ಆ್ಯಪ್ನಗರ

ಆರ್‌ಸಿಬಿ ಈ ಬಾರಿ ಐಪಿಎಲ್ ಗೆಲ್ಲುವ ನೆಚ್ಚಿನ ತಂಡವೆನ್ನಲು 3 ಕಾರಣಗಳಿವೆ!

ಕಳೆದ ಬಾರಿ ಆವೃತ್ತಿಗಳಿಗಿಂತ ಈ ಬಾರಿ ಆರ್‌ಸಿಬಿ ತಂಡ ಬಲಿಷ್ಠವಾಗಿದೆ. ಹಾಗಾಗಿ 13ನೇ ಆವೃತ್ತಿಯ ಐಪಿಎಲ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಆರ್‌ಸಿಬಿ ಎಂದು ಹೇಳಲು ಪ್ರಮುಖ 3 ಕಾರಣಗಳು ಇಲ್ಲಿವೆ.

Vijaya Karnataka Web 10 Aug 2020, 2:09 pm
ಬೆಂಗಳೂರು: ಪ್ರತಿಬಾರಿಯು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿ ಆಡುವ ಪ್ರಮುಖ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಒಂದಾಗಿರುತ್ತದೆ. ಆದರೆ ಒಮ್ಮೆಯೂ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ಭಾರಿ ನಿರಾಸೆಯನ್ನು ಉಂಟು ಮಾಡಿದೆ.
Vijaya Karnataka Web 3 reasons why rcb are favourites to win ipl 2020 title
ಆರ್‌ಸಿಬಿ ಈ ಬಾರಿ ಐಪಿಎಲ್ ಗೆಲ್ಲುವ ನೆಚ್ಚಿನ ತಂಡವೆನ್ನಲು 3 ಕಾರಣಗಳಿವೆ!


ವಿಶ್ವ ದರ್ಜೆಯ ಆಟಗಾರರು ಹಾಗೂ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯ ಹೊರತಾಗಿಯೂ ಆರ್‌ಸಿಬಿಯು ಪ್ರತಿ ಆವೃತ್ತಿಯಲ್ಲೂ ಕೆಲ ವಿಭಾಗಗಳ ವೈಫಲ್ಯದಿಂದ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಸಾಮಾನ್ಯವಾಗಿ ಕೊಹ್ಲಿ ಅಥವಾ ಅವರ ಸಹ ಆಟಗಾರ ಎಬಿ ಡಿವಿಲಿಯರ್ಸ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಲ್ಲದೆ, ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರದ ಕಾರಣ, ಆರ್‌ಸಿಬಿ ಆಡುವುದಕ್ಕೂ ಮೊದಲೇ ಹರಾಜಿನಲ್ಲಿಯೇ ಐಪಿಎಲ್ ಟ್ರೋಫಿ ವಂಚಿತವಾಗುತ್ತಿದೆ.

ಆದರೆ, ಈ ಬಾರಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ತಂಡವಾಗಿ 13ನೇ ಆವೃತ್ತಿಗೆ ಕಣಕ್ಕೆ ಇಳಿಯಲಿದೆ. ಮೂರು ವಿಭಾಗಗಲ್ಲಿ ತಂಡ ಬಲಿಷ್ಠವಾಗಿದೆ. 2020ರ ಆವೃತ್ತಿಯ ಐಪಿಎಲ್‌ ಸೆಪ್ಟೆಂಬರ್‌ 19 ರಂದು ಯುಎಇಯಲ್ಲಿ ಆರಂಭವಾಗಲಿದ್ದು, ಈ ಬಾರಿ ಆರ್‌ಸಿಬಿ ಯುವ ಆಟಗಾರರೊಂದಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಗೆ ಮರಳಲಿದೆ.

​ರನ್‌ ಗಳಿಸುವ ತುಡಿತದಲ್ಲಿರುವ ಯುವ ಪ್ರತಿಭೆಗಳು

21 ಸದಸ್ಯರ ಆರ್‌ಸಿಬಿ ತಂಡದಲ್ಲಿರುವ ಹಲವು ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ವಿಶ್ವದ ಪ್ರಮುಖ ಫ್ರಾಂಚೈಸಿ ಲೀಗ್‌ಗೆ ಸಜ್ಜಾಗುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್‌ ಆರ್‌ಸಿಬಿ ಪರ ಐಪಿಎಲ್‌ ಆಡಲು ತುದಿಗಾಲಲ್ಲಿ ನಿಂತಿದ್ದಾರೆ. 2019-20ರ ಆವೃತ್ತಿಯ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅವರು 609 ರನ್‌ಗಳನ್ನು ಗಳಿಸಿದ್ದರು. ಜತೆಗೆ, ಜೋಶ್‌ ಫಿಲಿಪ್‌ ಅವರನ್ನು ಭವಿಷ್ಯದ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಎಂದು ಹೇಳಲಾಗುತ್ತಿದೆ. ಅವರು ಈ ಬಾರಿ ಆರ್‌ಸಿಬಿ ಬಲ ತುಂಬಲಿದ್ದಾರೆ.

ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 20ರ ಪ್ರಾಯದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ ಆಲ್‌ರೌಂಡರ್‌ ಆಗಿ ತಂಡಕ್ಕೆ ಆಸರೆಯಾಗಲಿದ್ದಾರೆ. ತಮಿಳುನಾಡು ಆಫ್-ಸ್ಪಿನ್ನರ್ ತಿರುವು ನೀಡುವ ಪಿಚ್‌ಗಳಲ್ಲಿ ಅತ್ಯುತ್ತಮ ಮತ್ತು ನಿಖರತೆಯಿಂದ ಬೌಲಿಂಗ್‌ ಮಾಡಲಿದ್ದಾರೆ. ಅಲ್ಲದೆ, ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಲಿದ್ದಾರೆ.

ಐಪಿಎಲ್‌ ಇತಿಹಾಸದ ಟಾಪ್ 5 ಜೊತೆಯಾಟಗಳು, ಆರ್‌ಸಿಬಿ ತಂಡದ್ದೇ ದರ್ಬಾರು!

​ಡೆತ್‌ ಬೌಲಿಂಗ್‌ ಸಮಸ್ಯೆ ನಿವಾರಣೆ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಹಿಂದಿನ ಆವೃತ್ತಿಗಳಲ್ಲಿ ಡೆತ್‌ ಬೌಲರ್‌ಗಳ ಗುಣಮಟ್ಟದ ಸಮಸ್ಯೆಯನ್ನು ಎದುರಿಸಿತ್ತು. ಕಳೆದ ಬಾರಿ ಮಿಚೆಲ್‌ ಸ್ಟಾರ್ಕ್‌ ಗಾಯಕ್ಕೆ ತುತ್ತಾಗಿದ್ದರೆ, ಟಿಮಿಲ್‌ ಮಿಲ್ಸ್ ಅವರ ಸೇವೆ ಉಪಯುಕ್ತವಾಗಿರಲಿಲ್ಲ. ಕೊಹ್ಲಿ ಪಡೆಯಲ್ಲಿ ಭಾರತದ ಉನ್ನತ ಗುಣಮಟ್ಟದ ಬೌಲರ್‌ಗಳ ಸಮಸ್ಯೆಕಾಡಿತ್ತು.

ಆದರೆ, ಈ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಕ್ರಿಸ್‌ ಮೋರಿಸ್‌ 10 ಕೋಟಿ ರೂ. ಹಾಗೂ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್‌ 4 ಕೋಟಿ ರೂ.ಗಳಿಗೆ ಆರ್‌ಸಿಬಿಗೆ ಸಹಿ ಮಾಡಿದ್ದಾರೆ. ಆ ಮೂಲಕ ಕೊಹ್ಲಿ ಪಡೆ ಕೊನೆಗೂ ಉನ್ನತ ದರ್ಜೆಯ ಬೌಲಿಂಗ್‌ ವಿಭಾಗವನ್ನು ಪಡೆಯಿತು. ಮೋರಿಸ್‌ ವಿಶ್ವದಾದ್ಯಂತ ಆಡಿರುವ ಅನುಭವವನ್ನು ಹೊಂದಿದ್ದರೆ, ಕೇನ್‌ ರಿಚರ್ಡ್ಸನ್‌ ಬಿಗ್‌ ಬ್ಯಾಷ್‌ನ ಡೆತ್‌ ಓವರ್‌ಗಳನ್ನು ಮಾಡಿರುವ ಅನುಭವ ಹೊಂದಿದ್ದಾರೆ. ನವದೀಪ್‌ ಸೈನಿ, ಉಮೇಶ್‌ ಯಾದವ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಕಳೆದ ಬಾರಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಈ ಬಾರಿ ಸಜ್ಜಾಗಿದ್ದಾರೆ.

ಈ ಬಾರಿಯ ಐಪಿಎಲ್‌ಗೆ ಆಟಗಾರರಲ್ಲಿ ಇರಬೇಕಾದ ಬಹುಮುಖ್ಯ ಅಂಶವನ್ನು ವಿವರಿಸಿದ ರೈನಾ!

​ಆರ್‌ಸಿಬಿಗೆ ಅನುಭವಿ ಆಟಗಾರರ ಬಲ

ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್‌ ಫಿಂಚ್‌ ಅವರನ್ನು 4.4 ಕೋಟಿ ರೂ.ಗಳಿಗೆ ಖರೀದಿಸಿರುವುದರಿಂದ ಆರ್‌ಸಿಬಿ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಬಲ ಬಂದಂತಾಗಿದೆ. ಆ ಮೂಲಕ ನಾಯಕ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲಿದ್ದ ಒತ್ತಡ ಕಡಿಮೆಯಾಗಿದೆ. ಅಗ್ರ ಕ್ರಮಾಂಕ ಹಾಗೂ ನಾಯಕತ್ವದಲ್ಲಿ ಅನುಭವ ಹೊಂದಿರುವ ಫಿಂಚ್‌ನಿಂದ ಆರ್‌ಸಿಬಿಗೆ ದೊಡ್ಡ ಮೊತ್ತದ ರನ್‌ಗಳು ಖಾತೆಗೆ ಸೇರ್ಪಡೆಯಾಗಲಿವೆ.

ಆರೋನ್‌ ಫಿಂಚ್‌ ಹಾಗೂ ಪಾರ್ಥಿವ್‌ ಪಟೇಲ್‌ ಜೋಡಿ ಆರ್‌ಸಿಬಿಗೆ ಇನಿಂಗ್ಸ್ ಆರಂಭಿಸಲಿದೆ. ದೇವದತ್ತ ಪಡಿಕ್ಕಲ್‌ ಅಥವಾ ಜೋಸ್‌ ಫಿಲಿಪ್‌ ಅವರಲ್ಲಿ ಒಬ್ಬರಿಗೆ ಅಂತಿಮ 11ರಲ್ಲಿ ಅವಕಾಶ ಕಲ್ಪಿಸಬಹುದು. ಇಂಗ್ಲೆಂಡ್‌ನ ಆಲ್‌ರೌಂಡರ್‌ ಮೊಯಿನ್‌ ಅಲಿ ಕೂಡ ತಂಡಕ್ಕೆ ಅತ್ಯಂತ ಮೌಲ್ಯಯುತ ಆಟಗಾರರಾಗಿದ್ದಾರೆ. ಕೊಹ್ಲಿಗೆ ತೀರ್ಮಾನ ತೆಗೆದುಕೊಳ್ಳುವಲ್ಲಿ ಮೊಯಿನ್ ಅಲಿ ಸಹಾಯ ಮಾಡಲಿದ್ದಾರೆ.

ಕ್ಯಾಪ್ಟನ್‌ ತಂಡದ ಮುಖ್ಯ ಆಟಗಾರನಲ್ಲ ಎಂದ ರೋಹಿತ್ ಶರ್ಮಾ!

​ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡುವುದು ಗುರಿ: ಫಿಂಚ್


"ಮೊದಲ ಬಾರಿ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಲಿದ್ದೇನೆ. ಹೀಗಾಗಿ ನನ್ನಲ್ಲಿ ಉತ್ಸುಕತೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಐಪಿಎಲ್‌ನಲ್ಲಿ ಅವರೆದುರು ಹಲವು ವರ್ಷಗಳ ಕಾಲ ಆಡಿದ್ದೇನೆ. ಅವರು ತಂದೊಡ್ಡುವ ಸ್ಪರ್ಧೆಯ ಬಗ್ಗೆ ನನಗೆ ಅರಿವಿದೆ. ಈಗ ಜೊತೆಯಾಗಿ ಆಡಿದ ಅನುಭವ ಪಡೆದುಕೊಳ್ಳಬೇಕೆಂದಿದ್ದೇನೆ," ಎಂದಿದ್ದಾರೆ.

"ನನ್ನ ಅನುಭವ ತಂಡದ ನೆರವಿಗೆ ಬರಲಿದೆಯೆಂದು ಅಂದುಕೊಂಡಿದ್ದೇನೆ. ವಿರಾಟ್‌ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡಲು ನನ್ನಿಂದ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದೇನೆ," ಎಂದು ಫಿಂಚ್‌ ಹೇಳಿದ್ದಾರೆ.

"ಆರ್‌ಸಿಬಿ ತಂಡ ಸೇರಿಕೊಳ್ಳುವುದನ್ನು ಬಹಳ ಕಾತುರದಿಂದ ಎದುರು ನೋಡುತ್ತಿದ್ದೇನೆ. ಶ್ರೇಷ್ಠ ಆಟಗಾರರ ದಂಡನ್ನೇ ಹೊಂದಿರುವ ಫ್ರಾಂಚೈಸಿ ತಂಡದ ಭಾಗವಾಗುತ್ತಿರುವುದು ಸಂತಸವೇ ಸರಿ. ಇನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮನೆಯಂಗಣದ ಪ್ರೇಕ್ಷಕರ ಎದುರು ಆಡಿದ್ದರೆ ಅದರ ಅನುಭವವೇ ಬೇರೆಯಿತ್ತು. ಆದರೂ ಯುಎಇನಲ್ಲಿ ಆರ್‌ಸಿಬಿ ಪರ ಆಡುವುದು ಕೂಡ ನನ್ನ ಪಾಲಿಗೆ ಬಹುದೊಡ್ಡ ಸಂಗತಿ," ಎಂದಿದ್ದಾರೆ.

ಐಪಿಎಲ್ 2020: ಪಂಜಾಬ್‌ಗೆ ಪ್ರಶಸ್ತಿ ಗೆಲ್ಲಲು ನೆರವಾಗುವ ವ್ಯಕ್ತಿಯನ್ನು ಹೆಸರಿಸಿದ ಬ್ರೆಟ್ ಲೀ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌