ಆ್ಯಪ್ನಗರ

ಸವಾಲುಗಳನ್ನು ಮುಂದಿಡುವಂತೆ ಸಹ ಆಟಗಾರರಿಗೆ ಕೊಹ್ಲಿ ಕರೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಮಗೆ ಎದುರಾದ ಅತಿ ಹೀನಾಯ ಸೋಲುಗಳಲ್ಲಿ ಒಂದಾಗಿದೆ ಎಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಎದುರಾದ 118 ರನ್‌ಗಳ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 31 Mar 2019, 9:06 pm
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತಿ ಕೆಟ್ಟ ಆರಂಭವನ್ನು ಪಡೆದಿದೆ.
Vijaya Karnataka Web virat-kohli-04


ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ವಿಶ್ವಶ್ರೇಷ್ಠ ಆಟಗಾರರನ್ನು ಹೊಂದಿರುವ ಹೊರತಾಗಿಯೂ ಕೆಟ್ಟ ಪ್ರದರ್ಶನ ಮುಂದುವರಿದಿದೆ.

ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ 118 ರನ್‌ಗಳ ಹೀನಾಯ ಸೋಲಿಗೆ ಗುರಿಯಾಗಿತ್ತು. ಇದರಿಂದಾಗಿ ಐಪಿಎಲ್ ಆರಂಭದಲ್ಲೇ ಆರ್‌ಸಿಬಿ ಪ್ಲೇ-ಆಫ್ ಸಾಧ್ಯತೆಗಳು ಕ್ಷೀಣಿಸಿದೆ.

ಇದರಂತೆ ಎಚ್ಚರಿಕೆಯ ಕರೆಗಂಟೆಯನ್ನು ಮನವರಿಕೆ ಮಾಡಿರುವ ನಾಯಕ ವಿರಾಟ್ ಕೊಹ್ಲಿ, ಸಹ ಆಟಗಾರರಲ್ಲಿ ಸವಾಲುಗಳನ್ನು ಮುಂದಿಡುವಂತೆ ಕರೆ ನೀಡಿದ್ದಾರೆ.

ಇದು ನಮ್ಮ ಅತಿ ಕೆಟ್ಟ ಪ್ರದರ್ಶನಗಳಲ್ಲಿ ಒಂದಾಗಿದೆ. ಅಕ್ಷರಶ: ಇನ್ನೇನು ವಿವರಣೆ ನೀಡಲಾರೆ. ಮೊದಲ ಎಸೆತದಿಂದ ಹಿಡಿದು ಅಂತಿಮ ಎಸೆತದ ವರೆಗೂ ಪಂದ್ಯ ನಮ್ಮ ಪರವಾಗಿರಲಿಲ್ಲ. ಗುಣಮಟ್ಟದ ತಂಡದ ವಿರುದ್ಧ ನಾವು ಎಲ್ಲ ವಿಭಾಗದಲ್ಲೂ ಕೆಟ್ಟ ಪ್ರದರ್ಶನವನ್ನು ನೀಡಿದೆವು. ಅವರು ಏಕೆ ಚಾಂಪಿಯನ್ ತಂಡ ಎಂಬುದನ್ನು ತೋರಿಸಿಕೊಟ್ಟರು. ಅವರು ಕಳೆದ ಬಾರಿ ಫೈನಲ್ ಹಾಗೂ 2016ರ ಫೈನಲ್‌ನಲ್ಲಿ ನಮ್ಮನ್ನು ಮಣಿಸಿದ್ದರು. ಎಲ್ಲ ಶ್ರೇಯಸ್ಸು ವಾರ್ನರ್ ಹಾಗೂ ಬೈರ್‌ಸ್ಟೋವ್‌ಗೆ ಸಲ್ಲಬೇಕು ಎಂದರು.

ನಾವು ಬೌಲಿಂಗ್‌ನಲ್ಲಿ ಮತ್ತಷ್ಟು ವೈವಿಧ್ಯತೆಯನ್ನು ಪ್ರಯೋಗ ಮಾಡಬಹುದಾಗಿತ್ತು. ಆದರೆ ಇಂದಿನ ಪಂದ್ಯದ ಗೆಲುವಿಗೆ ಅವರು ಅರ್ಹವಾಗಿದ್ದರು ಎಂದು ನುಡಿದರು.

ಒತ್ತಡದ ಪರಿಸ್ಥಿತಿಯಲ್ಲಿ ಎಬಿಡಿ ವಿಲಿಯರ್ಸ್ ಜತೆ ಬ್ಯಾಟಿಂಗ್ ಮಾಡುವುದು ತಂಡದ ಪಾಲಿಗೆ ಒಳಿತಾಗಲಿದೆ ಎಂಬುದನ್ನು ಅರಿತುಕೊಂಡು ನಾನು ಮೂರನೇ ಕ್ರಮಾಂಕದಲ್ಲಿ ಆಡಿದೆ. ನಮ್ಮ ಮುಂದೆ ಇನ್ನು 11 ಪಂದ್ಯಗಳಿವೆ. ನಮ್ಮ 'ಎ' ದರ್ಜೆಯ ಪ್ರದರ್ಶನವನ್ನು ನೀಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌