ಆ್ಯಪ್ನಗರ

'ವಿಶ್ವಕಪ್‌ನಲ್ಲೂ ಹೀಗೇ ಡೈವ್ ಹೊಡಿಬೇಕಿತ್ತು? ಕಹಿ ನೆನಪನ್ನು ಕೆದಕಿದ ಫ್ಯಾನ್ಸ್‌!

2019ರಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಎಂಎಸ್‌ ಧೋನಿ ರನ್‌ಔಟ್‌ ಆಗಿದ್ದು ಅಭಿಮಾನಿಗಳ ಹೃದಯವನ್ನೇ ಒಡೆದು ಹಾಕಿತ್ತು. ಈ ಘಟನೆಯಲ್ಲಿ ಫ್ಯಾನ್ಸ್‌ ಇದೀಗ ಮತ್ತೆ ಸ್ಮರಿಸಿದ್ದಾರೆ.

Vijaya Karnataka Web 20 Apr 2021, 6:48 pm

ಹೈಲೈಟ್ಸ್‌:

  • ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟಿ20 ಕ್ರಿಕೆಟ್ ಟೂರ್ನಿ.
  • ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ರನ್‌ಔಟ್‌ ತಪ್ಪಿಸಲು ಡೈವ್‌ ಹೊಡೆದ ಧೋನಿ.
  • 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಹೀಗೇಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web MS Dhoni in CSK vs RR Match IPL 2021
ಧೋನಿ ರನ್‌ಔಟ್‌ ನಿಂದ ಪಾರಾಗಲು ಯತ್ನಿಸಿದ ರೀತಿ (ಚಿತ್ರ: ಬಿಸಿಸಿಐ/ಐಪಿಎಲ್/ ಟ್ವಿಟರ್‌).
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌-ಬೈ ಹೇಳಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ 39 ವರ್ಷ ವಯಸ್ಸಿನಲ್ಲೂ ಅದ್ಭುತ ಫಿಟ್ನೆಸ್‌ ಕಾಯ್ದುಕೊಂಡಿದ್ದಾರೆ. 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಇದಕ್ಕೆ ಸಾಕ್ಷಿ ಸಿಕ್ಕಿದೆ.
ಐಪಿಎಲ್‌ 2021 ಟೂರ್ನಿಯ 12ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ಬ್ಯಾಟ್‌ ಮಾಡುವಾಗ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ರನ್‌ಔಟ್‌ ನಿಂದ ಪಾರಾಗಲು ಅದ್ಭುತ ಡೈವ್‌ ಮೂಲಕ ಕ್ರೀಸ್‌ಗೆ ಮರಳಿದ್ದರು. 39ರ ವಯಸ್ಸಿನಲ್ಲಿ ಹೀಗೆ ಗಾಳಿಯಲ್ಲಿ ಹಾರಿ ಕ್ರೀಸ್‌ ತಲುಪುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಆಟಗಾರ ಫಿಟ್ನೆಸ್‌ ಅತ್ಯಂತ ಪ್ರಮುಖವಾಗುತ್ತದೆ.

ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿತ್ತು. ತಂಡಕ್ಕೆ ದೊಡ್ಡ ಮೊತ್ತ ತಂದುಕೊಡುವ ಉದ್ದೇಶದಿಂದ ಹೊಡಿಬಡಿ ಆಟಗಾರ ಸ್ಯಾಮ್‌ ಕರ್ರನ್‌ ಅವರಿಗಿಂತಲೂ ಮೇಲೆ ಬಂದು ಎಂಎಸ್‌ ಎಸ್‌ ಧೋನಿ ಬ್ಯಾಟ್‌ ಮಾಡಿದ್ದರು. ಆದರೆ ಆರಂಭಿಕ 5 ಎಸೆತಗಳಲ್ಲಿ ಅವರಿಂದ ಯಾವುದೇ ರನ್‌ ಗಳಿಸಲು ಸಾಧ್ಯವಾಗಿರಲಿಲ್ಲ.

ಐಪಿಎಲ್ 2021 ಟೂರ್ನಿಯ ಅಂಕಪಟ್ಟಿ

ಇನಿಂಗ್ಸ್‌ನ 14ನೇ ಓವರ್‌ ಅದು ಲೆಗ್‌ ಸ್ಪಿನ್ನರ್‌ ರಾಹುಲ್‌ ತೆವಾಟಿಯಾ ಬೌಲಿಂಗ್‌ನಲ್ಲಿ ಕವರ್ಸ್‌ ಕಡೆಗೆ ಚೆಂಡನ್ನು ಚುಚ್ಚಿ ಒಂದು ರನ್‌ ಕದಿಯಲು ಧೋನಿ ಪ್ರಯತ್ನಿಸಿದ್ದರು. ಚೆಂಡು ನೇರವಾಗಿ ಫೀಲ್ಡರ್‌ ಕೈ ಸೇರಿದ್ದ ಕಾರಣ ನಾನ್‌ ಸ್ಟ್ರೈಕ್‌ನಲ್ಲಿದ್ದ ರವೀಂದ್ರ ಜಡೇಜಾ ರನ್‌ ತೆಗೆಯಲು ನಿರಾಕರಿಸಿದ್ದರು. ಕೂಡಲೇ ಸ್ಟ್ರೈಕ್‌ ಕ್ರೀಸ್‌ ಕಡೆಗೆ ಹಿಂದಿರುಗಿದ ಧೋನಿ ಡೈವ್‌ ಹೊಡೆದು ಗೆರೆ ದಾಟದೇ ಇದಿದ್ದರೆ ಶೂನ್ಯ ಸಂಪಾದನೆಯಲ್ಲಿ ರನ್‌ಔಟ್‌ ಆಗಿ ಪೆವಿಲಿಯನ್‌ ಸೇರುವಂತ್ತಾಗುತ್ತಿತ್ತು.

ಆದರೆ, ಟೆಲಿವಿಷನ್‌ ರೀ-ಪ್ಲೇಯಲ್ಲಿ ವಿಕೆಟ್‌ಕೀಪರ್‌ ಸಂಜು ಸ್ಯಾಮ್ಸನ್‌ ಮಿಂಚಿನ ವೇಗದಲ್ಲಿ ಬೇಲ್ಸ್‌ ಹಾರಿಸುವ ಮೊದಲೇ ಧೋನಿ ಗಾಳಿಯಲ್ಲಿ ಹಾರಿ ಕ್ರೀಸ್‌ ದಾಟಿರುವುದು ಸ್ಪಷ್ಟವಾಯಿತು. ಇದನ್ನು ಕಂಡ ನೆಟ್ಟಿಗರು 2 ವರ್ಷ ಹಿಂದೆ, ಅಂದರೆ 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ಕಹಿ ಘಟನೆಯೊಂದನ್ನು ಸ್ಮರಿಸಿದ್ದಾರೆ.

ಅಂದು ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಇನ್ನೇನು ಜಯದ ದಡ ಮುಟ್ಟಿಸುವರಿದ್ದ ಎಂಎಸ್‌ ಧೋನಿ ದುರದೃಷ್ಟವಶಾತ್‌ ರನ್‌ಔಟ್‌ ಆಗಿದ್ದರು. ಎರಡನೇ ರನ್‌ ಕದಿಯುವ ಪ್ರಯತ್ನದಲ್ಲಿದ್ದ ಧೋನಿಯನ್ನು ಮಾರ್ಟಿನ್‌ ಗಪ್ಟಿಲ್‌ ಅದ್ಭುತ ಥ್ರೋ ಮೂಲಕ ಡೈರೆಕ್ಟ್‌ ಹಿಟ್‌ ಹೊಡೆದು ರನ್‌ಔಟ್‌ ಮಾಡಿದ್ದರು. ಆದರೆ, ಧೋನಿ ಅಂದು ಕ್ರೀಸ್‌ ತಲುಪುವ ಸಲುವಾಗಿ ಡೈವ್‌ ಹೊಡೆದಿರಲಿಲ್ಲ. ಕೇವಲ ಒಂದೇ ಒಂದು ಇಂಚಿನ ಅಳತೆಯಲ್ಲಿ ರನ್‌ಔಟ್‌ ಆಗಿದ್ದರು. ಅಂದೇನಾದರೂ ಧೋನಿ ಇಂಥದ್ದೇ ಡೈವ್‌ ಹೊಡೆದಿದ್ದರೆ ಖಂಡಿತಾ ನಾಟ್‌ಔಟ್‌ ಆಗುತ್ತಿದ್ದರು ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾಗಳಲ್ಲಿ ಇದೀಗ ಚರ್ಚೆ ಆರಂಭಿಸಿದ್ದಾರೆ.

ಸ್ಪಿನ್‌ ಬಲೆಯಲ್ಲಿ ರಾಯಲ್ಸ್‌ನ ಸೆರೆ ಹಿಡಿದ ಸೂಪರ್‌ ಕಿಂಗ್ಸ್‌!

ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಎದುರು 18 ರನ್‌ಗಳ ಸೋಲನುಭವಿಸಿತು. ಅದುವೇ ಭಾರತ ತಂಡದ ಪರ ಧೋನಿ ಆಡಿದ ಕಟ್ಟ ಕಡೆಯ ಪಂದ್ಯ. ಆ ನಂತ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಂಎಸ್‌ಡಿ, 2020ರ ಐಪಿಎಲ್‌ ಆರಂಭಕ್ಕೂ ಮುನ್ನ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಇನ್ನು ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್ 45 ರನ್‌ಗಳ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಪಂದ್ಯದಲ್ಲಿ ಧೋನಿ 17 ಎಸೆತಗಳಲ್ಲಿ 2 ಫೋರ್‌ ಒಳಗೊಂಡ 18 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ್ದರು.

ಧೋನಿ ಡೈವ್‌ ಬಗ್ಗೆ ಟ್ವಿಟರ್‌ನಲ್ಲಿ ಆದ ಚರ್ಚೆ ಹೀಗಿದೆ


ತಾಲಾ.. 2 ವರ್ಷಗಳ ಹಿಂದೆ ಈ ಡೈವ್‌ ಎಲ್ಲಿ ಹೋಗಿತ್ತು?


"ನಾನು ಡೈವ್‌ ಹೊಡೆಯಲಿಲ್ಲ ಏಕೆ? ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಂಡಿದ್ದೆ" ಎಂದು ಧೋನಿ 2019ರ ವಿಶ್ವಕಪ್ ಸೆಮಿಫೈನಲ್‌ ಬಗ್ಗೆ ಹೇಳಿದ್ದರು. ಇಂದು ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಂಥದ್ದೇ ತಪ್ಪಾಗದಂತೆ ಎಚ್ಚರ ವಹಿಸಿದ್ದಾರೆ. ತಪ್ಪುಗಳಿಂದ ಪಾಠ ಕಲಿಯುವುದೆಂದರೆ ಇದೇ. ಆದರೆ, ಈ ಡೈವ್‌ ಆ ದಿನವೂ ಬರಬೇಕಿತ್ತು ಎಂಬುದಷ್ಟೇ ಬಯಕೆ.


ಧೋನಿ ಡೈವ್‌ ಕಂಡು ಹಲವು ಕಹಿ ನೆನಪುಗಳು ಕಾಡುತ್ತಿವೆ. ಮಾಹಿ ಅಂದೇಕೆ ಈ ಡೈವ್ ಹೊಡೆಯಲಿಲ್ಲ.


ಈ ಡೈವ್‌ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಬಂದಿದ್ದರೆ ನಾವು ಚಾಂಪಿಯನ್ಸ್‌ ಆಗುತ್ತಿದ್ದೆವು. ಇದು ಬೇರೆಯದ್ದೇ ಲೆವೆಲ್‌ನ ಡೈವ್‌ ಆಗಿದೆ ತಲಾ.


ಧೋನಿ ನಿಜಕ್ಕೂ ಡೈವ್ ಹೊಡೆದರೆ? ವಿಶ್ವಕಪ್‌ ಸೆಮಿಫೈನಲ್‌ನಿಂದ ಕಲಿತ ಪಾಠ ಇದೇ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌