ಆ್ಯಪ್ನಗರ

ಹೋರಾಟ ಮುಂದುವರಿಯಲಿದೆ: ವಿಲಿಯರ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತವನ್ನು ಪ್ರವೇಶಿಸಲಿದೆಯೇ ಎಂಬುದು ಬಹಳಷ್ಟು ಕುತೂಹಲಕ್ಕೀಡು ಮಾಡಿದೆ.

TIMESOFINDIA.COM 16 May 2018, 4:15 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತವನ್ನು ಪ್ರವೇಶಿಸಲಿದೆಯೇ ಎಂಬುದು ಬಹಳಷ್ಟು ಕುತೂಹಲಕ್ಕೀಡು ಮಾಡಿದೆ.
Vijaya Karnataka Web ab-de-villiers-26


ಪ್ರಸ್ತುತ 12 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಆರ್‌ಸಿಬಿ ಏಳನೇ ಸ್ಥಾನದಲ್ಲಿದೆ ಪ್ಲೇ-ಆಫ್‌ಗೆ ಪ್ರವೇಶಿಸಲು ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಇತರೆ ಪಂದ್ಯಗಳ ಫಲಿತಾಂಶಗಳು ಆರ್‌ಸಿಬಿ ಪರವಾಗಬೇಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಸಿಬಿ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್, ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.

ಇಂದೋರ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಆರ್‌ಸಿಬಿ ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ. ಕೆಲವು ವಾರಗಳ ಹಿಂದೆ ಯಾವುದು ನಮ್ಮ ಪರವಾಗಿರಲಿಲ್ಲ. ಆದರೆ ನಮ್ಮ ಪ್ಲೇ-ಆಫ್ ಕನಸನ್ನು ಕೈಬಿಟ್ಟಿಲ್ಲ. ಇಲ್ಲಿಂದ ಬಳಿಕ ತಪ್ಪಾಗದಂತೆ ಎಚ್ಚರ ವಹಿಸಬೇಕು ಎಂದರು.

ಕೊನೆಯ ನಾಲ್ಕು ಲೀಗ್ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ನಾಲು ಸಿಲುಕಿದ್ದೆವು. ಇನ್ನು ತುಂಬಾ ಕೆಲಸ ಬಾಕಿ ಉಳಿದಿದೆ. ಇಲ್ಲಿಂದ ಮುಂದಕ್ಕೂ ಫೈಟಿಂಗ್ ಮುಂದುವರಿಯಲಿದೆ ಎಂದು ಸೇರಿಸಿದರು.

ಬೃಹತ್ ಮೊತ್ತವನ್ನು ಕಾಪಾಡಲು ಆರ್‌ಸಿಬಿ ಬೌಲರ್‌ಗಳು ವಿಫಲವಾಗುತ್ತಿದ್ದಾರೆಂಬ ಆರೋಪವೆದ್ದಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಬೌಲರ್‌ಗಳು ನಿರ್ವಹಣೆ ನೀಡುತ್ತಿದ್ದಾರೆ ಎಂದು ವಿಲಿಯರ್ಸ್ ಬೆಂಬಲಕ್ಕೆ ನಿಂತಿದ್ದಾರೆ.

ಅದೇ ಹೊತ್ತಿಗೆ ತಮ್ಮ ತಂಡವು ಶಕ್ತಿಯುತ ಮನೋಬಲವನ್ನು ಹೊಂದಿದ್ದು, ಪರಸ್ಪರ ಆರೋಪದಲ್ಲಿ ತೊಡಗಿಲ್ಲ. ಸಮಗ್ರವಾದ ಆಟದಿಂದ ಮುಂದುವರಿಯಲಿದ್ದೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌