ಮ್ಯಾಂಚೆಸ್ಟರ್: ಶನಿವಾರ ರಾತ್ರಿ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಹಾಲಿ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯ ಮುಗಿಯುವವರೆಗೆ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಯಾರು ಆಕ್ರಮಿಸಿಕೊಳ್ಳುತ್ತಾರೆ ಎಂಬುದು ಖಾತರಿಯಾಗಿರಲಿಲ್ಲ. ಕೊನೆಗೂ ಹರಿಣ ಪಡೆ ಎದುರು ಕಾಂಗರೂ ಪಡೆ ಮಂಡಿಯೂರಿದಾಗ, ಅಷ್ಟರಲ್ಲಾಗಲೇ 15 ಅಂಕಗಳನ್ನು ಹೊಂದಿದ್ದ ಭಾರತ ಮೊದಲ ಸ್ಥಾನದಲ್ಲಿ ವಿರಾಜಮಾನವಾಯಿತು. ಅಲ್ಲದೆ, 11 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಸೆಮೀಸ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ವಿರುದ್ಧ ಜುಲೈ 9ರಂದು ಮೊದಲ ಸೆಮಿಫೈನಲ್ ಪಂದ್ಯವಾಡುವುದು ನಿರ್ಧರಿತಗೊಂಡಿತು.
ಭಾರತ ಹಾಗೂ ನ್ಯೂಜಿಲೆಂಡ್ ಜು.13ರಂದು ಟ್ರೆಂಟ್ಬ್ರಿಜ್ನಲ್ಲಿ ನಿಗದಿಯಾಗಿದ್ದ ಲೀಗ್ ಪಂದ್ಯದಲ್ಲಿ ಸೆಣಸಬೇಕಾಗಿತ್ತು. ಆದರೆ, ಆ ಪಂದ್ಯವನ್ನು ಮಳೆ ಆಪೋಶನ ಪಡೆದುಕೊಂಡಿತ್ತು. ಹೀಗಾಗಿ ಇತ್ತಂಡಗಳಿಗೆ ಮಂಗಳವಾರದ ಪಂದ್ಯ 'ತಾಜಾ ಹೋರಾಟ'.
ಇದಕ್ಕೂ ಮೊದಲು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದು 2003ರಲ್ಲಿ. ಬರೋಬ್ಬರಿ ಹದಿನಾರು ವರುಷಗಳ ಬಳಿಕ ಮತ್ತೆ ಪರಸ್ಪರ ಸೆಣಸಾಡುತ್ತಿರುವುದು ವಿಶೇಷ.
ಪರಾಕ್ರಮ ಮೆರೆದಿತ್ತು: ಲೀಗ್ ಹಂತದ ಆರಂಭದಲ್ಲಿ ನ್ಯೂಜಿಲೆಂಡ್ ತಂಡ ಪ್ರಚಂಡ ವೇಗದಲ್ಲಿತ್ತು. ಎದುರಾಳಿ ತಂಡಗಳ ಮೇಲೆ ಸವಾರಿ ಮಾಡುತ್ತಲೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಹೀಗಾಗಿ ಜು.13ರ ಪಂದ್ಯದಲ್ಲಿ ಭಾರತಕ್ಕೆ ಅಲ್ಪ ಹಿಂಜರಿಕೆ ಇತ್ತು. ಆದರೆ ಅಂದು ಪಂದ್ಯ ನಡೆಯಲೇ ಇಲ್ಲ.
ಶ್ರೇಷ್ಠ ಪ್ರದರ್ಶನ: ತಂಡದ ಬಲಾಬಲವನ್ನು ಹೋಲಿಕೆ ಮಾಡಿ ನೋಡಿದಾಗ ಟೀಮ್ ಇಂಡಿಯಾ ನ್ಯೂಜಿಲೆಂಡ್ಗಿಂತ ಎಲ್ಲ ವಿಭಾಗಗಳಲ್ಲೂ ಸಶಕ್ತವಾಗಿದೆ. ಅದರಲ್ಲೂ ಭಾರತ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಜೋಡಿ ಪ್ರಚಂಡ ಫಾರ್ಮ್ನಲ್ಲಿದ್ದು, ಭಾರತಕ್ಕೆ ಸುಲಭ ಜಯಗಳನ್ನು ತಂದುಕೊಡುತ್ತಿದ್ದಾರೆ. ಮಧ್ಯಮ ಕ್ರಮಾಂಕ ಅಸ್ಥಿರವಾಗಿದ್ದರೂ ಅಗತ್ಯವಿದ್ದಾಗ ಸಿಡಿಯಬಲ್ಲ ಕಲಿಗಳಿದ್ದಾರೆ. ಬೌಲಿಂಗ್ನಲ್ಲಂತೂ ವಿಶ್ವದ ನಂಬರ್ 1 ಬೌಲರ್ ಜಸ್ಪ್ರಿತ್ ಬುಮ್ರಾ ಉರಿಚೆಂಡುಗಳನ್ನೇ ಎಸೆಯುತ್ತಿದ್ದಾರೆ. ಹೊಸ ಚೆಂಡಿನಲ್ಲಾಗಲಿ, ಡೆತ್ ಓವರ್ಗಳಲ್ಲಾಗಲಿ ಅವರು ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾರೆ. ಮೊಹಮ್ಮದ್ ಶಮಿಯ ರಟ್ಟೆಯಲ್ಲಿ ಅಪಾರ ಶಕ್ತಿಯಿದ್ದು ಮೂರು ಪಂದ್ಯಗಳಲ್ಲಿ ಅಸೀಮ ಸಾಧನೆ ಮಾಡಿದ್ದಾರೆ. ಐದನೇ ಬೌಲರ್ ಎನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಕಬಳಿಸುತ್ತಿರುವುದು ಟೀಮ್ ಇಂಡಿಯಾಕ್ಕೆ 'ಪ್ಲಸ್ ಪಾಯಿಂಟ್'
ನ್ಯೂಜಿಲೆಂಡ್ನ ಬ್ಯಾಟಿಂಗ್ಗೆ ಭದ್ರ ಬುನಾದಿಯೇ ಇಲ್ಲ. ತಂಡ ಸಂಪೂರ್ಣವಾಗಿ ನಾಯಕ ಕೇನ್ ವಿಲಿಯಮ್ಸನ್ ಅವರನ್ನೇ ನಂಬಿಕೊಂಡಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮನ್ರೊ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ. ರಾಸ್ ಟೇಲರ್ ಆಗಾಗ ಪ್ರದರ್ಶನ ನೀಡಿದರೆ, ಕೆಲವೇ ಪಂದ್ಯಗಳಲ್ಲಿ ಜೇಮ್ಸ್ ನೀಶಮ್ ಹಾಗೂ ಕಾಲಿನ್ ಗ್ರ್ಯಾಂಡ್ಹೋಮ್ ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ ಟ್ರೆಂಟ್ ಬೌಲ್ಟ್ ಮಾರಕ ಎನ್ನುವುದು ಸತ್ಯ. ಆದರೆ, ಅವರೊಬ್ಬರಿಂದ ಭಾರತದ ಪರಿಣತ ಬ್ಯಾಟ್ಸ್ಮನ್ಗಳನ್ನು ಎದುರಿಸಲು ಸಾಧ್ಯವಿಲ್ಲ. ಗಾಯಗೊಂಡಿರುವ ಲೂಕಿ ಫಗ್ರ್ಯುಸನ್ ಆಡುವುದು ಬಹುತೇಕ ಅನುಮಾನ. ನೀಶಮ್ ಹಾಗೂ ಗ್ರ್ಯಾಂಡ್ಹೋಮ್ ಹೇಳುವಂಥ ಪ್ರದರ್ಶನ ನೀಡುತ್ತಿಲ್ಲ. ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಕೂಡ ಮೋಡಿ ಮಾಡುತ್ತಿಲ್ಲ. ಹೀಗಾಗಿ 16 ವರ್ಷಗಳ ಬಳಿಕ ನಡೆಯುವ ವಿಶ್ವಕಪ್ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವುದು ಸುಲಭ. ಆದರೆ, ಕ್ರಿಕೆಟ್ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದನ್ನು ಮರೆಯಬಾರದು.
ಭಾರತ ಹಾಗೂ ನ್ಯೂಜಿಲೆಂಡ್ ಜು.13ರಂದು ಟ್ರೆಂಟ್ಬ್ರಿಜ್ನಲ್ಲಿ ನಿಗದಿಯಾಗಿದ್ದ ಲೀಗ್ ಪಂದ್ಯದಲ್ಲಿ ಸೆಣಸಬೇಕಾಗಿತ್ತು. ಆದರೆ, ಆ ಪಂದ್ಯವನ್ನು ಮಳೆ ಆಪೋಶನ ಪಡೆದುಕೊಂಡಿತ್ತು. ಹೀಗಾಗಿ ಇತ್ತಂಡಗಳಿಗೆ ಮಂಗಳವಾರದ ಪಂದ್ಯ 'ತಾಜಾ ಹೋರಾಟ'.
ಇದಕ್ಕೂ ಮೊದಲು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದು 2003ರಲ್ಲಿ. ಬರೋಬ್ಬರಿ ಹದಿನಾರು ವರುಷಗಳ ಬಳಿಕ ಮತ್ತೆ ಪರಸ್ಪರ ಸೆಣಸಾಡುತ್ತಿರುವುದು ವಿಶೇಷ.
ಪರಾಕ್ರಮ ಮೆರೆದಿತ್ತು: ಲೀಗ್ ಹಂತದ ಆರಂಭದಲ್ಲಿ ನ್ಯೂಜಿಲೆಂಡ್ ತಂಡ ಪ್ರಚಂಡ ವೇಗದಲ್ಲಿತ್ತು. ಎದುರಾಳಿ ತಂಡಗಳ ಮೇಲೆ ಸವಾರಿ ಮಾಡುತ್ತಲೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಹೀಗಾಗಿ ಜು.13ರ ಪಂದ್ಯದಲ್ಲಿ ಭಾರತಕ್ಕೆ ಅಲ್ಪ ಹಿಂಜರಿಕೆ ಇತ್ತು. ಆದರೆ ಅಂದು ಪಂದ್ಯ ನಡೆಯಲೇ ಇಲ್ಲ.
ಶ್ರೇಷ್ಠ ಪ್ರದರ್ಶನ: ತಂಡದ ಬಲಾಬಲವನ್ನು ಹೋಲಿಕೆ ಮಾಡಿ ನೋಡಿದಾಗ ಟೀಮ್ ಇಂಡಿಯಾ ನ್ಯೂಜಿಲೆಂಡ್ಗಿಂತ ಎಲ್ಲ ವಿಭಾಗಗಳಲ್ಲೂ ಸಶಕ್ತವಾಗಿದೆ. ಅದರಲ್ಲೂ ಭಾರತ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಜೋಡಿ ಪ್ರಚಂಡ ಫಾರ್ಮ್ನಲ್ಲಿದ್ದು, ಭಾರತಕ್ಕೆ ಸುಲಭ ಜಯಗಳನ್ನು ತಂದುಕೊಡುತ್ತಿದ್ದಾರೆ. ಮಧ್ಯಮ ಕ್ರಮಾಂಕ ಅಸ್ಥಿರವಾಗಿದ್ದರೂ ಅಗತ್ಯವಿದ್ದಾಗ ಸಿಡಿಯಬಲ್ಲ ಕಲಿಗಳಿದ್ದಾರೆ. ಬೌಲಿಂಗ್ನಲ್ಲಂತೂ ವಿಶ್ವದ ನಂಬರ್ 1 ಬೌಲರ್ ಜಸ್ಪ್ರಿತ್ ಬುಮ್ರಾ ಉರಿಚೆಂಡುಗಳನ್ನೇ ಎಸೆಯುತ್ತಿದ್ದಾರೆ. ಹೊಸ ಚೆಂಡಿನಲ್ಲಾಗಲಿ, ಡೆತ್ ಓವರ್ಗಳಲ್ಲಾಗಲಿ ಅವರು ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾರೆ. ಮೊಹಮ್ಮದ್ ಶಮಿಯ ರಟ್ಟೆಯಲ್ಲಿ ಅಪಾರ ಶಕ್ತಿಯಿದ್ದು ಮೂರು ಪಂದ್ಯಗಳಲ್ಲಿ ಅಸೀಮ ಸಾಧನೆ ಮಾಡಿದ್ದಾರೆ. ಐದನೇ ಬೌಲರ್ ಎನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಕಬಳಿಸುತ್ತಿರುವುದು ಟೀಮ್ ಇಂಡಿಯಾಕ್ಕೆ 'ಪ್ಲಸ್ ಪಾಯಿಂಟ್'
ನ್ಯೂಜಿಲೆಂಡ್ನ ಬ್ಯಾಟಿಂಗ್ಗೆ ಭದ್ರ ಬುನಾದಿಯೇ ಇಲ್ಲ. ತಂಡ ಸಂಪೂರ್ಣವಾಗಿ ನಾಯಕ ಕೇನ್ ವಿಲಿಯಮ್ಸನ್ ಅವರನ್ನೇ ನಂಬಿಕೊಂಡಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮನ್ರೊ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ. ರಾಸ್ ಟೇಲರ್ ಆಗಾಗ ಪ್ರದರ್ಶನ ನೀಡಿದರೆ, ಕೆಲವೇ ಪಂದ್ಯಗಳಲ್ಲಿ ಜೇಮ್ಸ್ ನೀಶಮ್ ಹಾಗೂ ಕಾಲಿನ್ ಗ್ರ್ಯಾಂಡ್ಹೋಮ್ ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ ಟ್ರೆಂಟ್ ಬೌಲ್ಟ್ ಮಾರಕ ಎನ್ನುವುದು ಸತ್ಯ. ಆದರೆ, ಅವರೊಬ್ಬರಿಂದ ಭಾರತದ ಪರಿಣತ ಬ್ಯಾಟ್ಸ್ಮನ್ಗಳನ್ನು ಎದುರಿಸಲು ಸಾಧ್ಯವಿಲ್ಲ. ಗಾಯಗೊಂಡಿರುವ ಲೂಕಿ ಫಗ್ರ್ಯುಸನ್ ಆಡುವುದು ಬಹುತೇಕ ಅನುಮಾನ. ನೀಶಮ್ ಹಾಗೂ ಗ್ರ್ಯಾಂಡ್ಹೋಮ್ ಹೇಳುವಂಥ ಪ್ರದರ್ಶನ ನೀಡುತ್ತಿಲ್ಲ. ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಕೂಡ ಮೋಡಿ ಮಾಡುತ್ತಿಲ್ಲ. ಹೀಗಾಗಿ 16 ವರ್ಷಗಳ ಬಳಿಕ ನಡೆಯುವ ವಿಶ್ವಕಪ್ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವುದು ಸುಲಭ. ಆದರೆ, ಕ್ರಿಕೆಟ್ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದನ್ನು ಮರೆಯಬಾರದು.