ಆ್ಯಪ್ನಗರ

ಲಂಕಾ ಪಂದ್ಯ ಬಹಿಷ್ಕರಿಸುವ ಭೀತಿಯಿಂದ ಭಾರತ ಡಿಕ್ಲೇರ್!

ಭಾರತ ಮತ್ತು ಪ್ರವಾಸಿ ಶ್ರೀಲಂಕಾ ನಡುವಣ ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅನೇಕ ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು.

ಟೈಮ್ಸ್ ಆಫ್ ಇಂಡಿಯಾ 3 Dec 2017, 6:27 pm
ಹೊಸದಿಲ್ಲಿ: ಭಾರತ ಮತ್ತು ಪ್ರವಾಸಿ ಶ್ರೀಲಂಕಾ ನಡುವಣ ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅನೇಕ ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು.
Vijaya Karnataka Web 3rd test india declare amid dinesh chandimal goof up
ಲಂಕಾ ಪಂದ್ಯ ಬಹಿಷ್ಕರಿಸುವ ಭೀತಿಯಿಂದ ಭಾರತ ಡಿಕ್ಲೇರ್!


ವಾಯು ಮಾಲಿನ್ಯದ ಕಾರಣವೊಡ್ಡಿದ್ದ ಲಂಕಾ ಆಟಗಾರರು ಪಂದ್ಯ ಮುಂದುವರಿಸಲು ವಿಸಮ್ಮತಿ ಸೂಚಿಸಿದ್ದರು. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ದ್ವಿತೀಯ ದಿನದಾಟದಲ್ಲಿ ಊಟದ ವಿರಾಮದ ವರೆಗೆ ಎಲ್ಲವೂ ಸರಿಯಾಗಿ ಸಾಗಿತ್ತು. ಅಮೋಘ ದ್ವಿಶತಕ ಬಾರಿಸಿದ್ದ ನಾಯಕ ವಿರಾಟ್ ಕೋಹ್ಲಿ ಚೊಚ್ಚಲ ತ್ರಿಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ ಲಂಚ್ ವಿರಾಮದ ಬಳಿಕ ವಾಯು ಮಾಲಿನ್ಯದ ನೆಪವೊಡ್ಡಿದ್ದ ಲಂಕಾ ಆಟಗಾರರು ಮಾಸ್ಕ್ ಧರಿಸಿ ಕಣಕ್ಕಿಳಿದಿದ್ದರು.



ದಿಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಹಂತವನ್ನು ತಲುಪಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪರಿಸ್ಥಿತಿ ಇಲಾಖೆಯು ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. ಆದರೆ ವಾಯು ಮಾಲಿನ್ಯಕ್ಕೂ ಮಿಲಿಗಾಗಿ ಚಳಿಗಾಲದ ಮೋಡ ಕವಿದ ವಾತಾವರಣವು ಕೋಟ್ಲಾದಲ್ಲಿ ಭೀತಿ ಸೃಷ್ಟಿಸಿತ್ತು.

ಏತನ್ಮಧ್ಯೆ ಗಾಯದ ಸಮಸ್ಯೆಗೆ ಒಳಗಾದ ಲಂಕಾ ವೇಗಿಗಳಾದ ಲಹಿರು ಗಮಗೆ ಹಾಗೂ ಸುರಂಗ ಲಕ್ಮಲ್ ಮೈದಾನ ತೊರೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದೆಗೆಡುವಂತೆ ಮಾಡಿತ್ತು. ಇದರಿಂದಾಗಿ ಲಂಕಾ ಓರ್ವ ಫೀಲ್ಡರ್‌ನ ಕೊರೆತೆಯನ್ನು ಎದುರಿಸಿತ್ತು. ಲಂಕಾ ಪಂದ್ಯ ಬಹಿಷ್ಕರಿಸುವ ಭೀತಿ ಎದುರಾದಾಗ ಮುಂದೆ ಬಂದ ಸ್ವತ: ಭಾರತ ನಾಯಕ ಕೋಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

ವಾಯು ಮಾಲಿನ್ಯದ ಬಗ್ಗೆ ಪದೇ ಪದೇ ತಗಾದೆ ಎತ್ತಿದ ಲಂಕಾ ನಾಯಕ ದಿನೇಶ್ ಚಾಂದಿಮಾಲ್ ವರ್ತನೆಯು ಕ್ರಿಕೆಟ್‌ಗೆ ಕಪ್ಪು ಚುಕ್ಕೆಯಾಗಿದೆ. ಬಳಿಕ ಅಂಪೈರ್‌ಗಳ ಜತೆ ಲಂಕಾ ತಾತ್ಕಾಲಿಕ ಕೋಚ್ ನಿಕ್ ಪಾಥಸ್ ಹಾಗೂ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಸಹ ಮಾತುಕತೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌