ಆ್ಯಪ್ನಗರ

'ಪ್ರಶಸ್ತಿಗೆ ಕೆಕೆಆರ್‌ ಕೂಡ ಅರ್ಹ ತಂಡ' ಮಾರ್ಗನ್‌ ಬಳಗವನ್ನು ಶ್ಲಾಘಿಸಿದ ಧೋನಿ!

ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಶ್ಲಾಘಿಸುವ ಮೊದಲು ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಬಗ್ಗೆ ಮಾತನಾಡುವ ಅಗತ್ಯವಿದೆ ಎಂದು ಪಂದ್ಯದ ಬಳಿಕ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೇಳಿದ್ದಾರೆ.

Vijaya Karnataka Web 16 Oct 2021, 12:11 pm

ಹೈಲೈಟ್ಸ್‌:

  • ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಅಂತ್ಯ.
  • ನಾಲ್ಕನೇ ಭಾರಿ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್‌ ಕಿಂಗ್ಸ್‌.
  • ಕೆಕೆಆರ್‌ ವಿರುದ್ಧ 27 ರನ್‌ಗಳಿಂದ ಗೆದ್ದು ಸಂಭ್ರಮಿಸಿದ ಎಂಎಸ್‌ ಧೋನಿ ಬಾಯ್ಸ್.
  • ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಕೊಂಡಾಡಿದ ಸಿಎಸ್‌ಕೆ ನಾಯಕ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ganguly-Dhoni
ಗಂಗೂಲಿ-ಧೋನಿ (ಚಿತ್ರ: ಐಪಿಎಲ್‌)
ದುಬೈ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲ ಅವಧಿಯಲ್ಲಿ ನೀರಸ ಪ್ರದರ್ಶನ ತೋರಿ, ಯುಎಇ ಚರಣದಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಈ ವರ್ಷ ಚಾಂಪಿಯನ್ಸ್ ಆಗಲು ಅರ್ಹವಾಗಿದೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಎಂಎಸ್‌ ಧೋನಿ ಎದುರಾಳಿ ತಂಡವನ್ನು ಶ್ಲಾಘಿಸಿದ್ದಾರೆ.
ಶುಕ್ರವಾರ ದುಬೈ ಇಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ 27 ರನ್‌ಗಳಿಂದ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್‌ ಕಿಂಗ್ಸ್ ನಾಲ್ಕನೇ ಬಾರಿ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡಿತು. ಆ ಮೂಲಕ ಯುಎಇ ಚರಣದಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದ ಕೆಕೆಆರ್‌ಗೆ ಫೈನಲ್‌ ಹಣಾಹಣಿಯಲ್ಲಿ ಸೋಲುವ ಮೂಲಕ ನಿರಾಶೆಯಾಯಿತು.

ಭಾರತದಲ್ಲಿ ನಡೆದಿದ್ದ ಮೊದಲನೇ ಅವಧಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಆಡಿದ್ದ 7 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಆದರೆ, ಯುಎಇಯಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಅತ್ಯುತ್ತಮ ರನ್‌ರೇಟ್‌ನೊಂದಿಗೆ ಪ್ಲೇ ಆಫ್ಸ್‌ಗೆ ಲಗ್ಗೆ ಇಟ್ಟಿತ್ತು. ನಂತರ, ಪಾಯಿಂಟ್ಸ್ ಟೇಬಲ್‌ನಲ್ಲಿ ತನಗಿಂತ ಮೇಲಿನ ಸ್ಥಾನಗಳಲ್ಲಿದ್ದ ಆರ್‌ಸಿಬಿ ಮತ್ತು ಡಿಸಿ ತಂಡಗಳನ್ನು ಮಣಿಸಿ ಕೆಕೆಆರ್‌ ಫೈನಲ್‌ ಪ್ರವೇಶ ಮಾಡಿತ್ತು.

ಕೆಕೆಆರ್‌ ಮಣಿಸಿ 4ನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌!

ಸಿಎಸ್‌ಕೆ ಚಾಂಪಿಯನ್ಸ್ ಆದ ಬಳಿಕ ಮಾತನಾಡಿದ ಎಂಎಸ್‌ ಧೋನಿ, "ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಹೊಗಳುವ ಮೊದಲು, ಕೆಕೆಆರ್ ತಂಡದ ಬಗ್ಗೆ ಮಾತನಾಡುವುದು ತುಂಬಾ ಮುಖ್ಯ. ಮೊದಲನೇ ಲೆಗ್‌ ಬಳಿಕ ಅವರಿದ್ದ ಪರಿಸ್ಥಿತಿ ತುಂಬಾ ಕಠಿಣವಾಗಿತ್ತು ಹಾಗೂ ಕಮ್‌ಬ್ಯಾಕ್‌ ಮಾಡುವುದು ಅಸಾಧ್ಯವಾಗಿತ್ತು. ಆದರೆ, ಅವರು ಅದೆನ್ನೆಲ್ಲಾ ಮೀರಿ ಫೈನಲ್‌ ತಲುಪಿದ್ದಾರೆ. ಹಾಗಾಗಿ, ಈ ಬಾರಿ ಐಪಿಎಲ್‌ ಗೆಲುವಿಗೆ ಕೆಕೆಆರ್‌ ಅರ್ಹ ತಂಡ. ಟೂರ್ನಿಯ ನಡುವೆ ವಿರಾಮ ಸಿಕ್ಕಿದ್ದು ಅವರಿಗೆ ಲಾಭದಾಯಕವಾಗಿದೆ," ಎಂದು ಹೇಳಿದರು.



ಐಪಿಎಲ್‌ ಇತಿಹಾಸಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ 9 ಬಾರಿ ಫೈನಲ್‌ ಹಣಾಹಣಿಯಲ್ಲಿ ಕಾದಾಟ ನಡೆಸಿದ್ದು, ಇದರಲ್ಲಿ ನಾಲ್ಕು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಇನ್ನುಳಿದ 5 ಬಾರಿ ಫೈನಲ್‌ನಲ್ಲಿ ಸೋಲು ಅನುಭವಿಸಿದೆ. ಆದರೆ, ಶುಕ್ರವಾರ ಕೆಕೆಆರ್‌ ವಿರುದ್ಧ ಸಿಎಸ್‌ಕೆ 27 ರನ್‌ಗಳಿಂದ ಗೆದ್ದು ಟ್ರೋಫಿ ಮುಡಿಗೇರಿಸಿಕೊಂಡಿತು. ಆ ಮೂಲಕ ಟೂರ್ನಿಯ ಇತಿಹಾಸದಲ್ಲಿಯೇ ಮೂರಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿಗೆ ಗೆದ್ದ ಎರಡನೇ ತಂಡ ಎಂಬ ಕೀರ್ತಿಗೆ ಚೆನ್ನೈ ಪಾತ್ರವಾಗಿದೆ.

IPL 2021: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 4ನೇ ಐಪಿಎಲ್ ಗರಿ! ಪ್ರಶಸ್ತಿ ವಿವರ ಇಂತಿದೆ..

ಫೈನಲ್‌ ಹಣಾಹಣಿಯಲ್ಲಿ 86 ರನ್‌ ಸಿಡಿಸಿ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಫಾಫ್‌ ಡು'ಪ್ಲೆಸಿಸ್‌ ಮಾತನಾಡಿ, "ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ಪ್ರತಿಭಾವಂತ ಬ್ಯಾಟ್ಸ್‌ಮನ್‌. ಭಾರತೀಯ ಕ್ರಿಕೆಟ್ ಪ್ರತಿಭೆಯಿಂದ ಆಶೀರ್ವದಿಸಲ್ಪಟ್ಟಿದೆ. ಗಾಯಕ್ವಾಡ್‌ ಉತ್ತಮ ಹಾದಿಯತ್ತ ಸಾಗುತ್ತಿದ್ದಾರೆ. ಈತನಿಗೆ ಉಜ್ವಲ ಭವಿಷ್ಯವಿದೆ," ಎಂದು ಶ್ಲಾಘಿಸಿದರು.

"ನಾನಿಂದು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಇದು ಐಪಿಎಲ್‌ನಲ್ಲಿ ನನ್ನ 100 ನೇ ಪಂದ್ಯವಾಗಿದೆ. ಇಲ್ಲಿನ ನನ್ನ ಸಮಯವನ್ನು ತುಂಬಾ ಇಷ್ಟಪಟ್ಟಿದ್ದೇನೆ . ಇಲ್ಲಿ ನಾನು ಸುಮಾರು 10 ವರ್ಷಗಳ ಕಾಲ ಆಡಿದ್ದೇನೆ. ಎರಡು ಋತುಗಳಲ್ಲಿ ಸ್ವಲ್ಪ ವಿರಾಮ ಪಡೆದುಕೊಂಡಿದ್ದ ನನ್ನ ಟ್ರೋಫಿ ಕ್ಯಾಬಿನೆಟ್‌ಗೆ ಇದು ನಾಲ್ಕನೇಯದಾಗಿದೆ. ಇದು ನಿಜಕ್ಕೂ ಉತ್ತಮವಾಗಿದೆ," ಎಂದು ಡುಪ್ಲೆಸಿಸ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌