ಆ್ಯಪ್ನಗರ

ಇಂತಹ ತಪ್ಪುಗಳು ಕ್ರಿಕೆಟ್‌ಗೆ ಉತ್ತಮವಲ್ಲ: ರೋಹಿತ್

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಲಸಿತ್ ಮಾಲಿಂಗ ನೋ ಬಾಲ್ ಎಸೆದಿದ್ದರೂ ಅಂಪೈರ್ ನೀಡಿರಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ರೋಹಿತ್ ಶರ್ಮಾ, ಇಂತಹ ತಪ್ಪುಗಳು ಕ್ರಿಕೆಟ್‌ಗೆ ಉತ್ತಮವಲ್ಲ ಎಂದು ಹೇಳಿದ್ದಾರೆ.

Vijaya Karnataka Web 29 Mar 2019, 5:41 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ರನ್ ಅಂತರದ ರೋಚಕ ಸೋಲಿಗೆ ಶರಣಾಗಿದೆ.
Vijaya Karnataka Web rohit-sharma-02


ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಏಳು ರನ್ನಿಗೆ ಅಗತ್ಯವಿತ್ತು. ಆದರೆ ಲಸಿತ್ ಮಾಲಿಂಗ ಎಸೆದ ದಾಳಿ ನೋ ಬಾಲ್ ಆಗಿದ್ದರೂ ಅಂಪೈರ್ ನೀಡಿರಲಿಲ್ಲ. ಈ ಮೂಲಕ ಆರ್‌ಸಿಬಿಗೆ ಗೆಲುವು ನಿರಾಕರಿಸ್ಪಟ್ಟಿತ್ತು.

ಇದರಿಂದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಆಕ್ರೋಶಗೊಂಡಿದ್ದರು. ಬಳಿಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ ಇಂತಹ ತಪ್ಪುಗಳು ಕ್ರಿಕೆಟ್‌ಗೆ ಉತ್ತಮವಲ್ಲ ಎಂದು ಹೇಳಿದ್ದಾರೆ.

ಬೌಂಡರಿ ಗೆರೆ ದಾಟಿದಾಗ ಯಾರೋ ನೋ ಬಾಲ್ ಬಗ್ಗೆ ನನ್ನಲ್ಲಿ ಹೇಳಿದರು. ಇದು ಅಷ್ಟೇ ಸರಳ, ಇಂತಹ ತಪ್ಪುಗಳು ಕ್ರಿಕೆಟ್‌ಗೆ ಉತ್ತಮವಲ್ಲ ಎಂದು ಸೇರಿಸಿದರು.

ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾ ಎಸೆತವನ್ನು ವೈಡ್ ಆಗಿರದಿದ್ದರೂ ವೈಡ್ ಎಂದು ಘೋಷಿಸಿದ್ದರು. ಇದನ್ನು ಉಲ್ಲೇಖಿಸಿರುವ ರೋಹಿತ್, ಇವೆಲ್ಲವೂ ಗೇಮ್-ಚೇಂಜರ್ ಆಗಿದೆ. ಟಿವಿ ಅಲ್ಲಿದ್ದು, ಎಲ್ಲರೂ ಏನಾಗಿದೆಯೆಂಬುದನ್ನು ನೋಡುತ್ತಾರೆ. ಇಂತಹ ವಿಚಾರದಲ್ಲಿ ಆಟಗಾರರು ಹೆಚ್ಚೇನು ಮಾಡುವಂತಿಲ್ಲ ಎಂದರು.

ಕೊನೆಯ ಎಸೆತವಾಗಿದ್ದರಿಂದ ಪರಸ್ಪರ ಕೈ ಕುಲುಕಲು ಮಾತ್ರ ನಮ್ಮಿಂದ ಸಾಧ್ಯ. ಈ ಘಟನೆಯಿಂದ ಬೇಸರವಾಗಿದೆ. ನಮ್ಮಂತೆ ಅವರು (ಅಂಪೈರ್) ಕೂಡಾ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌