ಆ್ಯಪ್ನಗರ

ಎಸ್ಆರ್‌ಎಚ್‌ vs ಪಂಜಾಬ್: ಹೈದರಾಬಾದ್‌ನಲ್ಲಿ ಕಿಂಗ್ ಯಾರು?

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ ಮತ್ತು ವೇಗಿ ಮೊಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಈ ಪಂದ್ಯದಲ್ಲೂ ಸನ್‌ರೈಸರ್ಸ್‌ ತಂಡದ ಮಧ್ಯಮ ಕ್ರಮಾಂಕವನ್ನು ಕಾಡುವ ಸಾಧ್ಯತೆ ಇದೆ.

Agencies 29 Apr 2019, 4:18 pm
ಹೈದರಾಬಾದ್‌: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್‌ 12ನೇ ಆವೃತ್ತಿಯ 48ನೇ ಹಣಾಹಣಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳ ಪಾಲಿಗೆ ನೈಜ ಸತ್ವ ಪರೀಕ್ಷೆ ಎನಿಸಿಕೊಳ್ಳಲಿದೆ. ಸದ್ಯ ತಲಾ 11 ಪಂದ್ಯಗಳನ್ನಾಡಿರುವ ಇತ್ತಂಡಗಳು ತಲಾ ಹತ್ತು ಅಂಕ ಗಳಿಸಿವೆ. ಆದರೆ, ಸರಾಸರಿ ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಹೈದರಾಬಾದ್‌ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪಂಜಾಬ್‌ ನಂತರದ ಸ್ಥಾನದಲ್ಲಿದೆ. ನಾಕೌಟ್‌ ದೃಷ್ಟಿಯಲ್ಲಿ ಈ ಪಂದ್ಯ ಇತ್ತಂಡಗಳಿಗೆ ಅತ್ಯಂತ ಮಹತ್ವದ್ದೆನಿಸಿದೆ.
Vijaya Karnataka Web KXIP VS SRH


ವಿಶ್ವಕಪ್‌ ಪೂರ್ವ ಸಿದ್ಧತೆಗಾಗಿ ಆಸ್ಪ್ರೇಲಿಯಾಗೆ ವಾಪಸಾಗುತ್ತಿರುವ ಸನ್‌ರೈಸರ್ಸ್‌ ತಂಡದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ಗೆ ಹಾಲಿ ಆವೃತ್ತಿಯಲ್ಲಿ ಇದೇ ಕೊನೆಯ ಪಂದ್ಯ. ವಾರ್ನರ್‌ ಜತೆಗೆ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಆರ್‌ಸಿಬಿ ತಂಡದ ಮಾರ್ಕಸ್‌ ಸ್ಟೋಯ್ನಿಸ್‌ ಕೂಡ ಆಸ್ಪ್ರೇಲಿಯಾಗೆ ವಾಪಸಾಗಲಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ನಂತರ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ವಾರ್ನರ್‌, 611 ರನ್‌ ಕಲೆಹಾಕುವ ಮೂಲಕ ಆರೆಂಜ್‌ ಕ್ಯಾಪ್‌ ಒಡೆಯನಾಗಿದ್ದಾರೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ ಮತ್ತು ವೇಗಿ ಮೊಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಈ ಪಂದ್ಯದಲ್ಲೂ ಸನ್‌ರೈಸರ್ಸ್‌ ತಂಡದ ಮಧ್ಯಮ ಕ್ರಮಾಂಕವನ್ನು ಕಾಡುವ ಸಾಧ್ಯತೆ ಇದೆ.

ಅತ್ತ ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್‌ ಮತ್ತು ಮಯಾಂಕ್‌ ಅಗರ್ವಾಲ್‌ರಂತಹ ಘಟಾನುಘಟಿಗಳ ದಂಡನ್ನೇ ಒಳಗೊಂಡಿರುವ ಪಂಜಾಬ್‌ ತಂಡ ಆತಿಥೇಯ ತಂಡವನ್ನು ಮಣಿಸಿ ನಾಕೌಟ್‌ಗೆ ಇನ್ನಷ್ಟು ಹತ್ತಿರವಾಗುವ ಹವಣಿಕೆಯಲ್ಲಿದೆ. ಉತ್ತಮ ಫಾರ್ಮ್‌ನಲ್ಲಿರುವ ಗೇಲ್‌ ಮತ್ತು ರಾಹುಲ್‌ ಕ್ರಮವಾಗಿ 444 ಮತ್ತು 441 ರನ್‌ ಗಳಿಸಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌-ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಪಂದ್ಯ ಆರಂಭ: ರಾತ್ರಿ 8ಕ್ಕೆ

ಸ್ಥಳ: ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ಸ್‌


ಮುಖಾಮುಖಿ: 13
ಹೈದರಾಬಾದ್‌ ಗೆಲುವು: 09
ಪಂಜಾಬ್‌ ಜಯ: 04

ಗೆಲುವಿನ ಸರಾಸರಿ
ಸನ್‌ರೈಸರ್ಸ್‌: 69.23 %
ಕಿಂಗ್ಸ್‌ ಇಲೆವೆನ್‌:30.76 %


ಸ್ಟಾರ್‌ ಆಟಗಾರರು
ಹೈದರಾಬಾದ್‌

ಡೇವಿಡ್‌ ವಾರ್ನರ್‌
ಮನೀಶ್‌ ಪಾಂಡೆ
ವಿಜಯ್‌ ಶಂಕರ್‌
ಖಲೀಲ್‌ ಅಹ್ಮದ್‌
ಭುವನೇಶ್ವರ್‌ ಕುಮಾರ್‌

ಪಂಜಾಬ್‌
ಕೆ.ಎಲ್‌.ರಾಹುಲ್‌
ಕ್ರಿಸ್‌ ಗೇಲ್‌
ಮಯಾಂಕ್‌ ಅಗರ್ವಾಲ್‌
ರವಿಚಂದ್ರನ್‌ ಅಶ್ವಿನ್‌
ಮೊಹಮ್ಮದ್‌ ಶಮಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌