ಆ್ಯಪ್ನಗರ

ವಿಶ್ವಕಪ್ ಮಿಸ್ ಮಾಡಲು ಬಯಸುವುದಿಲ್ಲ: ಕೊಹ್ಲಿ

ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯನ್ನು ಯಾರೂ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಕೆಲಸದೊತ್ತಡವನ್ನು ನಿಭಾಯಿಸುವುದು ಪ್ರತಿಯೊಬ್ಬ ಆಟಗಾರನ ಜವಾಬ್ದಾರಿಯಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

Vijaya Karnataka Web 17 Mar 2019, 5:52 pm
ಬೆಂಗಳೂರು: ಬಿಡುವಿಲ್ಲದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಬೆನ್ನಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ಹಾಗಾಗಿ ಯಾರು ಕೂಡಾ ವಿಶ್ವಕಪ್ ಮಿಸ್ ಮಾಡಲು ಬಯಸುವುದಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದರು.
Vijaya Karnataka Web kohli-jadeja-kuldeep


ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಮುನ್ನಡೆಸುತ್ತಿದ್ದಾರೆ. ಆದರೆ ವಿಶ್ವಕಪ್ ಸಂಭಾವ್ಯ ಆಟಗಾರರಿಗೆ ಕೆಲಸದೊತ್ತಡವನ್ನು ನಿಭಾಯಿಸುವಂತೆ ಐಪಿಎಲ್ ಫ್ರಾಂಚೈಸಿಗಳಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ನನಗೆ 10ರಿಂದ 15 ಪಂದ್ಯಗಳನ್ನು ಆಡಲು ಸಾಧ್ಯವಾಗಬಹುದು. ಮಗೆದೂಬ್ಬ ಆಟಗಾರನು ಅಷ್ಟೇ ಪಂದ್ಯಗಳನ್ನು ಆಡಬೇಕೆಂದಿಲ್ಲ. ನನ್ನ ದೇಹಭಾಷೆಗೆ ಅನುಗುಣವಾಗಿ ಅಗತ್ಯ ವಿಶ್ರಾಮವನ್ನು ನಾನು ಪಡೆಯಬೇಕು ಎಂದು ಹೇಳಿದರು.

ಇನ್ನುಕೆಲವರು ನನಗಿಂತಲೂ ಹೆಚ್ಚು ಅಥವಾ ಕಡಿಮೆ ಆಟವನ್ನು ಆಡಬಹುದು. ಇವೆಲ್ಲವೂ ವೈಯಕ್ತಿಕ ವಿಚಾರ.ಆದರೆ ಎಲ್ಲರೂ ವಿಶ್ವಕಪ್ ಆಡಲು ಬಯಸುತ್ತಾರೆ. ಅಷ್ಟು ದೊಡ್ಡ ಟೂರ್ನಿಯನ್ನು ಯಾರು ಕೂಡಾ ಮಿಸ್ ಮಾಡಲು ಬಯಸುದಿಲ್ಲ. ಹಾಗಾಗಿ ಕೆಲಸದೊತ್ತಡವನ್ನು ನಿಭಾಯಿಸುವುದರ ಬಗ್ಗೆ ಸ್ಮಾರ್ಟ್ ಆಗಿರಬೇಕು ಎಂದರು.

ಫಿಟ್ನೆಸ್ ಹಾಗೂ ಕೆಲಸದೊತ್ತಡವನ್ನು ನಿಭಾಯಿಸುವುದು ಪ್ರತಿಯೊಬ್ಬ ಆಟಗಾರ ಜವಾಬ್ದಾರಿಯಾಗಿದೆ. ಹಾಗೆಯೇ ವಿಶ್ವಕಪ್‌ನತ್ತ ಸಾಗುವಾಗ ತಾಜಾತನದೊಂದಿಗೆ ಉತ್ತಮ ಮನೋಸ್ಥಿತಿಯನ್ನು ಕಾಪಾಡಬೇಕು ಎಂಬುದನ್ನು ಒತ್ತಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌