ಆ್ಯಪ್ನಗರ

ರಸೆಲ್‌ಗೆ ಮಾರ್ಗದರ್ಶನದ ಅಗತ್ಯವಿದೆ: ಗೌತಮ್ ಗಂಭೀರ್‌

ಸುದ್ದಿಗೋಷ್ಠಿಯಲ್ಲಿ ಅಂತಹ ಹೇಳಿಕೆಗಳನ್ನು ನೀಡಬಾರದು. ಈ ವಿಷಯದಲ್ಲಿ ಕೆಕೆಆರ್‌ ಮ್ಯಾನೇಜ್ಮೆಂಟ್‌ ರಸೆಲ್‌ಗೆ ತಿಳಿಹೇಳುವ ಅಗತ್ಯವಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Agencies 3 May 2019, 10:32 am
ಬೆಂಗಳೂರು: ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ರಸೆಲ್‌ಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web Russel


ಕೆಕೆಆರ್‌ ವಾತಾವರಣ ಕಲುಷಿತಗೊಂಡಿದೆ ಎಂಬ ರಸೆಲ್‌ ಹೇಳಿಕೆ ಬೇಸರ ಉಂಟುಮಾಡಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದ್ದೆ. ಆದರೆ, 'ರಸೆಲ್‌ ಹೇಳಿಕೆಯನ್ನು ನೀನು ತಪ್ಪಾಗಿ ಅರ್ಥೈಸಿಕೊಂಡಿರುವೆ' ಎಂದು ಪತ್ರಕರ್ತ ಮಿತ್ರರೊಬ್ಬರು ಸಂದೇಶ ರವಾನಿಸಿದ್ದಾರೆ.

ಹೌದು; ಆತ ಹೇಳಿದ್ದು ಖರೆ. ಸತತ ಸೋಲುಗಳ ಬಳಿಕ ರಸೆಲ್‌ ತಂಡದ ವಾತಾವರಣ ನಿರಾಶಾದಾಯಕವಾಗಿದೆ ಎಂದು ಹೇಳಿದ್ದರು. ಅವರು ಬಳಸಿದ ಪದಗಳು, ಕೆಕೆಆರ್‌ನಲ್ಲಿ ಒಡಕಿದೆ ಎಂದು ನಾನು ತಿಳಿದುಕೊಳ್ಳುವುದಕ್ಕೆ ಹೇತುವಾಗಿರಬಹುದು. ಆದರೆ, ತಂಡದಲ್ಲಿ ಗೆಲುವಿನ ತುಡಿತವಿಲ್ಲವೆಂದೂ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆಯೆಂದೂ ಆತ ಹೇಳಿದ್ದಾರೆ.

ನಾನು ದಿನೇಶ್‌ ಕಾರ್ತಿಕ್‌ ಆಗಿದ್ದರೆ ನನಗೆ ಖಂಡಿತವಾಗಿಯೂ ಬೇಸರವಾಗುತ್ತಿತ್ತು. ಯಾರೂ ಸೋಲಬಯಸುವುದಿಲ್ಲ. ಯಾರೂ ಕಳಪೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸುದ್ದಿಗೋಷ್ಠಿಯಲ್ಲಿ ಅಂತಹ ಹೇಳಿಕೆಗಳನ್ನು ನೀಡಬಾರದು. ಈ ವಿಷಯದಲ್ಲಿ ಕೆಕೆಆರ್‌ ಮ್ಯಾನೇಜ್ಮೆಂಟ್‌ ರಸೆಲ್‌ಗೆ ತಿಳಿಹೇಳುವ ಅಗತ್ಯವಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌