ಆ್ಯಪ್ನಗರ

ಕಮ್‌ಬ್ಯಾಕ್ ಇಲ್ಲ, ಕೋಚಿಂಗ್‌ನಲ್ಲಿ ಆಸಕ್ತಿಯೂ ಇಲ್ಲ: ಎಬಿಡಿ

ಭಾರತಕ್ಕೆ ಆಸೀಸ್ ನೆಲದಲ್ಲಿ ಸರಣಿ ಗೆಲ್ಲುವ ಅವಕಾಶ: ವಿಲಿಯರ್ಸ್

TOI.in 21 Oct 2018, 2:52 pm
ಹೊಸದಿಲ್ಲಿ: ಕೆಲವು ಸಮಯಗಳ ಹಿಂದೆಯಷ್ಟೇ ಅಚ್ಚರಿಯೆಂಬಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ದಕ್ಷಿಣ ಆಫ್ರಿಕಾ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ನಿವೃತ್ತಿ ಘೋಷಿಸಿದ್ದರು.
Vijaya Karnataka Web ab-de-villiers-test


ಇದೀಗ ನಿವೃತ್ತಿ ನಿರ್ಧಾರ ಬದಲಿಸಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಯಾವುದೇ ಯೋಚನೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ನಿವೃತ್ತಿ ಜೀವನದಲ್ಲಿ ಕೋಚಿಂಗ್ ಹುದ್ದೆಯನ್ನು ವಹಿಸುವ ಆಸಕ್ತಿಯೂ ಇಲ್ಲ ಎಂಬುದನ್ನು ತಿಳಿಸಿದ್ದಾರೆ.

ಭಾರತದಲ್ಲೂ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿರುವ ಎಬಿಡಿ ದಕ್ಷಿಣ ಆಫ್ರಿಕಾಕ್ಕಾಗಿ 114 ಟೆಸ್ಟ್, 228 ಏಕದಿನ ಹಾಗೂ 78 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಬಳಲಿದ್ದೇನೆ. ಇದೊಂದು ಕಠಿಣ ನಿರ್ಧಾರ. ಸುದೀರ್ಘ ಆಲೋಚನೆಯ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದೇನೆ. ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಅತ್ಯುತ್ತಮ ಸರಣಿಯ ಬಳಿಕ ನಿವೃತ್ತಿ ಘೋಷಿಸಲು ಇದೇ ಉತ್ತಮ ಸಮಯ ಎಂದು ಅಂದುಕೊಂಡೆ. ನನಗೆ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸಲು ಬಯಸುತ್ತೇನೆ" ಎಂದರು.

2019 ಏಕದಿನ ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆಯೇ ಕಮ್‌ಬ್ಯಾಕ್ ಮಾಡುವೀರಾ ಎಂಬ ಪ್ರಶ್ನೆಗೆ, "ಅಂತಹ ಯಾವುದೇ ಸಾಧ್ಯತೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಹಾಗಿದ್ದರೂ ಟ್ವೆಂಟಿ-20 ಲೀಗ್‌ಗಳಲ್ಲಿ ಮುಂದುವರಿಯಲಿದ್ದೇನೆ" ಎಂದು ತಿಳಿಸಿದರು.

ಈ ನಡುವೆ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧದ ಕಳಪೆ ನಿರ್ವಹಣೆಯ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತಮ ನಿರ್ವಹಣೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಮುಂಬರುವ ಆಸೀಸ್ ಸರಣಿಯಲ್ಲಿ ಅವರದ್ದೇ ನೆಲದಲ್ಲಿ ಸರಣಿ ಗೆಲ್ಲುವ ಉತ್ತಮ ಅವಕಾಶ ಭಾರತದ ಮುಂದಿದೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧವೂ ಉತ್ತಮ ಪ್ರತಿಸ್ಪರ್ಧೆಯನ್ನು ಟೀಮ್ ಇಂಡಿಯಾ ಒಡ್ಡಿತ್ತು ಎಂಬುದನ್ನು ಹೇಳಿದರು.

"ಆಸೀಸ್ ಪ್ರವಾಸದಲ್ಲಿ ವೇಗಿಗಳು ಫಿಟ್ ಆಗಿದ್ದಲ್ಲಿ ಭಾರತಕ್ಕೆ ಉತ್ತಮ ಅವಕಾಶವಿದೆ ಎಂಬುದು ನನ್ನ ನಂಬಿಕೆಯಾಗಿದೆ. ಏಕೆಂದರೆ ಸದ್ಯ ವಿಶ್ವದಲ್ಲೇ ಅತ್ಯುತ್ತಮ ವೇಗಿಗಳ ಸಂಯೋಜನೆಯನ್ನು ಭಾರತ ಹೊಂದಿದೆ" ಎಂದು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌