ಆ್ಯಪ್ನಗರ

ಕೋಹ್ಲಿ-ವಿಲಿಯರ್ಸ್‌ ಶೂನ್ಯದ ಗ್ರಹಚಾರಕ್ಕೆ ಪಾಕ್ ಪತ್ರಕರ್ತೆ ಕಾರಣ!

ಸ್ವಲ್ಪ ಸಮಯದ ಹಿಂದಿನ ವರೆಗೂ ಕೋಹ್ಲಿ ಹಾಗೂ ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾ ಅವರನ್ನು ದೂಷಿಸಲಾಗುತ್ತಿತ್ತು. ಆದರೆ ಈಗಿನ ಪ್ರಕರಣದಲ್ಲಿ ಪಾಕಿಸ್ತಾನದ ಪತ್ರಕರ್ತೆಯ ಪಾತ್ರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಬ್ಬಿದೆ.

ಏಜೆನ್ಸೀಸ್ 10 Jun 2017, 5:22 pm
ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಏಕದಿನ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿ ವಿಲಿಯರ್ಸ್ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಶೂನ್ಯಕ್ಕೆ ಔಟಾಗಿದ್ದರು.
Vijaya Karnataka Web ab de villiers and virat kohli gets ducks after a selfie with pakistan journalist
ಕೋಹ್ಲಿ-ವಿಲಿಯರ್ಸ್‌ ಶೂನ್ಯದ ಗ್ರಹಚಾರಕ್ಕೆ ಪಾಕ್ ಪತ್ರಕರ್ತೆ ಕಾರಣ!


ವಿಲಿಯರ್ಸ್ ಪಾಕಿಸ್ತಾನ ವಿರುದ್ಧ ಗೋಲ್ಡನ್ ಡಕ್‌ಗೆ ಬಲಿಯಾದರೆ ಕೋಹ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶೂನ್ಯದ ಸುಳಿಗೆ ಸಿಲುಕಿದ್ದರು. ಕಾಕತಾಳೀಯವೆಂಬಂತೆ ಇವರಿಬ್ಬರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾರೆ.

ಸ್ವಲ್ಪ ಸಮಯದ ಹಿಂದಿನ ವರೆಗೂ ಕೋಹ್ಲಿ ಹಾಗೂ ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾ ಅವರನ್ನು ದೂಷಿಸಲಾಗುತ್ತಿತ್ತು. ಆದರೆ ಈಗಿನ ಪ್ರಕರಣದಲ್ಲಿ ಪಾಕಿಸ್ತಾನದ ಪತ್ರಕರ್ತೆಯ ಪಾತ್ರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಬ್ಬಿದೆ.



ವಿಷಯ ಏನೆಂದರೆ ಪಂದ್ಯದ ಮೊದಲು ವಿಲಿಯರ್ಸ್ ಹಾಗೂ ಕೋಹ್ಲಿ ಜೊತೆಗೆ ಪಾಕ್‌ನ ಕ್ರೀಡಾ ಪತ್ರಕರ್ತೆಯಾದ ಜೈನಾಬ್ ಅಬ್ಬಾಸ್ ಸೆಲ್ಫಿ ಚಿತ್ರಿಸಿಕೊಂಡಿದ್ದರು. ಸೆಲ್ಪೆ ತೆಗಿದಿದ್ದೆ ತಡ ಅದೇನು ಗ್ರಹಚಾರ ಕೋಹ್ಲಿ ಹಾಗೂ ವಿಲಿಯರ್ಸ್ ಅವರನ್ನು ಕಾಡಿತ್ತೋ ಗೊತ್ತಿಲ್ಲ. ಅವರಿಬ್ಬರು ಶೂನ್ಯಕ್ಕೆ ಔಟಾದರು.



ಒಟ್ಟಿನಲ್ಲಿ ಈ ಪಾಕ್ ಪತ್ರಕರ್ತೆಗೆ ಬೇಡಿಕೆ ಹೆಚ್ಚಿದ್ದು, ಮತ್ತಷ್ಟು ಸೆಲ್ಪಿ ಚಿತ್ರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌