ಆ್ಯಪ್ನಗರ

ಸೋಲಿನ ಸುಳಿಯಿಂದ ಪಾರಾಗುವುದೇ ಕೊಹ್ಲಿ ಪಡೆ

ಮನೆಯಂಗಳ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬಯಿ ಇಂಡಿಯನ್ಸ್‌ ವಿರುದ್ಧ ಕೊನೇ ಎಸೆತದವರೆಗೂ ಹೋರಾಟ ನಡೆಸಿದ್ದ ಕೊಹ್ಲಿ ಬಳಗ, ಆನ್‌ಫೀಲ್ಡ್‌ ಅಂಪೈರ್‌ ಎಸಗಿದ ಪ್ರಮಾದದಿಂದಾಗಿ ಗೆಲುವಿನ ಅವಕಾಶವೊಂದನ್ನು ಕಳೆದುಕೊಂಡಿತು.

Vijaya Karnataka Web 31 Mar 2019, 10:40 am
ಹೈದರಾಬಾದ್‌: ಸತತ ಎರಡು ಸೋಲುಗಳಿಂದ ಬಸವಳಿದಿರುವ ವಿರಾಟ್‌ ಕೊಹ್ಲಿ ಸಾರಥ್ಯದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ 12ನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಭಾನುವಾರ ಕಣಕ್ಕಿಳಿಯುತ್ತಿದ್ದು, ಪುಟಿದೇಳುವ ವಿಶ್ವಾಸದಲ್ಲಿದೆ.
Vijaya Karnataka Web Kohli


ಮನೆಯಂಗಳ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬಯಿ ಇಂಡಿಯನ್ಸ್‌ ವಿರುದ್ಧ ಕೊನೇ ಎಸೆತದವರೆಗೂ ಹೋರಾಟ ನಡೆಸಿದ್ದ ಕೊಹ್ಲಿ ಬಳಗ, ಆನ್‌ಫೀಲ್ಡ್‌ ಅಂಪೈರ್‌ ಎಸಗಿದ ಪ್ರಮಾದದಿಂದಾಗಿ ಗೆಲುವಿನ ಅವಕಾಶವೊಂದನ್ನು ಕಳೆದುಕೊಂಡಿತು. ಇದಕ್ಕೂ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಚೆನ್ನೈನಲ್ಲಿ ನಡೆದ ಹಾಲಿ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಸೋಲುಂಡಿತ್ತು.

ನಾಯಕ ಕೊಹ್ಲಿ, ಎಬಿ ಡಿ' ವಿಲಿಯರ್ಸ್‌ ಮತ್ತು ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಫಾರ್ಮ್‌ ಕಂಡುಕೊಂಡಿರುವುದು ಆರ್‌ಸಿಬಿ ತಂಡದ ಆತ್ಮಶಕ್ತಿಯನ್ನು ವೃದ್ಧಿಸಿದೆ.

ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿರುವ ಸನ್‌ರೈಸರ್ಸ್‌ ಗೆಲುವಿನ ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ. ಆಸೀಸ್‌ ಆಟಗಾರ ಡೇವಿಡ್‌ ವಾರ್ನರ್‌ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್‌ ಅವರ ಮಿಂಚಿನ ಬ್ಯಾಟಿಂಗ್‌ ಬಲದಿಂದ ಕಂಗೊಳಿಸಿದ ಹೈದರಾಬಾದ್‌ ತಂಡ, ರಾಯಲ್ಸ್‌ ದಾಖಲಿಸಿದ್ದ ಬೃಹತ್‌ ಮೊತ್ತ ಬೆನ್ನಟ್ಟಿ ಜಯ ದಾಖಲಿಸಿದೆ. ಇದು ಆಟಗಾರರಲ್ಲಿ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಿದೆ.

ದಿನದ ಎರಡನೇ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಎದುರಾಗುತ್ತಿವೆ. ಸತತ ಎರಡು ಗೆಲುವು ಕಂಡಿರುವ ಎಂ.ಎಸ್‌ ಧೋನಿ ಪಡೆ ಹ್ಯಾಟ್ರಿಕ್‌ ಜಯದ ಗುಂಗಿನಲ್ಲಿದ್ದರೆ, ರಾಜಸ್ಥಾನ ಸತತ 2 ಸೋಲುಗಳಿಂದ ಹೊರಬರುವ ನಿರೀಕ್ಷೆಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌