ಆ್ಯಪ್ನಗರ

ಫುಟ್ಬಾಲ್ ಇದ್ದಿದ್ದರೆ ಆರ್‌ಸಿಬಿಗೆ ಕಪ್ ಗ್ಯಾರಂಟಿ!

ಆರ್‌ಸಿಬಿ ಇನ್‌ಸೈಡರ್ ಶೋನಲ್ಲಿ ಮಗದೊಂದು ತಮಾಷೆಭರಿತ ಕಾರ್ಯಕ್ರಮದೊಂದಿಗೆ ಮಿಸ್ಟರ್ ನಾಗ್ಸ್ ಮುಂದೆ ಬಂದಿದ್ದಾರೆ. ಈ ಬಾರಿ ಯಾರನೆಲ್ಲ ಕಾಲೆಳೆದಿದ್ದಾರೆ ಎಂಬುದನ್ನು ಬನ್ನಿ ನೋಡೋಣ.

Vijaya Karnataka Web 19 Apr 2019, 5:55 pm
ಬೆಂಗಳೂರು: ಆರ್‌ಸಿಬಿ ಇನ್‌ಸೈಡರ್ ಶೋನಲ್ಲಿ ಮಗದೊಮ್ಮೆ ಮಿಸ್ಟರ್ ನಾಗ್ಸ್ ಮಗದೊಮ್ಮೆ ಮರ್ಮಭರಿತವಾದ ಮಾತುಗಳೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಈ ಬಾರಿ ಪ್ರಜ್ಞಾವಂತ ನಾಗರಿಕನ ಕರ್ತವ್ಯವನ್ನು ನಿಭಾಯಿಸಿರುವ ಮಿಸ್ಟರ್ ನಾಗ್ಸ್, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಇಲ್ಲಿ ಬೆಂಗಳೂರಿನಲ್ಲಿ ಮತದಾನ ಶೇ. 50 ಮೀರಿಲ್ಲ ಎಂಬುದು ಬೇಸರದ ಸಂಗತಿ.
Vijaya Karnataka Web mr-nags


ಹಾಗಿರಬೇಕೆಂದರೆ ಮಿಸ್ಟರ್ ನಾಗ್ಸ್ ಸಂಶಯವೊಂದನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಅಂಪೈರ್ ಔಟ್ ನೀಡುವಾಗ ಬೆರಳನ್ನು ಎತ್ತಿ ತೋರಿಸುತ್ತಾರೆ. ಅಂದರೆ ಅಂಪೈರ್ ವೋಟ್ ಮಾಡಲು ತಿಳಿಸುತ್ತಾರೆಯೇ ಏನೋ?

ಮೊಹಾಲಿಯಲ್ಲಿ ಆರ್‌ಸಿಬಿ ಎ ಹಾಗೂ ಆರ್‌ಸಿಬಿ ಬಿ ಪಂದ್ಯವನ್ನು ಎಲ್ಲರೂ ನೋಡಿರುತ್ತಾರೆ. ನಾವು ಆ ಪಂದ್ಯವನ್ನು ಗೆದ್ದೆವು. ಎಲ್ಲ ಪಂದ್ಯಕ್ಕೂ ಏಕೆ ಹೋಗುತ್ತಿಲ್ಲ ಎಂದು ಹಲವಾರು ಪ್ರಶ್ನಿಸುತ್ತಾರೆ. ನೋಡಿ ನಾನು ಶ್ರೀಮಂತ ವ್ಯಕ್ತಿಯಾಗಿದ್ದು ನನಗೆ ಹಲವಾರು ಜವಾಬ್ದಾರಿ ಕರ್ತವ್ಯಗಳಿದೆ. ಹಾಗಾಗಿ ಪ್ರತಿ ಪಂದ್ಯಕ್ಕೂ ಹೋಗುವುದು ಅಸಾಧ್ಯ ಎಂದರು.

ತರಬೇತಿ ವೇಳೆಯಲ್ಲಿ ಆರ್‌ಸಿಬಿ ಫುಟ್ಬಾಲ್ ಅಭ್ಯಾಸಿಸುತ್ತಿರುವುದನ್ನು ನೋಡಿದ ನಾಗ್ಸ್...
ನಮ್ಮ ಮುಂದಿನ ಪಂದ್ಯ ಕೋಲ್ಕತ್ತಾದಲ್ಲಿ ಮೊಹನ್ ಬಗಾನ್ ವಿರುದ್ಧ ಆಡುತ್ತಿದ್ದೇವೆ. ಇದಕ್ಕಾಗಿ ನಮ್ಮ ತಂಡವು ಅತ್ಯಂತ ಕಠಿಣ ತರಬೇತಿಯನ್ನು ನಡೆಸುತ್ತಿದೆ.

ಫ್ರೆಂಡ್ಸ್, ನೀವು ನಮ್ಮ ಈ ವೀಡಿಯೋವನ್ನು ವೀಕ್ಷಿಸಿದರೆ ನಮ್ಮ ತಂಡ ಫುಟ್ಬಾಲ್‌ನಲ್ಲಿ ಅತ್ಯುತ್ತಮ ತಂಡ ಎಂಬುದು ತಿಳಿದು ಬರುತ್ತದೆ. ಹಾಗಾಗಿ ಯಾರೇ ಐಪಿಎಲ್ ಆಯೋಜಿಸುತ್ತಾರೆಯೋ ಅವರಲ್ಲಿ ನನ್ನ ಮನವಿ ಏನೆಂದರೆ ದಯವಿಟ್ಟು ಓಪನ್ ಟೂರ್ನಮೆಂಟ್ ಆಯೋಜಿಸಿ. ಮುಂದೆ ನಾವು ಜಾವೆಲಿನ್, ಶಾಟ್ ಫುಟ್, ಥ್ರೋ ಬಾಲ್‌ಗಳನ್ನು ಆಡಲಿದ್ದೇವೆ ಎಂದರು.

ಆರ್‌ಸಿಬಿ ಕ್ಯಾಂಪ್‌ಗೆ ಸ್ಟೈನ್...
ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೈನ್ ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿರುವುದನ್ನು ಉಲ್ಲೇಖಿಸಲು ಮರೆಯಲಿಲ್ಲ.

ಕ್ರಿಕೆಟ್ ತಾರೆಗಳ ಸಂದರ್ಶನ ಶುರು...
ಅಂತಿಮವಾಗಿ ನಾನು ಆನ್ ಫೀಲ್ಡ್ ಎಂಟರ್‌ಟೈನ್ಮೆಂಟ್ ಗ್ಯಾರಂಟಿ ಕೊಡಲ್ಲ. ಆದರೆ ಆಫ್ ಫೀಲ್ಡ್ ಅಂತೂ ಖಚಿತ ಎಂದು ಹೇಳಿದರು. ಅದೇ ಹೊತ್ತಿಗೆ ಆರ್‌ಸಿಬಿ ಇನ್‌ಸೈಡರ್‌ನಲ್ಲಿ ಕ್ರಿಕೆಟಿಗರ ಸಂದರ್ಶನ ಮಾಡುವುದಾಗಿ ತಿಳಿಸಿದರು. ನಿಮ್ಮ ಬಳಿ ಯಾವುದೇ ಪ್ರಶ್ನೆಗಳಿದ್ದರೆ ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸುವಂತೆಯೂ ಸೂಚಿಸಲಾಗಿದೆ.

ಆಂಡ್ರೆ ರಸೆಲ್ ಹೆಸರೇ ಕಾಂಪ್ಲಿಕೇಟ್...
ಹೋಗುವ ಮುಂಚೆ ಏನಂದ್ರಿ ರಸೆಲ್ ಗೊತ್ತಾಯ್ತಾ? ಮತ್ತೆ ಏನಂದ್ರು? ಅವರ ಹೆಸರು ಕೇಳಿ ಸ್ವಲ್ಪ ಎಂದು ಕಾಳೆಳೆಯಲು ಮರೆಯಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌