ಆ್ಯಪ್ನಗರ

ಜೆರ್ಸಿ ಬದಲಾಯಿಸಿ ಪರಸ್ಪರ ಗೌರವ ಸೂಚಿಸಿದ ರಾಹುಲ್-ಪಾಂಡ್ಯ

ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬಯಿ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಡುವಣ ರೋಚಕ ಕದನದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪರಸ್ಪರ ಜೆರ್ಸಿ ಎಕ್ಸ್‌ಚೇಂಜ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka Web 17 May 2018, 3:40 pm
ಮುಂಬಯಿ: ಸಾಮಾನ್ಯವಾಗಿ ಫುಟ್ಬಾಲ್ ಕ್ರೀಡೆಯಲ್ಲಿ ಇಂತಹ ದೃಶ್ಯಗಳ ದರ್ಶನವಾಗುತ್ತದೆ. ವಿಜೇತ ತಂಡದ ಆಟಗಾರರು ಪರಾಜಿತ ಆಟಗಾರರ ಜೆರ್ಸಿಯನ್ನು ಪರಸ್ಪರ ಬದಲಾಯಿಸಿಕೊಂಡು ಗೌರವ ಸೂಚಿಸುತ್ತಾರೆ.
Vijaya Karnataka Web kl-rahul-hardik-pandya


ಇದೇ ರೀತಿಯ ದೃಷ್ಟಾಂತ ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲೂ ಕಾಣಿಸಿಕೊಂಡಿದೆ.

ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬಯಿ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಡುವಣ ರೋಚಕ ಕದನದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪರಸ್ಪರ ಜೆರ್ಸಿ ಎಕ್ಸ್‌ಚೇಂಜ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಟೀಮ್ ಇಂಡಿಯಾ ಆಟಗಾರರಾಗಿರುವ ರಾಹುಲ್ ಹಾಗೂ ಪಾಂಡ್ಯ ಉತ್ತಮ ಗೆಳೆತನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಐಪಿಎಲ್‌ನಲ್ಲೂ ತಮ್ಮ ತಮ್ಮ ತಂಡಗಳ ಗೆಲುವಿಗಾಗಿ ಹೋರಾಡುತ್ತಿದ್ದರೂ ಪಂದ್ಯದ ಬಳಿಕ ಮತ್ತೆ ಒಂದಾಗಿದ್ದಾರೆ.

ಪಂಜಾಬ್ ವಿರುದ್ಧ 3 ರನ್ ಅಂತರದ ರೋಚಕ ಗೆಲುವು ದಾಖಲಿಸಿದ ಮುಂಬಯಿ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಕಿಂಗ್ಸ್ ಪರ ಏಕಾಂಕಿ ಹೋರಾಟವನ್ನು ನೀಡಿದ್ದ ರಾಹುಲ್ 60 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 94 ರನ್ ಗಳಿಸಿದ್ದರು.

ಪಂದ್ಯದ ಬಳಿಕ ರಾಹುಲ್ ತುಂಬಾನೇ ನಿರಾಸೆಗೊಂಡಿತ್ತು. ಆದರೆ ವಿರುದ್ಧ ತಂಡದಲ್ಲಿ ಆಡುತ್ತಿರುವ ತಮ್ಮ ಗೆಳೆಯ ಹಾರ್ದಿಕ್ ಪಾಂಡ್ಯ ಅವರ ಬಳಿ ತೆರಳಿ ತೊಡೆ ತಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌