ಆ್ಯಪ್ನಗರ

ಡಿ ಕಾಕ್ ಬೆನ್ನು ತಟ್ಟಿ ಹೃದಯ ಗೆದ್ದ ಬುಮ್ರಾ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಫೈನಲ್ ಪಂದ್ಯದಲ್ಲಿ ಉತ್ತಮ ನಡವಳಿಕೆ ತೋರುವ ಮೂಲಕ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

Vijaya Karnataka Web 14 May 2019, 4:28 pm
ಹೈದರಾಬಾದ್: ಐಪಿಎಲ್ ಫೈನಲ್‌ನ ಅತಿ ಒತ್ತಡದ ಸನ್ನಿವೇಶ. ಸಾಂಪ್ರಾದಾಯಿಕ ಬದ್ಧ ವೈರಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪೈಕಿ ಗೆಲುವು ಯಾರ ಪಾಲಿಗೆ ಒಲಿಯಲಿದೆ ಎಂಬುದನ್ನು ಊಹಿಸಲೇ ಸಾಧ್ಯವಿಲ್ಲ.

ಅಂತಹ ಅತಿ ಒತ್ತಡದ ಪರಿಸ್ಥಿತಿಯಲ್ಲಿ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಚೆಂಡನ್ನು ಕೈಚೆಲ್ಲಿದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಇನ್ನೇನು ಟ್ರೋಫಿಯನ್ನೇ ಕೈಚೆಲ್ಲಿದ್ದರು ಎಂದು ಅಂದುಕೊಳ್ಳಲಾಗಿತ್ತು.

ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಬೌಲರ್‌ಗಳು ನರ್ವಸ್ ಆಗಿ ವಿಕೆಟ್ ಕೀಪರ್‌ರತ್ತ ತಮ್ಮ ಆಕ್ರೋಶವನ್ನು ತೋಡಿಕೊಳ್ಳುತ್ತಾರೆ. ಆದರೆ ಜಸ್ಪ್ರೀತ್ ಬುಮ್ರಾ ನೀಡಿರುವ ಪ್ರತಿಕ್ರಿಯೆಯು ಇಡೀ ಕ್ರಿಕೆಟ್ ಜಗತ್ತಿನ ಹೃದಯ ಗೆಲ್ಲಲು ಕಾರಣವಾಗಿದೆ.

ಚೆಂಡು ಕೈಬಿಟ್ಟ ಬೇಸರದಲ್ಲಿ ದಿಗ್ಭ್ರಮೆಯಾಗಿ ನಿಂತಿದ್ದ ಡಿ ಕಾಕ್ ಬಳಿ ತೆರಳಿದ ಬುಮ್ರಾ ತಮ್ಮ ಸಹ ಆಟಗಾರನನ್ನು ಅಪ್ಪಿಕೊಂಡು ಬೆನ್ನು ತಟ್ಟಿದರು. ಅಲ್ಲದೆ ಕ್ರಿಕೆಟ್‌ನಲ್ಲಿ ಇವೆಲ್ಲ ಸಾಮಾನ್ಯ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಪ್ರಸ್ತುತ ಬುಮ್ರಾ ತೋರಿರುವ ಪಕ್ವತೆಯನ್ನು ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಮೆಚ್ಚಿದ್ದಾರೆ. ಅಂತಿಮವಾಗಿ ಕೇವಲ ಒಂದು ರನ್ ಅಂತರದಿಂದ ಫೈನಲ್ ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯ ನಾಲ್ಕನೇ ಬಾರಿಗೆ ಕಿರೀಟವನ್ನು ಎತ್ತಿ ಹಿಡಿದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌