ಆ್ಯಪ್ನಗರ

ಶ್ರೇಯಸ್ ಸಿಕ್ಸರ್‌ಗೆ ದಂಗಾದ ಗಂಭೀರ್

ಸತತ ಸೋಲುಗಳಿಂದ ಕಂಗೆಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ನಾಯಕತ್ವದ ಬದಲಾವಣೆ ಅದೃಷ್ಟ ತಂದು ಕೊಟ್ಟಿದೆ. ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಸಾರಥ್ಯದಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದ ಡೇರ್‌ಡೆವಿಲ್ಸ್‌ ತಂಡ, ಐಪಿಎಲ್‌-11ರ ಪಂದ್ಯದಲ್ಲಿ ಬಲಾಢ್ಯ ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ 55 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

Times Now 28 Apr 2018, 4:35 pm
ಹೊಸದಿಲ್ಲಿ: ಸತತ ಸೋಲುಗಳಿಂದ ಕಂಗೆಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ನಾಯಕತ್ವದ ಬದಲಾವಣೆ ಅದೃಷ್ಟ ತಂದು ಕೊಟ್ಟಿದೆ. ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಸಾರಥ್ಯದಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದ ಡೇರ್‌ಡೆವಿಲ್ಸ್‌ ತಂಡ, ಐಪಿಎಲ್‌-11ರ ಪಂದ್ಯದಲ್ಲಿ ಬಲಾಢ್ಯ ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ 55 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
Vijaya Karnataka Web sreyas-gambhir


ಸಿಡಿಲಬ್ಬರದ ಅಜೇಯ 93 ರನ್‌ ಸಿಡಿಸಿದ ಶ್ರೇಯಸ್‌, ತಂಡದ ಸತತ 3 ಸೋಲುಗಳ ಸರಮಾಲೆಗೆ ಅಂತ್ಯ ಹಾಡಿ ಡೇರ್‌ಡೆವಿಲ್ಸ್‌ಗೆ ಟೂರ್ನಿಯಲ್ಲಿ 2ನೇ ಗೆಲುವು ತಂದುಕೊಟ್ಟರು.

ನಾಯಕ ಶ್ರೇಯಸ್‌ ಅಯ್ಯರ್‌ ತಮ್ಮ ಮುಂದಾಳತ್ವದ ಮೊದಲ ಪಂದ್ಯದಲ್ಲೇ ಆರ್ಭಟಿಸಿ, ನೈಟ್‌ ರೈಡರ್ಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 28 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಅಯ್ಯರ್‌, ಅಂತಿಮವಾಗಿ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳ ಬಲದಿಂದ ಅಜೇಯ 93 ರನ್‌ ಗಳಿಸಿದರು.

ಅತ್ತ ಸತತ ವೈಫಲ್ಯಗಳಿಂದ ಬೇಸತ್ತು ಡೆಲ್ಲಿ ಡೇರ್‌ಡೆವಿಲ್ಸ್‌ನ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಷ್ಟೇ ಅಲ್ಲದೆ, ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ಆಡುವುದಾಗಿ ಘೋಷಿಸಿದ್ದ ಗೌತಮ್‌ ಗಂಭೀರ್‌ ತಮ್ಮ ಮಾಜಿ ತಂಡದ ವಿರುದ್ಧ ಶುಕ್ರವಾರ ಕಣಕ್ಕಿಳಿಯಲಿಲ್ಲ. ಆದರೂ ಡಗೌಟ್‌ನಲ್ಲಿ ಕುಳಿತುಕೊಂಡು ತಮ್ಮ ತಂಡದ ಆಟಗಾರರನ್ನು ಹುರಿದುಂಬಿಸುತ್ತಿದ್ದರು.

ಈ ನಡುವೆ ಡೆಲ್ಲಿ ಬ್ಯಾಟಿಂಗ್ ವೇಳೆ ಆಂಡ್ರೆ ರಸೆಲ್ ಎಸೆದ ಇನ್ನಿಂಗ್ಸ್‌ನ 15 ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಹೊಡೆದ ಸಿಕ್ಸರ್‌ವೊಂದು ನೇರವಾಗಿ ಡಗೌಟ್‌ನಲ್ಲಿ ಕುಳಿತುಕೊಂಡ ಆಟಗಾರರತ್ತ ತೇಲಿತ್ತು.

ಈ ಹಂತದಲ್ಲಿ ರಾಹುಲ್ ತೆವಾತಿಯಾ ಒಂದು ಕೈಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು. ಅತ್ತ ಶ್ರೇಯಸ್ ಹೊಡೆತಕ್ಕೆ ಗಂಭೀರ್ ದಂಗಾದರು. ಗಂಭೀರ್ ಮುಖ ಭಾವನೆಯಿಂದಲೇ ಇದು ವ್ಯಕ್ತವಾಗುತ್ತಿತ್ತು. ಪ್ರಸ್ತುತ ಹಾವ ಭಾವನೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌