ಆ್ಯಪ್ನಗರ

ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ; ಆರ್‌ಸಿಬಿ ಅಭಿಮಾನಿಗಳಿಗೆ ಕೈ ಮುಗಿದ ವಿರಾಟ್ ಕೊಹ್ಲಿ!

ಆರ್‌ಸಿಬಿ ಬೆಂಬಲಕ್ಕೆ ನಿಂತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿರುವ ನಾಯಕ ವಿರಾಟ್ ಕೊಹ್ಲಿ ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ ಎಂಬ ಹೇಳಿಕೆಯನ್ನು ನೀಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

Vijaya Karnataka Web 5 May 2019, 9:36 pm
ಬೆಂಗಳೂರು: ಈ ಮೊದಲೇ ಉಲ್ಲೇಖಿಸಿರುವಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ಲೇ-ಆಫ್ ಹಂತವನ್ನು ಪ್ರವೇಶಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿಫಲವಾಗಿರಬಹುದು.
Vijaya Karnataka Web virat-kohli-century-02


ಆದರೆ ಕೊನೆಯ ಪಂದ್ಯದ ವರೆಗೂ ಬೆನ್ನಿಗೆ ನಿಂತಿರುವ ಆರ್‌ಸಿಬಿ ಅಭಿಮಾನಿಗಳು, ಐಪಿಎಲ್‌ನಲ್ಲೇ ಬೆಸ್ಟ್ ಫ್ಯಾನ್ಸ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ಇದೀಗ ಇದನ್ನೇ ಉಲ್ಲೇಖಿಸಿರುವ ಆರ್‌ಸಿಬಿ ನಾಯಕ ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ ಎಂದು ಅಭಿಮಾನಿಗಳ ಮುಂದೆ ಕೈ ಮುಗಿದುಕೊಂಡಿದ್ದಾರೆ.

ಐಪಿಎಲ್ 2019ರಲ್ಲಿ ಆರ್‌ಸಿಬಿ ಅಭಿಯಾನದ ಅಂತ್ಯದ ಬಳಿಕ ಟ್ವೀಟ್ ಮಾಡಿರುವ ಕ್ಯಾಪ್ಟನ್ ಕೊಹ್ಲಿ, ಆರ್‌ಸಿಬಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಹೇಳಿದ್ದಾರೆ.

ಅಭಿಮಾನಿಗಳಿಂದ ಹಿಡಿದು ಗ್ರೌಂಡ್ ಸ್ಟಾಫ್, ಸಹಾಯ ಸಿಬ್ಬಂದಿಗಳು ಸೇರಿದಂತೆ ಎಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆನಪಿಸಿರುವ ವಿರಾಟ್, ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಅದೇ ಹೊತ್ತಿಗೆ ಮುಂದಿನ ವರ್ಷ ಮತ್ತಷ್ಟು ಪ್ರಬಲವಾಗಿ ಬರುವ ಭರವಸೆಯನ್ನು ನೀಡಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಅದರಲ್ಲೂ ಕನ್ನಡದಲ್ಲೂ ವಿನಯವಂತಿಕೆಯಿಂದ ವಿರಾಟ್ ಟ್ವೀಟ್ ಮಾಡಲು ತೋರಿರುವ ಮನಸ್ಸು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌