ಆ್ಯಪ್ನಗರ

ಹೃದಯಾಘಾತದಿಂದ ಕ್ರಿಕೆಟಿಗನ ದುರ್ಮರಣ

ವೈಭವ್‌ ಕೇಸರ್ಕಾರ್‌ ಎಂಬ 24ರ ತರುಣ ಇದೇ ಭಾನುವಾರ ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯದ ವೇಳೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದ ದಾರುಣ ಘಟನೆಯೊಂದು ಇಲ್ಲಿಗೆ ಸಮೀಪದ ಬಾಂಡುಪ್‌ನಲ್ಲಿ ನಡೆದಿದೆ.

Agencies 26 Dec 2018, 5:00 am
ಮುಂಬಯಿ : ವೈಭವ್‌ ಕೇಸರ್ಕಾರ್‌ ಎಂಬ 24ರ ತರುಣ ಇದೇ ಭಾನುವಾರ ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯದ ವೇಳೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದ ದಾರುಣ ಘಟನೆಯೊಂದು ಇಲ್ಲಿಗೆ ಸಮೀಪದ ಬಾಂಡುಪ್‌ನಲ್ಲಿ ನಡೆದಿದೆ.
Vijaya Karnataka Web 24 year old mumbai cricketer vaibhav kesarkar dies due to heart attack
ಹೃದಯಾಘಾತದಿಂದ ಕ್ರಿಕೆಟಿಗನ ದುರ್ಮರಣ


ವೈಭವ್‌ಗೆ ಬ್ಯಾಟಿಂಗ್‌ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಅದನ್ನು ಲೆಕ್ಕಸದೇ ಆತ ಆಟ ಮುಂದುವರಿಸಿದ್ದಾರೆ. ಅದಾದ ಬಳಿಕ ಕ್ಷೇತ್ರ ರಕ್ಷಣೆಗೂ ತೆರಳಿದ್ದಾರೆ. ಆಗ ನೋವು ತೀವ್ರಗೊಂಡ ಪರಿಣಾಮ ಅಂಪೈರ್‌ಗೆ ತಿಳಿಸಿ ಪೆವಿಲಿಯನ್‌ಗೆ ವಾಪಸಾಗಿದ್ದಾರೆ.

ವೈಭವ್‌ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನೋವಿನಿಂದ ನರಳುತ್ತಿದ್ದರು. ಅದನ್ನು ಕಂಡು ಗೆಳೆಯ ರಾಕೇಶ್‌ ಪವಾರ್‌ ವೈಭವ್‌ರನ್ನು ಸಮೀಪದ ಭಾವ್‌ಸಾರ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ವೈಭವ್‌ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌