ಆ್ಯಪ್ನಗರ

ವಿರಾಟ್ ಜತೆ ಆಡಲು ಕಾತರದಲ್ಲಿರುವ ಶಿವಂ ದುಬೆ

ಯುವ ಪ್ರತಿಭಾವಂತ ಶಿವಂ ದುಬೆ ಅವರನ್ನು ಐಕಾನ್ ಯುವರಾಜ್ ಸಿಂಗ್ ಜತೆ ಹೋಲಿಸಲಾಗುತ್ತಿದೆ. ಐಪಿಎಲ್ 2019ರಲ್ಲಿ ಆರ್‌ಸಿಬಿ ತಂಡವನ್ನು ದುಬೆ ಪ್ರತಿನಿಧಿಸುತ್ತಿರುವುದು ಕರ್ನಾಟಕದ ಅಭಿಮಾನಿಗಳ ಪಾಲಿಗೆ ಹೆಚ್ಚಿನ ಹರ್ಷವನ್ನುಂಟು ಮಾಡಿದೆ.

TOI.in 14 Mar 2019, 12:00 pm
ಹೊಸದಿಲ್ಲಿ: ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಬರೋಡಾ ವಿರುದ್ಧ ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿರುವ 25ರ ಹರೆಯದ ಮುಂಬೈನ ಯುವ ಪ್ರತಿಭಾವಂತ ಆಲ್‌ರೌಂಡರ್ ಶಿವಂ ದುಬೆ ಅವರನ್ನು ಬರೋಬ್ಬರಿ 5 ಕೋಟಿ ರೂ.ಗಳನ್ನು ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿಸಿತ್ತು.
Vijaya Karnataka Web shivam-dubey


ಇದೀಗ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಜತೆ ಆಡಲು ಶಿವಂ ದುಬೆ ಕಾತರದಲ್ಲಿದ್ದಾರೆ. ಮೊದಲನೆಯದಾಗಿ ದೇವರು ಹಾಗೂ ನನ್ನ ಹೆತ್ತವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಐಪಿಎಲ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದಾಗ ತುಂಬಾನೇ ಹರ್ಷಗೊಂಡಿದ್ದೇನೆ ಎಂದರು.

ನಾನು ಐಪಿಎಲ್ 2019ಕ್ಕಾಗಿ ಕಠಿಣ ಪರಿಶ್ರಮವನ್ನು ವಹಿಸುತ್ತಿದ್ದೇನೆ. ಆರ್‌ಸಿಬಿ ಕೋಚಿಂಗ್ ಬೆಂಬಲದಿಂದ ಅವಿರತ ಪ್ರಯತ್ನ ಮಾಡುತ್ತಿದ್ದೇನೆ. ಐಪಿಎಲ್‌ನಲ್ಲೂ ಇದೇ ಆವೇಗ ಕಾಯ್ದುಕೊಳ್ಳುವ ಭರವಸೆಯಿದೆ ಎಂದರು.

2018-19ರ ರಣಜಿ ಆವೃತ್ತಿಯಲ್ಲಿ ದುಬೆ ಆಡಿರುವ ಎಂಟು ಪಂದ್ಯಗಳಲ್ಲಿ 632 ರನ್ ಕಲೆ ಹಾಕಿದ್ದರು. ಇದರಲ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕಗಳು ಸೇರಿದ್ದವು.

ನಾನು ಶೇ.100ರಷ್ಟು ತಯಾರಾಗಿದ್ದು. ರಣಜಿ ಟ್ರೋಫಿಯಲ್ಲಿ ನೋಡಿರುವ ಅದೇ ದುಬೆಯನ್ನು ನೀವು ನೋಡಲಿದ್ದೀರಿ. ಆರ್‌ಸಿಬಿ ಫ್ಯಾನ್ಸ್ ಸಹ ನನ್ನ ಸಿಕ್ಸರನ್ನು ಆನಂದಿಸಲಿದ್ದಾರೆ ಎಂದರು.

ನಾನು ತಾಳ್ಮೆಯಿಂದಿದ್ದು, ಇದು ಬೌಲರ್‌ಗಳ ಮೇಲೆ ಅಧಿಪತ್ಯ ಸ್ಥಾಪಿಸಲು ನೆರವಾಗುವ ಭರವಸೆಯಿದೆ ಎಂದು ಸೇರಿಸಿದರು.

ನಾನು ಇತ್ತೀಚೆಗಷ್ಟೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಭೇಟಿಯಾಗಿದ್ದೇನೆ. ವಿರಾಟ್ ಹಾಗೂ ದಕ್ಷಿಣ ಆಫ್ರಿಕಾ ಲೆಜೆಂಡ್ ಎಬಿ ಡಿ ವಿಲಿಯರ್ಸ್ ಜತೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಳ್ಳಲು ಉತ್ಸಾಹ ಭರಿತವಾಗಿದ್ದೇನೆ ಎಂದು ನುಡಿದರು.

ಕೊಹ್ಲಿ ಭೇಟಿಯಾದಾಗಾ ಬ್ಯಾಟಿಂಗ್ ಟಿಪ್ಸ್‌ಗಳನ್ನು ಪಡೆದಿದ್ದೇನೆ. ಬ್ಯಾಟಿಂಗ್ ಮಾತ್ರವಲ್ಲದೆ ಫಿಟ್ನೆಸ್ ಮಂತ್ರವನ್ನು ತಿಳಿಯಲು ಬಯಸುತ್ತೇನೆ ಎಂದು ಹೇಳಿದರು.

ದುಬೆ ಅವರನ್ನು ಯುವರಾಜ್ ಸಿಂಗ್ ಜತೆ ಹೋಲಿಸಲಾಗುತ್ತಿದೆ. ಇದರಿಂದ ತಾನು ಅತೀವ ಹರ್ಷಗೊಂಡಿದ್ದು, ನನ್ನ ಬ್ಯಾಟಿಂಗ್ ಐಕಾನ್ ಜಾಕ್ವಾಸ್ ಕ್ಯಾಲಿಸ್ ಅವರಾಗಿದ್ದಾರೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌