ಆ್ಯಪ್ನಗರ

ಕುತೂಹಲದ ಕಣಜ ಈ ವಾರಾಂತ್ಯ: ಗವಾಸ್ಕರ್‌

ಈ ಬಾರಿ ಅತ್ಯುತ್ತಮವಾಗಿ ಪುನರ್‌ಸಂಯೋಜನೆಗೊಂಡ ತಂಡವೆಂದರೆ ಡೆಲ್ಲಿ ಕ್ಯಾಪಿಟಲ್ಸ್‌. ಬಹುಶಃ ಟ್ರೋಫಿ ಎತ್ತಿಹಿಡಿಯುವವರೂ ಅವರೇ.

Vijaya Karnataka 4 May 2019, 10:27 am
ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಸರಣಿಯ ಈ ವಾರಾಂತ್ಯದ ಪಂದ್ಯಗಳು ಕುತೂಹಲ ಮೂಡಿಸಿವೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web DC


ಲೀಗ್‌ ಹಂತ ಮುಕ್ತಾಯಗೊಳ್ಳುವುದಕ್ಕೆ ಇನ್ನೊಂದು ದಿನವಷ್ಟೇ ಬಾಕಿ. ಮೂರು ತಂಡಗಳು ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಗಳಿಸಿವೆ. 4ನೇ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದೆ. ಒಂದು ವೇಳೆ, ಸನ್‌ರೈಸರ್ಸ್‌ ತಂಡ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸದಿದ್ದರೆ ಆ ತಂಡ ತನ್ನನ್ನು ತಾನೇ ಹಳಿದುಕೊಳ್ಳಬೇಕಿದೆ. ಗೆಲ್ಲುವ ಸ್ಥಿತಿಯಿಂದ ಸೋಲಿನ ಪ್ರಪಾತಕ್ಕೆ ಬಿದ್ದ ತಂಡವದು.

ಅಂತಿಮ 11ರ ಸಂಯೋಜನೆಯಲ್ಲೂ ಅವರು ಎಡವಿದ್ದಾರೆ. ಬೈರ್‌ಸ್ಟೋವ್‌ ಮತ್ತು ವಾರ್ನರ್‌ ಅವರಿಂದ ತೆರವಾಗಿರುವ 2 ಸ್ಥಾನ ತುಂಬಬಲ್ಲವರು ಅವರಲ್ಲಿಲ್ಲದಿರಬಹುದು, ನಿಜ. ಆದರೆ, ಅದಕ್ಕೆ ಅವರು ಸಾಕಷ್ಟು ಮೊದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು.

ಈ ಬಾರಿ ಅತ್ಯುತ್ತಮವಾಗಿ ಪುನರ್‌ಸಂಯೋಜನೆಗೊಂಡ ತಂಡವೆಂದರೆ ಡೆಲ್ಲಿ ಕ್ಯಾಪಿಟಲ್ಸ್‌. ಬಹುಶಃ ಟ್ರೋಫಿ ಎತ್ತಿಹಿಡಿಯುವವರೂ ಅವರೇ. ಈ ವಾರಾಂತ್ಯ ಕುತೂಹಲದ ಕಣಜ ಎನಿಸಿಕೊಂಡಿವೆ ಎಂದು ಗವಾಸ್ಕರ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌