ಆ್ಯಪ್ನಗರ

ಆರ್‌ಸಿಬಿಗೆ ನಿರ್ಣಾಯಕವಾಗಿದೆ ಕೆಕೆಆರ್‌ ವಿರುದ್ಧದ ಪಂದ್ಯ

ಟೂರ್ನಿಯಲ್ಲಿ ಇವಿನ್ನೂ ಆರಂಭದ ದಿನಗಳು. ಆದರೂ ಕೆಕೆಆರ್‌ ವಿರುದ್ಧದ ಪಂದ್ಯ ಆರ್‌ಸಿಬಿಗೆ ಅತ್ಯಂತ ಮುಖ್ಯವಾದುದು.

Vijaya Karnataka Web 5 Apr 2019, 5:10 pm
ಬೆಂಗಳೂರು: ಕೋಲ್ಕತ್ತಾ ವಿರುದ್ಧ ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಪಂದ್ಯ ಆರ್‌ಸಿಬಿಗೆ ನಿರ್ಣಾಯಕವಾಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಕೆ.ಶ್ರೀಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web rcb


ಮಾದರಿ ಯಾವುದೇ ಇದ್ದರೂ, ತಂಡದಲ್ಲಿ ಒಬ್ಬ ಉತ್ತಮ ಗುಣಮಟ್ಟದ ಆಲ್‌ರೌಂಡರ್‌ನ ಮಹತ್ವವೇನು ಎಂಬುದಕ್ಕೆ ಬುಧವಾರ ಹಾರ್ದಿಕ್‌ ಪಾಂಡ್ಯರ ಭರ್ಜರಿ ಬ್ಯಾಟಿಂಗ್‌ ಸ್ಪಷ್ಟ ನಿದರ್ಶನವಾಯಿತು. ಆ ಸಂದರ್ಭದಲ್ಲಿ ಹಾರ್ದಿಕ್‌ರಲ್ಲಿದ್ದ ಆತ್ಮವಿಶ್ವಾಸ ಟೀಮ್‌ ಇಂಡಿಯಾಕ್ಕೂ ಶುಭ ಶಕುನವೇ ಆಗಿದೆ. ಆತ ಇದೇ ಲಹರಿ ಕಾಯ್ದುಕೊಂಡರೆ ವಿಶ್ವಕಪ್‌ನಲ್ಲಿ ಭಾರತದ ಅವಕಾಶಗಳ ಬಾಗಿಲು ತೆರೆದಂತೆಯೇ.

ಟೂರ್ನಿಯಲ್ಲಿ ಇವಿನ್ನೂ ಆರಂಭದ ದಿನಗಳು. ಆದರೂ ಕೆಕೆಆರ್‌ ವಿರುದ್ಧದ ಪಂದ್ಯ ಆರ್‌ಸಿಬಿಗೆ ಅತ್ಯಂತ ಮುಖ್ಯವಾದುದು. ನಾಲ್ಕು ಪಂದ್ಯಗಳ ಬಳಿಕವೂ ಅಂಕದ ಖಾತೆ ತೆರೆಯದ ಏಕೈಕ ತಂಡ ಎನಿಸಿಕೊಂಡಿರುವ ವಿರಾಟ್‌ ಕೊಹ್ಲಿ ಬಳಗ ಕೆಕೆಆರ್‌ನಂಥ ಅಪಾಯಕಾರಿ ತಂಡದ ವಿರುದ್ಧ ಆಡುವಾಗ ಸೂಕ್ತ ಸಂಯೋಜನೆಯ ಬಗ್ಗೆ ಎಚ್ಚರ ವಹಿಸಲೇಬೇಕಿದೆ.

ತಂಡ ಕೊಹ್ಲಿ ಮತ್ತು ಎಬಿ ಡಿ'ವಿಲಿಯರ್ಸ್‌ ಇಬ್ಬರ ಮೇಲೆಯೇ ಅವಲಂಬಿತವಾಗಬಾರದು. ಅಂತೆಯೇ ಬೌಲಿಂಗ್‌ ವಿಭಾಗ ಸದಾ ಚಹಲ್‌ವೊಬ್ಬರನ್ನೇ ನೆಚ್ಚಿಕೊಳ್ಳುವ ಬದಲು ಸಂಘಟಿತ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌