ಆ್ಯಪ್ನಗರ

ಭಾವನ್ಮಾತಕ ಸಂದೇಶ ಮೂಲಕ ಗೆಲುವಿನ ಮಂತ್ರ ಪಠಿಸಿದ ಎಬಿಡಿ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಈಡೆನ್ ಗಾರ್ಡೆನ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎದುರಾದ ಹೀನಾಯ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಏಜೆನ್ಸೀಸ್ 26 Apr 2017, 3:25 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಈಡೆನ್ ಗಾರ್ಡೆನ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎದುರಾದ ಹೀನಾಯ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
Vijaya Karnataka Web ab de villiers shares emotional message
ಭಾವನ್ಮಾತಕ ಸಂದೇಶ ಮೂಲಕ ಗೆಲುವಿನ ಮಂತ್ರ ಪಠಿಸಿದ ಎಬಿಡಿ


ಕೆಕೆಆರ್ ಒಡ್ಡಿದ 131 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಆರ್‌ಸಿಬಿ 9.4 ಓವರ್‌ಗಳಲ್ಲೇ 49 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಈ ಮೂಲಕ ಭಾರಿ ಮುಖಭಂಗಕ್ಕೊಳಗಾಗಿತ್ತು.

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟಾಗಿರುವ ಕುಖ್ಯಾತಿಗೆ ಆರ್‌ಸಿಬಿ ಒಳಗಾಗಿತ್ತು. ಇದರೊಂದಿಗೆ ಐಪಿಎಲ್‌ನಲ್ಲಿ ಗರಿಷ್ಠ ಹಾಗೂ ಕನಿಷ್ಠ ರನ್ ಗಳಿಸಿದ ದಾಖಲೆಗಳು ಬೆಂಗಳೂರು ಪಾಲಾಗಿದೆ.

ಇಂತಹ ಹೀನಾಯ ಪ್ರದರ್ಶನದ ಬಳಿಕ ಯಾವ ರೀತಿ ಮಾತನಾಡಬೇಕು ಎಂಬುವುದು ಕಷ್ಟಕರ. ನಿಜಾಂಶವೆಂದರೆ ಇದು ಮುಗಿದ ಅಧ್ಯಾಯ. ಕಳೆದ ಹೋದ ವಿಷಯವಾಗಿದ್ದು, ನಮ್ಮ ನಿರ್ವಹಣೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಾವು ಈ ಎರಡು ಅಂಶಗಳ ಮೂಲಕ ಪರಿಹಾರ ಹುಡುಕಬಹುದಾಗಿದೆ ಎಂದಿದ್ದಾರೆ.

ಮೊದಲನೇಯದಾಗಿ ಪ್ರತಿಯೊಬ್ಬ ಆಟಗಾರನೂ ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡು ಉಳಿದಿರುವ ಟೂರ್ನಿಯಲ್ಲಿ ಹೇಗೆ ಉತ್ತಮ ನಿರ್ವಹಣೆ ನೀಡಬಹುದು ಎಂಬುದಕ್ಕೆ ಮಾರ್ಗವನ್ನು ಪಡೆಯಬಹುದು. ಎರಡನೇಯದ್ದಾಗಿ ಟೂರ್ನಿಯಲ್ಲಿ ಉಳಿದಿರುವ ಪ್ರತಿಯೊಂದು ಪಂದ್ಯಗಳಲ್ಲಿ ಅವಕಾಶವನ್ನು ಸೃಷ್ಟಿಸಿ ಗೆಲುವಿನ ಹಾದಿಗೆ ಮರಳಬೇಕಿದೆ ಎಂದರು.

ನಮ್ಮ ತಂಡ ಅತ್ಯುತ್ತಮ ನಿರ್ವಹಣೆ ನೀಡುವ ನಂಬಿಕೆ ನನ್ನಲ್ಲಿದೆ. ನಿಮಗೂ ನಮ್ಮ ಮೇಲೆ ನಂಬಿಕೆಯಿರುವುದಾಗಿ ನಂಬುತ್ತೇನೆ ಎಂದು ಮಾತು ಕೊನೆಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌