ಆ್ಯಪ್ನಗರ

ಅಶ್ವಿನ್ ಒತ್ತಡದಲ್ಲಿ ಮಾಡಿರುವ ಪ್ರಕ್ರಿಯೆ: ಗಂಭೀರ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ನಲ್ಲಿ ಇದೇ ಮೊದಲ ಬಾರಿಗೆ ಮಂಕಡ್ ರನೌಟ್ ಪ್ರಕರಣ ದಾಖಲಾಗಿದೆ. ಜೋಸ್ ಬಟ್ಲರ್‌ರನ್ನು ಆರ್ ಅಶ್ವಿನ್ ರನೌಟ್ ಮಾಡಿರುವುದು ಹೆಚ್ಚಿನ ವಿವಾದಕ್ಕೆ ಕಾರಣವಾಗಿದೆ.

Vijaya Karnataka Web 27 Mar 2019, 3:54 pm
ಹೊಸದಿಲ್ಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಒತ್ತಡದಲ್ಲಿರುವ ಮಾಡಿರುವ ಪ್ರಕ್ರಿಯೆ ಎಂದು ಮಂಕಡ್ ರನೌಟ್ ಪ್ರಕರಣದ ಬಗ್ಗೆ ಮಾಜಿ ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web r-ashwin


ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜೋಸ್ ಬಟ್ಲರ್ ಅವರನ್ನು ಅಶ್ವಿನ್ ರನೌಟ್ ಮಾಡಿರುವ ರೀತಿಯೂ ಎಲ್ಲೆಡೆ ವಿವಾದಕ್ಕೆ ಕಾರಣವಾಗಿದೆ.

ಬೌಲಿಂಗ್ ಮಾಡುವ ವೇಳೆ ನಾನ್-ಸ್ಟ್ರೈಕರ್‌ನಲ್ಲಿ ಕ್ರೀಸ್ ತೊರೆದಿದ್ದ ಬಟ್ಲರ್‌ರನ್ನು ಅಶ್ವಿನ್ ರನೌಟ್ ಮಾಡಿದ್ದರು. ಇದಾದ ಬೆನ್ನಲ್ಲೇ ಅಶ್ವಿನ್ ಕ್ರೀಡಾಸ್ಪೂರ್ತಿ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದೆ.

ಈ ನಡುವೆ ಹೇಳಿಕೆ ನೀಡಿರುವ ಗಂಬೀರ್, ಬಿಳಿ ಚೆಂಡಿನ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತದ ವಿಶ್ವಕಪ್ ತಂಡವನ್ನು ಸೇರುವ ತವಕದಲ್ಲಿರುವ ಅಶ್ವಿನ್ ಮೇಲೆ ಸಾಕಷ್ಟು ಒತ್ತಡವಿದೆ ಎಂದರು.

ತಮ್ಮ ಫ್ರಾಂಚೈಸಿ ಪರ ಅತ್ಯುತ್ತಮ ಪ್ರದರ್ಶನ ನೀಡುವ ಹಾಗೂ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಒತ್ತಡ ಅಶ್ವಿನ್ ಮೇಲಿದೆ ಎಂದು ಗಂಭೀರ್ ಸೇರಿಸಿದರು.

ಅದೇ ಹೊತ್ತಿಗೆ ಹಳೆಯ ಮಂಕಡ್ ವಿವಾದಗಳ ಜತೆ ಈ ಪ್ರಕರಣವನ್ನು ಹೋಲಿಸಬಾರದು ಎಂದು ಗಂಭೀರ್ ಹೇಳಿದರು. ಅಲ್ಲದೆ ಅಶ್ವಿನ್ ಕೂಡಾ ಹೆಮ್ಮೆಯ ಕ್ರಿಕೆಟಿಗನಾಗಿದ್ದಾರೆ ಎಂದು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌