ಬೆಂಗಳೂರು: ಯುವ ಪ್ರತಿಭಾವಂತ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಪವರ್ ಪ್ಲೇನಲ್ಲಿ ದಾಳಿ ನಡೆಸುವ ಕೌಶಲ್ಯದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ಸಾಗಿದ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಇದನ್ನು ಸಾಬೀತು ಮಾಡಿರುವ ಸುಂದರ್ ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು.
ಇದನ್ನೇ ಉಲ್ಲೇಖಿಸಿರುವ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಪವರ್ ಪ್ಲೇ ಹಾಗೂ ಮಧ್ಯಮ ಓವರ್ಗಳಲ್ಲಿ ಸುಂದರ್ ಹೆಚ್ಚಿನ ಬೌಲಿಂಗ್ ಆಯ್ಕೆಗೆ ಕಾರಣವಾಗಲಿದ್ದಾರೆ ಎಂದಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಕಪ್ ಗೆದ್ದೇ ಗೆಲ್ಲುವ ಛಲದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಹಲ್ ಜತೆಗೆ ಸುಂದರ್ ಪ್ರಮುಖ ಸ್ಪಿನ್ ಅಸ್ತ್ರವಾಗಲಿದ್ದಾರೆ.
ಶ್ರೀಲಂಕಾದಲ್ಲಿ ವಾಷಿಂಗ್ಟನ್ ಪವರ್ ಪ್ಲೇ ಹಾಗೂ ನಾನು ಮಧ್ಯಂತರ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಈ ಹಿಂದಿನ ಐಪಿಎಲ್ಗಳಲ್ಲಿ ನಾನು ಪವರ್ ಪ್ಲೇನಲ್ಲಿ ದಾಳಿ ಮಾಡುತ್ತಿದ್ದೆ. ನಮಗೀಗ ಹೆಚ್ಚಿನ ಆಯ್ಕೆಯ ಅವಕಾಶಗಳಿವೆ. ಓರ್ವ ಪವರ್ ಪ್ಲೇ ಹಾಗೂ ಮಧ್ಯಂತರ ಅವಧಿಯಲ್ಲಿ ಬಳಕೆ ಮಾಡಬಹುದಾಗಿದೆ ಎಂದು ಚಹಲ್ ವಿವರಿಸಿದರು.
ಈ ಪ್ರಕಾರದ ಆಟದಲ್ಲಿ ನೀವು ದಂಡನೆಗೊಳಗಾಗುವೀರಿ. ಆದರೆ ಕಹಿ ನೆನಪನ್ನು ಮರೆತು ವಿಕೆಟ್ ಪಡೆಯುವುದರಲ್ಲಿ ಗಮನ ಕೇಂದ್ರಿಕರಿಸಬೇಕಿದೆ. ಅಲ್ಲದೆ ಮಣಿಕಟ್ಟಿನ ಸ್ಪಿನ್ನರ್ಗಳಿಗೆ ಅವಕಾಶ ಹೆಚ್ಚಿದೆ ಎಂದು ಚಹಲ್ ನುಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವ ಮೂಲಕ ಭಯಭೀತದಿಂದ ಹೊರಬರಲು ಸಾಧ್ಯವಾಯಿತು ಎಂದು ಚಹಲ್ ಸೇರಿಸಿದರು.
ಇದನ್ನೇ ಉಲ್ಲೇಖಿಸಿರುವ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಪವರ್ ಪ್ಲೇ ಹಾಗೂ ಮಧ್ಯಮ ಓವರ್ಗಳಲ್ಲಿ ಸುಂದರ್ ಹೆಚ್ಚಿನ ಬೌಲಿಂಗ್ ಆಯ್ಕೆಗೆ ಕಾರಣವಾಗಲಿದ್ದಾರೆ ಎಂದಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಕಪ್ ಗೆದ್ದೇ ಗೆಲ್ಲುವ ಛಲದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಹಲ್ ಜತೆಗೆ ಸುಂದರ್ ಪ್ರಮುಖ ಸ್ಪಿನ್ ಅಸ್ತ್ರವಾಗಲಿದ್ದಾರೆ.
ಶ್ರೀಲಂಕಾದಲ್ಲಿ ವಾಷಿಂಗ್ಟನ್ ಪವರ್ ಪ್ಲೇ ಹಾಗೂ ನಾನು ಮಧ್ಯಂತರ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಈ ಹಿಂದಿನ ಐಪಿಎಲ್ಗಳಲ್ಲಿ ನಾನು ಪವರ್ ಪ್ಲೇನಲ್ಲಿ ದಾಳಿ ಮಾಡುತ್ತಿದ್ದೆ. ನಮಗೀಗ ಹೆಚ್ಚಿನ ಆಯ್ಕೆಯ ಅವಕಾಶಗಳಿವೆ. ಓರ್ವ ಪವರ್ ಪ್ಲೇ ಹಾಗೂ ಮಧ್ಯಂತರ ಅವಧಿಯಲ್ಲಿ ಬಳಕೆ ಮಾಡಬಹುದಾಗಿದೆ ಎಂದು ಚಹಲ್ ವಿವರಿಸಿದರು.
ಈ ಪ್ರಕಾರದ ಆಟದಲ್ಲಿ ನೀವು ದಂಡನೆಗೊಳಗಾಗುವೀರಿ. ಆದರೆ ಕಹಿ ನೆನಪನ್ನು ಮರೆತು ವಿಕೆಟ್ ಪಡೆಯುವುದರಲ್ಲಿ ಗಮನ ಕೇಂದ್ರಿಕರಿಸಬೇಕಿದೆ. ಅಲ್ಲದೆ ಮಣಿಕಟ್ಟಿನ ಸ್ಪಿನ್ನರ್ಗಳಿಗೆ ಅವಕಾಶ ಹೆಚ್ಚಿದೆ ಎಂದು ಚಹಲ್ ನುಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವ ಮೂಲಕ ಭಯಭೀತದಿಂದ ಹೊರಬರಲು ಸಾಧ್ಯವಾಯಿತು ಎಂದು ಚಹಲ್ ಸೇರಿಸಿದರು.