ಆ್ಯಪ್ನಗರ

ಆರ್‌ಸಿಬಿ ಲೊಗೊ, ಪೋಸ್ಟ್ ಕಣ್ಮರೆ; ಗಲಿಬಿಲಿಗೊಂಡ ಕ್ಯಾಪ್ಟನ್ ಕೊಹ್ಲಿ, ವಿಲಿಯರ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಾದ ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪುಟಗಳಿಂದ ಲೊಗೊ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವುದು ವ್ಯಾಪಕ ಗೊಂದಲಕ್ಕೆ ಕಾರಣಾಗಿದೆ.

Vijaya Karnataka Web 13 Feb 2020, 10:15 am
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಧಿಕೃತ ಖಾತೆಗಳಿಂದ ಲಾಂಛನವನ್ನು ತೆಗೆದು ಹಾಕಿರುವುದು ಹಾಗೂ ಪೋಸ್ಟ್‌ಗಳು ಕಣ್ಮರೆಯಾಗಿರುವುದು ಹೆಚ್ಚಿನ ಗೊಂದಲಗಳಿಗೆ ಕಾರಣವಾಗಿದೆ. ಈ ನಡುವೆ ಆರ್‌ಸಿಬಿ ಕಪ್ತಾನ ವಿರಾಟ್ ಕೊಹ್ಲಿ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಹಾಗೂ ಕೋಚ್ ಮೈಕ್ ಹೆಸ್ಸನ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
Vijaya Karnataka Web ಆರ್‌ಸಿಬಿ ಲೊಗೊ ಕಣ್ಮರೆ


ನಾಯಕನಿಗೆ ಮಾಹಿತಿ ನೀಡದೆಯೇ ಪೋಸ್ಟ್‌ಗಳು ಕಣ್ಮರೆಯಾಗಿದೆ ಎಂದು ವಿರಾಟ್ ಕೊಹ್ಲಿ ಕೊರಗಿದ್ದಾರೆ. ಹಾಗೆಯೇ 'ಏನಾದರೂ ಸಹಾಯ ಬೇಕಾದಲ್ಲಿ ತಿಳಿಸಿ' ಎಂದು ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗೆ ಮಿಸ್ಟರ್ 360 ಡಿಗ್ರಿ ಖ್ಯಾಯಿಯ ಎಬಿಡಿ ವಿಲಿಯರ್ಸ್ ಕೂಡಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. 'ಸೋಷಿಯಲ್ ಮೀಡಿಯಾ ಖಾತೆಗಳಿಗೆ ಏನು ಸಂಭವಿಸಿದೆ? ಬಹುಶ: ಇದೊಂದು ಸ್ಟ್ರಾಟಜಿ ಬ್ರೇಕ್' ಆಗಿರಬಹದು ಎಂದು ಗೆಲುವಿನ ಸಂಕೇತವನ್ನು ಮಾಡಿದ್ದಾರೆ.

ಐಪಿಎಲ್‌ 2020 ಟೂರ್ನಿಗೂ ಮುನ್ನ ಅಭಿಮಾನಿಗಳಿಗೆ ಆರ್‌ಸಿಬಿ ಸರ್‌ಪ್ರೈಸ್‌?

ಇಲ್ಲಿ ಗಮನಾರ್ಹ ವಿಷಯವೇನೆಂದರೆ ಸ್ವತ: ಕೋಚ್ ಆಗಿರುವ ಮೈಕ್ ಹೆಸ್ಸನ್‌ ಅವರಿಗೂ ವಿಷಯ ಏನೆಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಹೆಸ್ಸನ್, 'ಎಲ್ಲವೂ ಓಕೆ ಎಂದು ಭಾವಿಸುತ್ತೇನೆ. ನಮ್ಮ ಪ್ರೊಫೈಲ್ ಚಿತ್ರಗಳಿಗೆ ಏನು ಸಂಭವಿಸಿದೆ' ಎಂಬುದು ಚಿಂತೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆ ವೇಳೆಯಲ್ಲಿ ತನ್ನ ಅಧಿಕೃತ ಲಾಂಛನದಿಂದ ಬೆಂಗಳೂರು ಹೆಸರನ್ನು ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತು. ಆದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಆರ್‌ಸಿಬಿ ಮುಂದಾಗಿರಲಿಲ್ಲ.

ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲು 6 ಕಾರಣಗಳು!

ಇದೀಗ ಏಕಾಏಕಿ ಆರ್‌ಸಿಬಿ ಅಧಿಕೃತ ಸಾಮಾಜಿಕ ಖಾತೆಗಳಲ್ಲಿ ಲಾಂಛನ ಹಾಗೂ ಪೋಸ್ಟ್‌ಗಳು ನಾಪತ್ತೆಯಾಗಿದೆ. ಇದರ ಹಿಂದಿನ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಫ್ರಾಂಚೈಸಿ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.


ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪುಟಗಳಲ್ಲಿ ಲೊಗೊ, ಕವರ್ ಫೋಟೋ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವ ಆರ್‌ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದು ಹೆಸರು ಅಥವಾ ಲೊಗೊ ಬದಲಾಯಿಸುವ ತಂತ್ರವೇ ಎಂಬುದು ತಿಳಿದು ಬಂದಿಲ್ಲ. ಆದರೆ ಇಂತಹ ವಿಚಾರಗಳನ್ನು ಗೌಪ್ಯವಾಗಿ ಮಾಡುವ ಅಗತ್ಯವಿತ್ತೇ ಅಥವಾ ನಾಯಕ ಹಾಗೂ ಕೋಚ್ ಗಮನಕ್ಕೂ ತರದಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಲೆಕ್ಕಕ್ಕೆ ಮೀರಿ ಆರ್‌ಸಿಬಿ ಕಿಸೆ ಖಾಲಿ ಮಾಡಿದ ಆಟಗಾರರು

ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಲ್ ಸಹ ಆತಂಕವನ್ನು ವ್ಯಕ್ತಪಡಿಸಿದ್ದಾರೆ. 'ಏನು ಗೂಗ್ಲಿ ಇದು? ಪ್ರೊಫೈಲ್ ಚಿತ್ರ ಹಾಗೂ ಇನ್‌ಸ್ಟಾಗ್ರಾಂ ಪೋಸ್ಟ್‌ಗಳು ಎಲ್ಲಿ ಹೋಯಿತು' ಎಂದು ಪ್ರಶ್ನಿಸಿದ್ದಾರೆ.



ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಆರ್‌ಸಿಬಿಯನ್ನು ಕಾಲೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. 'ಹಾಗೊಂದು ವೇಳೆ ಮತ್ತೆ ಬ್ರಾಂಡಿಂಗ್ ಮಾಡುವುದರೆ ಏನಾದರೂ ಸಹಾಯ ಬೇಕಿದ್ದರೆ ಕೇಳಿ. ಒಂದೆರಡು ಅಂಶಗಳು ನಮಗೂ ಗೊತ್ತಿದೆ' ಎಂದು ತಿಳಿಸಿದೆ.


ಒಟ್ಟಾರೆಯಾಗಿ ಐಪಿಎಲ್ 2020ನೇ ಆವೃತ್ತಿಗೆ ಕಾಲಿಡುತ್ತಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಕಿರೀಟದ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಕಂಡುಬರಲಿರುವ ಬದಲಾವಣೆಗಳೇನು ಎಂಬುದನ್ನು ಕಾದು ನೋಡಬೇಕಿದೆ.


ಆ್ಯರೋನ್ ‌ಫಿಂಚ್‌ಗೆ ತಟ್ಟಿದ ಆರ್‌ಸಿಬಿ ಹಿಡಿಶಾಪ; 'ಈ ಸಲ ಕಪ್ ನಮ್ದೆ' ಎಂದು ಹೃದಯ ಗೆದ್ದ ಡೇಲ್ ಸ್ಟೇನ್

ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌