ಆ್ಯಪ್ನಗರ

ಬಿಜೆಪಿ ಜತೆ ಆರ್‌ಸಿಬಿಗೂ ನಾಳೆ ಕ್ಲೈಮ್ಯಾಕ್ಸ್!

ಆರ್‌ಸಿಬಿ ಗೆದ್ದರೆ ಪ್ಲೇ-ಆಫ್ ಪ್ರವೇಶ ಜೀವಂತ, ಇಲ್ಲವಾದ್ದಲ್ಲಿ ಮನೆಗೆ ಸೇರಲಿದೆ. ಇದರೊಂದಿಗೆ ಬಿಜೆಪಿ ಜತೆಗೆ ಆರ್‌ಬಿಸಿ ಪಾಲಿಗೆ ನಾಳೆ ಸಂಜೆ 4ಗಂಟೆ ಕ್ಲೈಮಾಕ್ಸ್ ಆಗಿರಲಿದೆ.

Vijaya Karnataka Web 18 May 2018, 3:26 pm
ಬೆಂಗಳೂರು: ಕಳೆದ ದಿನವಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿಎಸ್ ಯಡಿಯೂರಪ್ಪ, ಶನಿವಾರ ಸಂಜೆ 4 ಗಂಟೆಗೆ ಸರಿಯಾಗಿ ವಿಶ್ವಾಸಮತ ಸಾಬೀತುಪಡಿಸುವಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಶುಕ್ರವಾರದಂದು ಆದೇಶ ಹೊರಡಿಸಿದೆ.
Vijaya Karnataka Web bsy-kohli-03


ಅತ್ತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರದಂದೇ ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸವಾಲನ್ನು ಎದುರಿಸಲಿದೆ.

ಆರ್‌ಸಿಬಿ ಗೆದ್ದರೆ ಪ್ಲೇ-ಆಫ್ ಪ್ರವೇಶ ಜೀವಂತ, ಇಲ್ಲವಾದ್ದಲ್ಲಿ ಮನೆಗೆ ಸೇರಲಿದೆ. ಇದರೊಂದಿಗೆ ಬಿಜೆಪಿ ಜತೆಗೆ ಆರ್‌ಬಿಸಿ ಪಾಲಿಗೆ ನಾಳೆ ಸಂಜೆ 4ಗಂಟೆ ಕ್ಲೈಮಾಕ್ಸ್ ಫಿಕ್ಸ್ ಆಗಿದೆ.

ಐಪಿಎಲ್ 11ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಜತೆಗೆ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಿದೆ. ಇದೀಗ ಉಳಿದೆರಡು ಸ್ಥಾನಗಳಿಗಾಗಿ ಐದು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.

ನಾಳಿನ ಪಂದ್ಯ ಗೆದ್ದರಷ್ಟೇ ಆರ್‌ಸಿಬಿ ಪ್ಲೇ-ಆಫ್ ಪ್ರವೇಶ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ. ಹಾಗಾಗಿ ಇತರೆ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿರಲಿದೆ. ಮುಂಬಯಿ ಅಥವಾ ಕೋಲ್ಕೊತಾ ತಂಡಗಳ ಪೈಕಿ ಯಾವುದಾದರೂ ಒಂದು ತಂಡ ಸೋಲು ಅನುಭವಿಸಿದರೆ ಆರ್‌ಸಿಬಿ ಪ್ಲೇ-ಆಫ್ ಪ್ರವೇಶ ಸುಲಭವಾಗದಲಿದೆ. ಪ್ರಸ್ತುತ ಕೆಕೆಆರ್ ಮೂರು ಹಾಗೂ ಮುಂಬಯಿ ನಾಲ್ಕನೇ ಸ್ಥಾನದಲ್ಲಿದೆ.

ನಾಯಕ ವಿರಾಟ್ ಕೊಹ್ಲಿ ಹೇಳಿಕೆ ಕೊಟ್ಟಿರುವಂತೆಯೇ ಆರ್‌ಸಿಬಿ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಾಳಿನ ಪಂದ್ಯದಲ್ಲಿ ಗೆಲುವುದೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ 'ಈ ಸಲ ಕಪ್ ನಮ್ದೆ' ಎಂದು ಅಭಿಮಾನಿಗಳ ಘೋಷವಾಕ್ಯದಂತೆ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌