ಮುಂಬೈ: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಕ್ಔಟ್ ರೇಸ್ನಿಂದ ಹೊರಬಿದ್ದ ಎರಡನೇ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಐಪಿಎಲ್ 2023 ಟೂರ್ನಿಗೆ ಶುಭ ಸುದ್ದಿ ಸಿಕ್ಕಿದೆ. ನಿವೃತ್ತಿ ಸದ್ಯಕ್ಕಿಲ್ಲ ಎಂದಿರುವ ಎಂಎಸ್ ಧೋನಿ, ಚೆನ್ನೈನಲ್ಲಿ ತವರಿನ ಪ್ರೇಕ್ಷಕರ ಎದುರು ವಿದಾಯ ಹೇಳುವ ಬಯಕೆ ಹೊರಹಾಕಿದ್ದಾರೆ. ಐಪಿಎಲ್ 2022 ಟೂರ್ನಿಯ 68ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಳಿಕ ಮಾತನಾಡಿದ ಎಂಎಸ್ ಧೋನಿ, ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ. "ಪ್ರತಿ ವರ್ಷ ಬೆಂಬಲಿಸಿ ಪ್ರೋತ್ಸಾಹಿಸುತ್ತಾ ಬಂದಿರುವ ಅಭಿಮಾನಿಗಳಿಗೆ ಧನ್ಯವಾದಗಳು," ಎಂದು ಹೇಳಿದ್ದಾರೆ.
"ಖಂಡಿತಾ ಆಡುತ್ತೇನೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಸಿಎಸ್ಕೆ ಅಭಿಮಾನಿಗಳ ಎದುರು ಆಡದೇ ಹೋದರೆ ಖಂಡಿತಾ ಒಳ್ಳೆಯದ್ದಲ್ಲ. ನನಗೆ ಅಲ್ಲಿ ಅತಿ ಹೆಚ್ಚು ಪ್ರೀತಿ ಸಿಕ್ಕಿದೆ. ಅಲ್ಲಿ ಆಡಿದರೆ, ಅವರೆಲ್ಲರಿಗೂ ಧನ್ಯವಾದ ಹೇಳಿದಂತೆ. ಇದು ನನ್ನ ಕೊನೆಯ ವರ್ಷ ಹೌದೋ ಅಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ," ಎಂದು ಟಾಸ್ ಬಳಿಕ ಇಯಾನ್ ಬಿಷಪ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಐಪಿಎಲ್ 2022 ಟೂರ್ನಿಯ ಆರಂಭಕ್ಕೆ ಇನ್ನು 48 ಗಂಟೆಗಳು ಬಾಕಿ ಇರುವಾಗ ಸಿಎಸ್ಕೆ ನಾಯಕತ್ವವನ್ನು ಆಲ್ರೌಂಡರ್ ರವೀಂದ್ರ ಜಡೇಜಾಗೆ ನೀಡಲಾಯಿತು. ಆದರೆ, ಜಡೇಜಾ ನಾಯಕತ್ವದಲ್ಲಿ ಸಿಎಸ್ಕೆ ಆಡಿದ ಮೊದಲ 8 ಪಂದ್ಯಗಳಿಂದ ಕೇವಲ 2 ಜಯ ಮಾತ್ರವೇ ದಾಖಲಿಸಲು ಶಕ್ತವಾಯಿತು. ಪ್ಲೇ-ಆಫ್ಸ್ ಕದ ತಂಡಕ್ಕೆ ಬಹುತೇಕ ಮುಚ್ಚಿದ್ದ ಸಂದರ್ಭದಲ್ಲಿ ಜಡೇಜಾ ನಾಯತ್ವವನ್ನು ಮರಳಿ ಧೋನಿಗೆ ವಹಿಸಿದರು. ಇದರಿಂದ ತಂಡಕ್ಕೆ ಹೆಚ್ಚೇನು ಅನುಕೂಲವಾಗಲಿಲ್ಲ. ಧೋನಿ ನಾಯಕತ್ವದಲ್ಲೂ ಸಿಎಸ್ಕೆ 7 ಪಂದ್ಯಗಳಲ್ಲಿ 2 ಜಯ ದಾಖಲಿಸಲಷ್ಟೇ ಶಕ್ತವಾಯಿತು.
ಧೋನಿಯೇ ಕ್ಯಾಪ್ಟನ್ ಆಗಿದ್ದರೂ ಸಿಎಸ್ಕೆ ಹಣೇಬರ ಬದಲಾಗುತ್ತಿರಲಿಲ್ಲ ಎಂದ ಭಜ್ಜಿ!
ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ರವೀಂದ್ರ ಜಡೇಜಾ ಅವರನ್ನು 16 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಉಳಿಸಿಕೊಂಡಿತ್ತು. ನಂತರ ಎಂಎಸ್ ಧೋನಿ (12 ಕೋಟಿ ರೂ.), ಋತುರಾಜ್ ಗಾಯಕ್ವಾಡ್ (8 ಕೋಟಿ ರೂ.) ಮತ್ತು ಮೊಯೀನ್ ಅಲಿ ಅವರನ್ನು ತನ್ನಲ್ಲೇ ಕಾಯ್ದುಕೊಂಡಿತು.
ಸವಾಲಿನ ಮೊತ್ತ ಗಳಿಸಿದ ಸಿಎಸ್ಕೆ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಸವಾಲಿನ ಮೊತ್ತ ದಾಖಲಿಸಿತು. ಆರಂಭಿಕ ನಾಲ್ಕು ವಿಕೆಟ್ಗಳು ಉದುರಿ ಹೋದರೂ ಅನುಭವಿ ಬ್ಯಾಟರ್ ಮೊಯೀನ್ ಅಲಿ ಅವರ ಏಕಾಂಗಿ ಹೋರಾಟದ ಫಲವಾಗಿ ಸಿಎಸ್ಕೆ 20 ಓವರ್ಗಳಲ್ಲಿ 6 ವಿಕೆಟ್ಗೆ 150 ರನ್ಗಳನ್ನು ದಾಖಲಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿ 19 ಎಸೆಸತಗಳಲ್ಲೇ ಅರ್ಧಶತಕ ಪೂರೈಸಿದಿ ಮೊಯೀನ್ ಅಲಿ, ಅಂತಿಮವಾಗಿ 57 ಎಸೆತಗಳಲ್ಲಿ 93 ರನ್ ಸಿಡಿಸಿ 20ನೇ ಓವರ್ನಲ್ಲಿ ಔಟಾದರು. 7 ರನ್ಗಳ ಅಂತರದಲ್ಲಿ ಅವರ ಚೊಚ್ಚಲ ಐಪಿಎಲ್ ಶತಕ ಕೈ ತಪ್ಪಿಹೋಯಿತು. ಅಲಿಗೆ ಉತ್ತಮ ಸಾಥ್ ಕೊಟ್ಟ ಎಂಎಸ್ ಧೋನಿ, 28 ಎಸೆತಗಳಲ್ಲಿ 26 ರನ್ಗಳ ಕೊಡುಗೆ ಕೊಟ್ಟರು.
ಸಿಎಸ್ಕೆ ತೆಗೆದುಕೊಂಡ ಕಳಪೆ ನಿರ್ಧಾರವನ್ನು ಕಟುವಾಗಿ ಟೀಕಿಸಿದ ವೀರೇಂದ್ರ ಸೆಹ್ವಾಗ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿವರ
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಶಿವಂ ದುಬೇ, ಎನ್ ಜಗದೀಸನ್, ಎಂಎಸ್ ಧೋನಿ (ವಿಕೆಟ್ಕೀಪರ್/ ನಾಯಕ), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮತೀಶ ಪತಿರಣ, ಮುಖೇಶ್ ಚೌಧರಿ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಕ್ರಿಸ್ ಜಾರ್ಡನ್, ಡ್ವೇನ್ ಪ್ರಿಟೋರಿಯಸ್, ತುಷಾರ್ ದೇಶಪಾಂಡೆ, ಹರಿ ನಿಶಾಂತ್, ಸುಭ್ರಾಂಶು ಸೇನಾಪತಿ, ಕೆ.ಎಂ ಆಸಿಫ್, ರಾಜವರ್ಧನ್ ಹಂಗಾರ್ಗೇಕರ್, ಮಹೇಶ್ ತೀಕ್ಷಣ, ಭಗತ್ ವರ್ಮಾ.
"ಖಂಡಿತಾ ಆಡುತ್ತೇನೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಸಿಎಸ್ಕೆ ಅಭಿಮಾನಿಗಳ ಎದುರು ಆಡದೇ ಹೋದರೆ ಖಂಡಿತಾ ಒಳ್ಳೆಯದ್ದಲ್ಲ. ನನಗೆ ಅಲ್ಲಿ ಅತಿ ಹೆಚ್ಚು ಪ್ರೀತಿ ಸಿಕ್ಕಿದೆ. ಅಲ್ಲಿ ಆಡಿದರೆ, ಅವರೆಲ್ಲರಿಗೂ ಧನ್ಯವಾದ ಹೇಳಿದಂತೆ. ಇದು ನನ್ನ ಕೊನೆಯ ವರ್ಷ ಹೌದೋ ಅಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ," ಎಂದು ಟಾಸ್ ಬಳಿಕ ಇಯಾನ್ ಬಿಷಪ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಐಪಿಎಲ್ 2022 ಟೂರ್ನಿಯ ಆರಂಭಕ್ಕೆ ಇನ್ನು 48 ಗಂಟೆಗಳು ಬಾಕಿ ಇರುವಾಗ ಸಿಎಸ್ಕೆ ನಾಯಕತ್ವವನ್ನು ಆಲ್ರೌಂಡರ್ ರವೀಂದ್ರ ಜಡೇಜಾಗೆ ನೀಡಲಾಯಿತು. ಆದರೆ, ಜಡೇಜಾ ನಾಯಕತ್ವದಲ್ಲಿ ಸಿಎಸ್ಕೆ ಆಡಿದ ಮೊದಲ 8 ಪಂದ್ಯಗಳಿಂದ ಕೇವಲ 2 ಜಯ ಮಾತ್ರವೇ ದಾಖಲಿಸಲು ಶಕ್ತವಾಯಿತು. ಪ್ಲೇ-ಆಫ್ಸ್ ಕದ ತಂಡಕ್ಕೆ ಬಹುತೇಕ ಮುಚ್ಚಿದ್ದ ಸಂದರ್ಭದಲ್ಲಿ ಜಡೇಜಾ ನಾಯತ್ವವನ್ನು ಮರಳಿ ಧೋನಿಗೆ ವಹಿಸಿದರು. ಇದರಿಂದ ತಂಡಕ್ಕೆ ಹೆಚ್ಚೇನು ಅನುಕೂಲವಾಗಲಿಲ್ಲ. ಧೋನಿ ನಾಯಕತ್ವದಲ್ಲೂ ಸಿಎಸ್ಕೆ 7 ಪಂದ್ಯಗಳಲ್ಲಿ 2 ಜಯ ದಾಖಲಿಸಲಷ್ಟೇ ಶಕ್ತವಾಯಿತು.
ಧೋನಿಯೇ ಕ್ಯಾಪ್ಟನ್ ಆಗಿದ್ದರೂ ಸಿಎಸ್ಕೆ ಹಣೇಬರ ಬದಲಾಗುತ್ತಿರಲಿಲ್ಲ ಎಂದ ಭಜ್ಜಿ!
ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ರವೀಂದ್ರ ಜಡೇಜಾ ಅವರನ್ನು 16 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಉಳಿಸಿಕೊಂಡಿತ್ತು. ನಂತರ ಎಂಎಸ್ ಧೋನಿ (12 ಕೋಟಿ ರೂ.), ಋತುರಾಜ್ ಗಾಯಕ್ವಾಡ್ (8 ಕೋಟಿ ರೂ.) ಮತ್ತು ಮೊಯೀನ್ ಅಲಿ ಅವರನ್ನು ತನ್ನಲ್ಲೇ ಕಾಯ್ದುಕೊಂಡಿತು.
ಸವಾಲಿನ ಮೊತ್ತ ಗಳಿಸಿದ ಸಿಎಸ್ಕೆ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಸವಾಲಿನ ಮೊತ್ತ ದಾಖಲಿಸಿತು. ಆರಂಭಿಕ ನಾಲ್ಕು ವಿಕೆಟ್ಗಳು ಉದುರಿ ಹೋದರೂ ಅನುಭವಿ ಬ್ಯಾಟರ್ ಮೊಯೀನ್ ಅಲಿ ಅವರ ಏಕಾಂಗಿ ಹೋರಾಟದ ಫಲವಾಗಿ ಸಿಎಸ್ಕೆ 20 ಓವರ್ಗಳಲ್ಲಿ 6 ವಿಕೆಟ್ಗೆ 150 ರನ್ಗಳನ್ನು ದಾಖಲಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿ 19 ಎಸೆಸತಗಳಲ್ಲೇ ಅರ್ಧಶತಕ ಪೂರೈಸಿದಿ ಮೊಯೀನ್ ಅಲಿ, ಅಂತಿಮವಾಗಿ 57 ಎಸೆತಗಳಲ್ಲಿ 93 ರನ್ ಸಿಡಿಸಿ 20ನೇ ಓವರ್ನಲ್ಲಿ ಔಟಾದರು. 7 ರನ್ಗಳ ಅಂತರದಲ್ಲಿ ಅವರ ಚೊಚ್ಚಲ ಐಪಿಎಲ್ ಶತಕ ಕೈ ತಪ್ಪಿಹೋಯಿತು. ಅಲಿಗೆ ಉತ್ತಮ ಸಾಥ್ ಕೊಟ್ಟ ಎಂಎಸ್ ಧೋನಿ, 28 ಎಸೆತಗಳಲ್ಲಿ 26 ರನ್ಗಳ ಕೊಡುಗೆ ಕೊಟ್ಟರು.
ಸಿಎಸ್ಕೆ ತೆಗೆದುಕೊಂಡ ಕಳಪೆ ನಿರ್ಧಾರವನ್ನು ಕಟುವಾಗಿ ಟೀಕಿಸಿದ ವೀರೇಂದ್ರ ಸೆಹ್ವಾಗ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿವರ
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಶಿವಂ ದುಬೇ, ಎನ್ ಜಗದೀಸನ್, ಎಂಎಸ್ ಧೋನಿ (ವಿಕೆಟ್ಕೀಪರ್/ ನಾಯಕ), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮತೀಶ ಪತಿರಣ, ಮುಖೇಶ್ ಚೌಧರಿ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಕ್ರಿಸ್ ಜಾರ್ಡನ್, ಡ್ವೇನ್ ಪ್ರಿಟೋರಿಯಸ್, ತುಷಾರ್ ದೇಶಪಾಂಡೆ, ಹರಿ ನಿಶಾಂತ್, ಸುಭ್ರಾಂಶು ಸೇನಾಪತಿ, ಕೆ.ಎಂ ಆಸಿಫ್, ರಾಜವರ್ಧನ್ ಹಂಗಾರ್ಗೇಕರ್, ಮಹೇಶ್ ತೀಕ್ಷಣ, ಭಗತ್ ವರ್ಮಾ.