ಆ್ಯಪ್ನಗರ

ಆಂಡ್ರೆ ರಸೆಲ್‌ ಸಿಕ್ಸರ್‌ ಬಾರಿಸಿ ಕಣ್ಣೀರಿಟ್ಟಿದ್ದ ಘಟನೆಯನ್ನು ಸ್ಮರಿಸಿದ ವೆಂಕಿ ಮೈಸೂರು!

ಕಳೆದ ವರ್ಷದ ಐಪಿಎಲ್‌ ಪಂದ್ಯವೊಂದರಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಸಿಕ್ಸರ್‌ ಬಾರಿಸಿ ಕಣ್ಣೀರಲು ಕಾರಣವನ್ನು ಕೆಕೆಆರ್‌ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ.

Vijaya Karnataka Web 28 Jul 2020, 7:23 pm
ಹೊಸದಿಲ್ಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸ್ಮರಣೀಯ ಘಟನೆಯೊಂದನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ನೆನಪಿಸಿದ್ದಾರೆ.
Vijaya Karnataka Web Russel


ಕೋಲ್ಕತ್ತಾ ನೂಟ್‌ ರೈಡರ್ಸ್‌ ತಂಡ ಎರಡು ಬಾರಿ ಚಾಂಪಿಯನ್‌ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆಂಡ್ರೆ ರಸೆಲ್‌ ವಿಶ್ವದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಇವರು ಒಮ್ಮೆ ಅಂಗಳದಲ್ಲಿ ಕಣ್ಣೀರಿಟ್ಟಿದ್ದ ಘಟನೆಯನ್ನು ಸಿಇಓ ವೆಂಕಿ ಮೈಸೂರು ಸ್ಮರಿಸಿಕೊಂಡಿದ್ದಾರೆ.

ಸ್ಫೋರ್ಟ್ಸ್‌ಕೀಡಾದ ಫೇಸ್‌ಬುಕ್‌ ಪೇಜ್‌ನಲ್ಲಿ ಇಂದ್ರಾನಿಲ್‌ ಬಸು ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು ಹಲವು ಬಗೆಯ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಜನಸಂದಣಿಯ ಪ್ರತಿಕ್ರಿಯೆಗಳು ಆಟಗಾರರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಒಂದು ಪ್ರಮುಖ ಅಂಶವಾಗಿತ್ತು. ಜತೆಗೆ ರಸೆಲ್‌ ಅವರ ಬಗ್ಗೆಯೂ ಚರ್ಚೆ ನಡೆಯಿತು. ವಿಂಡೀಸ್‌ ದೈತ್ಯ ಆಲ್‌ರೌಂಡರ್‌ ಈ ಬಾರಿಯೂ ಕೆಕೆಆರ್‌ ತಂಡದ ಪರ ಸಿಕ್ಸರ್‌ ಬಾರಿಸಲಿದ್ದಾರೆ.

500 ವಿಕೆಟ್‌ಗಳು ಕಿತ್ತು ಎಲೈಟ್‌ ಬೌಲರ್‌ಗಳ ಪಟ್ಟಿ ಸೇರಿದ ಸ್ಟುವರ್ಟ್‌ ಬ್ರಾಡ್‌!

ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ 2019ರ ಐಪಿಎಲ್‌ ಎರಡನೇ ಪಂದ್ಯದಲ್ಲಿ ಆಂಡ್ರೆ ರಸೆಲ್‌ಗೆ ಭುವನೇಶ್ವರ್‌ ಕುಮಾರ್ ಬೌಲಿಂಗ್‌ ಮಾಡಿದ್ದ ವೇಳೆ ಕಣ್ಣೀರಿಟ್ಟಿದ್ದರು. ಕೋಲ್ಕತ್ತಾದಲ್ಲಿ ತವರು ಅಭಿಮಾನಿಗಳ ನಡುವೆ ಯಾವುದೇ ಪಂದ್ಯವಾಡಿದರೂ ಗೆಲ್ಲಲೇಬೇಕಾದ ಒತ್ತಡ ನಮ್ಮ ಮೇಲಿರುತ್ತದೆ. ಅಂದ ಹಾಗೆ ಅಂದು ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೇವಲ 19 ಎಸೆತಗಳಲ್ಲಿ 49 ರನ್‌ ಚಚ್ಚಿದ ರಸೆಲ್‌, ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡಕ್ಕೆ ಜಯ ತಂದುಕೊಟ್ಟರು.

"ಈ ಬಾರಿ ಐಪಿಎಲ್‌ ಸಂಪೂರ್ಣ ವಿಭಿನ್ನವಾಗಿರುತ್ತದೆ. ಮೊದಲ ಬಾರಿ ವೀಕ್ಷಕರಿಲ್ಲದೆ ಆಟಗಾರರು ಐಪಿಎಲ್ ಆಡುವುದು ವಿಶೇಷ ಅನುಭವವನ್ನು ಕೊಡುತ್ತದೆ. ಕಳೆದ ವರ್ಷ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಅಸಾಧ್ಯವಾದ ಸನ್ನಿವೇಶ ಉದ್ಬವವಾಗಿತ್ತು. ಡೆತ್‌ ಓವರ್‌ಗಳ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾದ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ಗೆ ಆಡಲು ರಸೆಲ್‌ ಕ್ರೀಸ್‌ಗೆ ಹೋದರು," ಎಂದು ವೆಂಕಿ ಮೈಸೂರು ಹೇಳಿದರು.

ಸೆಹ್ವಾಗ್‌ ರೀತಿ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸುವ ಸಾಮರ್ಥ್ಯ ಈತನಲ್ಲಿದೆ.! : ಗೌತಮ್‌ ಗಂಭೀರ್‌

ಮಾತು ಮುಂದುವರಿಸಿದ ವೆಂಕಿ ಮೈಸೂರು, ಜಮೈಕಾ ಮೂಲದ ಆಟಗಾರ ಆಫ್‌ ಸ್ಟಂಪ್‌ ಮೇಲೆ ನಿಧಾನಗತಿಯ ಚೆಂಡು ಎಸೆದರೂ, ಬೌಂಡರಿ, ಸಿಕ್ಸರ್‌ ಬಾರಿಸಿದ್ದರು. ಬೌಲರ್‌ ಎಂತಹ ಎಸೆತ ಹಾಕಿದರೂ, ರಸೆಲ್‌ ಚೆಂಡನ್ನು ಸುಲಭವಾಗಿ ಬೌಂಡರಿ ಗೆರೆ ದಾಟಿಸಿದ್ದರು. ಅವರ ಆಟ ನೋಡುವುದೇ ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡರು.

"ಅವತ್ತು ಆಂಡ್ರೆ ರಸೆಲ್‌ ಅವರ ದಿನವಾಗಿತ್ತು. ಆಫ್‌ ಸ್ಟಂಪ್‌ನಿಂದ ಹೊರಗಡೆಯ ನಿಧಾನಗತಿಯ ಎಸೆತವೊಂದಕ್ಕೆ ಅವರು ಶಾಟ್‌ ಹೊಡೆದಿದ್ದರು. ಆ ಚೆಂಡನ್ನು ತಲುಪಲು ಅವರ ಕೈಯಲ್ಲಿ ಸಾಧ್ಯವಾಗಲಿಲ್ಲ ಆದರೆ, ಆ ಎಸೆತವನ್ನು ಸಿಕ್ಸರ್‌ ಕಳುಹಿಸಿದರು. ಪಂದ್ಯ ಮುಗಿದ ಬಳಿಕ ಯಾವ ಬಗೆಯ ಶಾಟ್‌ ಅಂದು ಅವರನ್ನು ಕೇಳಿದ್ದೆ," ಎಂದು ವೆಂಕಿ ಕಳೆದ ವರ್ಷದ ಪಂದ್ಯವನ್ನು ಮೆಲುಕು ಹಾಕಿದರು.

ಮುಂದಿನ ದಶಕದಲ್ಲಿ ಈ ಯುವ ಪ್ರತಿಭೆ ಎಲ್ಲರ ಹೃದಯ ಕದಿಯಲ್ಲಿದ್ದಾರೆಂದ ಚೋಪ್ರ!

ಆ ಶಾಟ್‌ ನಿಂದ ಸಿಕ್ಸರ್‌ ಬಾರಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಅಭಿಮಾನಿಗಳ ಪ್ರತಿಕ್ರಿಯೆ ಅದ್ಭುತವಾಗಿತ್ತು, ಆ ಕ್ಷಣ ರಸೆಲ್‌ ಕಣ್ಣೀರು ಸುರಿಸಿದರು. ಪ್ರೇಕ್ಷಕರ ಪ್ರತಿಕ್ರಿಯೆ ಆಟಗಾರರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಅಂಶವನ್ನು ವೆಂಕಿ ಮೈಸೂರು ವಿವರಿಸಿದರು. ಆ ಆವೃತ್ತಿಯಲ್ಲಿ ರಸೆಲ್‌ 510 ರನ್‌ಗಳು ಹಾಗೂ 11 ವಿಕೆಟ್‌ಗಳನ್ನು ಕಬಳಿಸಿದ್ದರು, ಜತೆಗೆ ಟೂರ್ನಿ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

"ಅವರು(ರಸೆಲ್‌) ಹೇಳಿದ ಹಾಗೆ, 'ಮ್ಯಾನ್‌, ನನಗೆ ಗೊತ್ತಿಲ್ಲ. ಪ್ರೇಕ್ಷಕರು ನನ್ನನ್ನು ಆ ರೀತಿ ಹೊಡೆಯಲು ಪ್ರೇರೇಪಿಸಿದರು. ಆ ಶಾಟ್‌ ಹೊಡೆದ ಬಳಿಕ ಅಭಿಮಾನಿಗಳ ಪ್ರತಿಕ್ರಿಯೆಯಿಂದ ನನ್ನ ಭಾವನೆಗಳನ್ನು ತಡೆಯಲು ಸಾಧ್ಯವಾಗಲಿಲ್ಲ, ಕಣ್ಣಲ್ಲಿ ನೀರು ತುಂಬಿಕೊಂಡಿತು.' ಪ್ರೇಕ್ಷಕರ ಪ್ರತಿಕ್ರಿಯೆ ಆಟಗಾರರ ಮೇಲೆ ಪ್ರಭಾವ ಬೀರುವುದನ್ನು ಇದು ಸಾಬೀತು ಪಡಿಸುತ್ತದೆ," ಎಂದು ರಸೆಲ್‌ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌