ಆ್ಯಪ್ನಗರ

ಎರಡು ಅತ್ಯುತ್ತಮ ತಂಡಗಳ ಮುಖಾಮುಖಿ: ಹರ್ಷ ಭೋಗ್ಲೆ

ಕಳೆದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿರುವ ಚೆನ್ನೈ ಗೆಲುವಿಗಾಗಿ ಹಪಹಪಿಸುತ್ತಿದೆ. ಇತ್ತಂಡಗಳಲ್ಲಿ ಕೆಲವು ಮ್ಯಾಚ್‌ ವಿನ್ನರ್‌ಗಳಿದ್ದಾರೆ. ಐಪಿಎಲ್‌ನಲ್ಲಿ ಇತ್ತೀಚಿನ ಕೆಲವು ಪಂದ್ಯಗಳವರೆಗೂ ಸಿಎಸ್‌ಕೆ ಪ್ರಬಲ ತಂಡವಾಗಿತ್ತು.

Agencies 7 May 2019, 12:35 pm
ಮುಂಬಯಿ: ಮಂಗಳವಾರ ಪ್ರಸಕ್ತ ಸಾಲಿನ ಐಪಿಎಲ್ ಸರಣಿಯ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿದೆ ಎಂದು ವೀಕ್ಷ ಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.
Vijaya Karnataka Web CSK MI


ಐಪಿಎಲ್‌ ಇತಿಹಾಸದಲ್ಲಿ ಎರಡು ಅತ್ಯುತ್ತಮ ತಂಡಗಳು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಇವು ಶ್ರೇಷ್ಠ ತಂಡಗಳೆಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ದೇಶದ ವಿವಿಧೆಡೆ 14 ಪಂದ್ಯಗಳನ್ನಾಡಿದ ನಂತರ ಎರಡೂ ತಂಡಗಳು ಸಾಕಷ್ಟು ದಣಿದಿವೆ. ಇದೀಗ ಬೇರೆ ಬೇರೆ ದಿಕ್ಕುಗಳಿಂದ ಸುಡುಸುಡು ಬಿಸಿಲಿನ ನಾಡು ಚೆನ್ನೈಗೆ ಆಗಮಿಸಿವೆ.

ಕಳೆದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿರುವ ಚೆನ್ನೈ ಗೆಲುವಿಗಾಗಿ ಹಪಹಪಿಸುತ್ತಿದೆ. ಇತ್ತಂಡಗಳಲ್ಲಿ ಕೆಲವು ಮ್ಯಾಚ್‌ ವಿನ್ನರ್‌ಗಳಿದ್ದಾರೆ. ಐಪಿಎಲ್‌ನಲ್ಲಿ ಇತ್ತೀಚಿನ ಕೆಲವು ಪಂದ್ಯಗಳವರೆಗೂ ಸಿಎಸ್‌ಕೆ ಪ್ರಬಲ ತಂಡವಾಗಿತ್ತು.

ಈ ಬಗ್ಗೆ ಹಲವು ಬಾರಿ ಹೇಳಿದ್ದೇನೆ. ಧೋನಿ ಸಾರಥ್ಯದಲ್ಲಿ ಸಿಎಸ್‌ಕೆ ಉತ್ತಮ ಲಹರಿಯಲ್ಲಿದೆ. ಡು ಪ್ಲೆಸಿಸ್‌ ಫಾರ್ಮ್‌ನಲ್ಲಿರುವುದು ತಂಡದ ಪ್ರಮುಖ ಅಸ್ತ್ರ ಎನಿಸಿದೆ. ಹಾಗಂತ ರೋಹಿತ್‌ ಶರ್ಮಾ ನೇತೃತ್ವದ ಮುಂಬಯಿ ಇಂಡಿಯನ್ಸ್‌ ತಂಡವನ್ನು ಕಡೆಗಣಿಸುವಂತಿಲ್ಲ. ಸ್ವಲ್ಪ ಎಡೆ ದೊರೆತರೂ ಪ್ರವಾಹೋಪಾದಿಯಲ್ಲಿ ನುಗ್ಗಿ ಬರುವ ಸಾಮರ್ಥ್ಯ‌ ಆ ತಂಡಕ್ಕಿದೆ ಎನ್ನುವುದು ಭೋಗ್ಲೆ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌