ಆ್ಯಪ್ನಗರ

ಎಬಿಡಿ, ವಿರಾಟ್ ಹೃದಯ ಗೆದ್ದ ಆರ್‌ಸಿಬಿ ಫ್ಯಾನ್ಸ್‌ಗೆ ವಿಶೇಷ ಸಂದೇಶ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಬೆಸ್ಟ್ ಫ್ಯಾನ್ಸ್ ಎಂದು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Vijaya Karnataka Web 4 May 2019, 4:53 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಕನಸು ಭಗ್ನಗೊಂಡಿದೆ.
Vijaya Karnataka Web ab-de-kohli


ಆರ್‌ಸಿಬಿ ಮನೆಯಂಗಣದಲ್ಲಿ ಶನಿವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸವಾಲನ್ನು ಎದುರಿಸಲಿದ್ದಾರೆ.

ಈ ನಡುವೆ ಅಭಿಮಾನಿಗಳ ಹೃದಯ ಗೆದ್ದಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಅತಿ ವಿಶೇಷವಾದ ಸಂದೇಶವನ್ನು ರವಾನಿಸಿದ್ದಾರೆ.

ಅಭಿಮಾನಿಗಳೇ, ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನಿಜಕ್ಕೂ ಅದ್ಭುತ ಎಂದು ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.

ಅದೇ ಹೊತ್ತಿಗೆ ಮಳೆಯಿಂದಾಗಿ ರದ್ದುಗೊಂಡಿರುವ ಕೊನೆಯ ಪಂದ್ಯವು ತಮ್ಮ ಜೀವನದ ಸ್ಮರಣೀಯ ಪಂದ್ಯಗಳಲ್ಲಿ ಒಂದಾಗಿದೆ ಎಂಬುದನ್ನು ಹೇಳಲು ಮರೆಯಲಿಲ್ಲ.

ಅತ್ತ ಹೇಳಿಕೆ ನೀಡಿರುವ ನಾಯಕ ವಿರಾಟ್ ಕೊಹ್ಲಿ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದ್ದು, ನಿರಾಶದಾಯಕ ಪ್ರದರ್ಶನವನ್ನು ನೀಡಿದ್ದೇವೆ. ನಿಮಗೂ ನಿರಾಸೆಯುಂಟಾಗಿದೆ. ಆದರೆ ಮುಂದಿನ ವರ್ಷ ಉತ್ತಮ ಪ್ರದರ್ಶನ ನೀಡುವ ನಂಬಿಕೆಯಿದೆ ಎಂದರು.

ಹಲವು ಏರಿಳಿತಗಳನ್ನು ಕಂಡಿದ್ದೇವೆ. ಆದರೆ ನಮ್ಮನ್ನು ಬೆಂಬಲಿಸಿದ್ದೀರಿ. ಕೊನೆಯ ಪಂದ್ಯವನ್ನು ಗೆಲುವಿನ ಮೂಲಕ ಕೊನೆಗೊಳಿಸುವ ಇರಾದೆಯಲ್ಲಿದ್ದೇವೆ. ಹಾಗೆಯೇ ವಿಶೇಷವಾದ ಪ್ರದರ್ಶನದ ಭರವಸೆಯಿದೆ ಎಂದು ವಿಲಿಯರ್ಸ್ ಸೇರಿಸಿದರು.

ಇದು ನಮ್ಮ ಅಭಿಮಾನಿಗಳಿಗೆ ಸಲ್ಲಿಸುವ ವಿಶೇಷವಾದ ಸಂದೇಶವಾಗಿದ್ದು, ಮಳೆಯಿಂದಾಗಿ ಮೂರು ತಾಸುಗಳಷ್ಟು ಪಂದ್ಯ ನಷ್ಟವಾದರೂ ನಮ್ಮ ಪಂದ್ಯಕ್ಕಾಗಿ ಸ್ಟೇಡಿಯಂನಲ್ಲಿ ಕಾಯುತ್ತಿದ್ದರು. ಇದು ನಿಜಕ್ಕೂ ವಿಶೇಷವಾಗಿದ್ದು, ವಿಶೇಷವಾಗಿಯೇ ಉಳಿದುಕೊಳ್ಳಲಿದೆ ಎಂದರು.

ಆರ್‌ಸಿಬಿ ಅಭಿಮಾನಿಗಳು ಐಪಿಎಲ್‌ನಲ್ಲೇ ಬೆಸ್ಟ್ ಎಂದು ಕೊಹ್ಲಿ ಹಾಗೂ ವಿಲಿಯರ್ಸ್ ಗುಣಗಾನ ಮಾಡಿದರು. ಅಲ್ಲದೆ ಎಂದಿಗೂ ತಮ್ಮ ಹೃದಯದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಹೇಳಿ ಮಾತನ್ನು ಕೊನೆಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌