ಆ್ಯಪ್ನಗರ

ಮತ್ತೆ 'ರಾಜ'ನಾದ ಅಜಿಂಕ್ಯ ರಹಾನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಅಜಿಂಕ್ಯ ರಹಾನೆಗೆ ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕಪಟ್ಟ ಒಲಿದು ಬಂದಿದೆ. ಸ್ಟೀವ್ ಸ್ಮಿತ್ ತವರೂರಿಗೆ ಹಿಂತಿರುಗಿರುವ ಹಿನ್ನಲೆಯಲ್ಲಿ ರಹಾನೆ ಮತ್ತೆ ನಾಯಕರಾಗಿದ್ದಾರೆ.

Vijaya Karnataka Web 3 May 2019, 8:09 pm
ಹೊಸದಿಲ್ಲಿ: ಬಲಗೈ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ಮಗದೊಮ್ಮ ರಾಜಸ್ಥಾನ್ ರಾಯಲ್ಸ್ ನಾಯಕಪಟ್ಟ ಒಲಿದು ಬಂದಿದೆ.
Vijaya Karnataka Web ajinkya-rahane-02


ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ತಂಡದ ಕೆಟ್ಟ ಪ್ರದರ್ಶನದ ಹಿನ್ನಲೆಯಲ್ಲಿ ರಹಾನೆ ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಬಳಿಕ ರಹಾನೆ ಸ್ಥಾನಕ್ಕೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ರನ್ನು ಕಪ್ತಾನರಾಗಿ ನೇಮಕಗೊಳಿಸಿತ್ತು. ಇದೀಗ ಮುಂಬರುವ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ರಾಷ್ಟ್ರೀಯ ಕರ್ತವ್ಯ ನಿರ್ವಹಿಸಲು ಸ್ಮಿತ್ ತವರೂರಿಗೆ ಮರಳಿರುವ ಹಿನ್ನಲೆಯಲ್ಲಿ ರಹಾನೆಗೆ ಮಗದೊಮ್ಮೆ ನಾಯಕಪಟ್ಟ ಒಲಿದು ಬಂದಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ರಾಜಸ್ಥಾನ್ ಈಗಾಗಲೇ ಟೂರ್ನಿಯಿಂದಲೇ ಹೊರನಡೆದಿದೆ. ಅಂತೆಯೇ ಶನಿವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸವಾಲನ್ನು ಎದುರಿಸಲಿದೆ.

ರಹಾನೆ ನಾಯಕತ್ವದಲ್ಲಿ ಮೊದಲ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಸೋಲನ್ನು ಅನುಭವಿಸಿತ್ತು. ಬಳಿಕ ಸ್ಮಿತ್ ನಾಯಕತ್ವದಲ್ಲಿ ಐದು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶವನ್ನು ಕಂಡಿತ್ತು.

ಏತನ್ಮಧ್ಯೆ ಕ್ರೀಡಾಸ್ಫೂರ್ತಿಯನ್ನು ಮೆರೆದು ರಹಾನೆ ಮತ್ತೆ ನಾಯಕಪಟ್ಟ ಸ್ವೀಕರಿಸಿರುವುದನ್ನು ರಾಜಸ್ಥಾನ್ ರಾಯಲ್ಸ್ ಕೊಂಡಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌