ಆ್ಯಪ್ನಗರ

ಪುಣೆಯಲ್ಲಿಂದು ಅಗ್ರಮಾನ್ಯರ ಕದನ

ಐಪಿಎಲ್‌-11ರ ಅಖಾಡದಲ್ಲಿ ಭಾನುವಾರ ಮಾಜಿ ಚಾಂಪಿಯನ್ನರ ಕದನ. ಸತತ ಆರು ಗೆಲುವುಗಳ ಬೆನ್ನೇರಿ ಮುನ್ನುಗ್ಗುತ್ತಿರುವ ಅಂಕಪಟ್ಟಿಯ ಅಗ್ರಸ್ಥಾನಿ ಸನ್‌ರೈಸರ್ಸ್‌ ಹೈದರಾಬಾದ್‌ನ ನಾಗಾಲೋಟಕ್ಕೆ ತಡೆಯೊಡ್ಡುವ ವಿಶ್ವಾಸದೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಕಣಕ್ಕಿಳಿಯಲಿದೆ.

Vijaya Karnataka 13 May 2018, 10:16 am
ಪುಣೆ: ಐಪಿಎಲ್‌-11ರ ಅಖಾಡದಲ್ಲಿ ಭಾನುವಾರ ಮಾಜಿ ಚಾಂಪಿಯನ್ನರ ಕದನ. ಸತತ ಆರು ಗೆಲುವುಗಳ ಬೆನ್ನೇರಿ ಮುನ್ನುಗ್ಗುತ್ತಿರುವ ಅಂಕಪಟ್ಟಿಯ ಅಗ್ರಸ್ಥಾನಿ ಸನ್‌ರೈಸರ್ಸ್‌ ಹೈದರಾಬಾದ್‌ನ ನಾಗಾಲೋಟಕ್ಕೆ ತಡೆಯೊಡ್ಡುವ ವಿಶ್ವಾಸದೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಕಣಕ್ಕಿಳಿಯಲಿದೆ.
Vijaya Karnataka Web csk


ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಗೆಲುವಿನ ಹಾದಿಗೆ ಮರಳುವ ನಿಟ್ಟಿನಲ್ಲಿ ಚೆನ್ನೈಗೆ ಮಹತ್ವದ್ದಾಗಿದೆ. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಸಿಎಸ್‌ಕೆ ತಂಡ ಏರಿಳಿತ ಕಂಡಿದ್ದು, ತಲಾ 2 ಗೆಲುವು-ಸೋಲಿನ ಮಿಶ್ರ ಫಲ ಅನುಭವಿಸಿದೆ. ಇನ್ನೊಂದು ಗೆಲುವು ಧೋನಿ ಪಡೆಗೆ ಪ್ಲೇ ಆಫ್‌ ಸ್ಥಾನವನ್ನು ಬಹುತೇಕ ಖಚಿತ ಪಡಿಸಲಿದ್ದು, ಆ ಜಯದ ಮೇಲೆ ಮಾಜಿ ಚಾಂಪಿಯನ್ನರು ಕಣ್ಣಿಟ್ಟಿದ್ದಾರೆ. ಆದರೆ ಅನುಭವಿ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಡೆತ್‌ ಓವರ್‌ಗಳಲ್ಲಿ ಈ ಹಿಂದಿನಷ್ಟು ಪರಿಣಾಮಕಾರಿಯಾಗದಿರುವುದು ನಾಯಕ ಧೋನಿ ಅವರ ಚಿಂತೆಗೆ ಕಾರಣವಾಗಿದೆ. ಚೆನ್ನೈ ಸೋಲು ಕಂಡ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಕಳೆದ ಪಂದ್ಯ ಇದಕ್ಕೆ ನಿದರ್ಶನ.

ಮತ್ತೊಂದೆಡೆ ಬಲಾಢ್ಯ ಬೌಲಿಂಗ್‌ ಬಲದೊಂದಿಗೆ ಅಬ್ಬರಿಸುತ್ತಾ ಇದೀಗ ಬ್ಯಾಟಿಂಗ್‌ನಲ್ಲೂ ಖದರ್‌ ಕಂಡುಕೊಂಡಿರುವ ಸನ್‌ರೈಸರ್ಸ್‌ ಸತತ 7ನೇ ಗೆಲುವನ್ನು ಎದುರು ನೋಡುತ್ತಿದೆ. ಅಲ್ಲದೆ ಏ.22ರಂದು ತವರು ನೆಲ ಹೈದರಾಬಾದ್‌ನಲ್ಲಿ ಚೆನ್ನೈ ವಿರುದ್ಧದ ಅನುಭವಿಸಿದ್ದ ಸೋಲಿಗೆ ಇದೀಗ ಅವರದ್ದೇ ತವರು ನೆಲದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌