಿಗೆ ಫ್ರಾಂಚೈಸಿಗಳು ಹಳೆಯ ಆಟಗಾರರ ಜತೆಗಿನ ಸಂಬಂಧವನ್ನು ಸಂಪೂರ್ಣ ಕಡಿದುಕೊಂಡು ಹೊಸ ತಂಡಗಳನ್ನು ಕಟ್ಟಿಕೊಳ್ಳಲಿವೆ.

ಗ್ಯಾರಿ ಕರ್ಸ್ಟನ್, ಆಶಿಶ್ ನೆಹ್ರಾಗೆ ಕೊಕ್; ಆರ್‌ಸಿಬಿಗೆ ಮೈಕ್ ಹೆಸ್ಸನ್, ಸೈಮನ್ ಕ್ಯಾಟಿಚ್ ಬಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌