ಬೆಂಗಳೂರು: ಯುದ್ಧದ ಭೀಕರತೆ ನಂತರ ಚಿಗುರುತ್ತಿರುವ ಅಫಘಾನಿಸ್ಥಾನ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದೆ. ವಿಶ್ವದ ನಂ.1 ರಾರಯಂಕ್ನ ಬಲಿಷ್ಠ ಭಾರತ ತಂಡದ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯ ಆಡುವ ಮೂಲಕ 12ನೇ ಟೆಸ್ಟ್ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಭಾರತ ಮತ್ತು ಅಫಘಾನಿಸ್ಥಾನ ನಡುವಣ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ವೇದಿಕೆ ಒದಗಿಸಿದೆ. ಇಂದಿನಿಂದ ಆರಂಭವಾದ ಐದು ದಿನಗಳ ಕಾಲ ನಡೆಯಲಿರುವ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುಂದಾಳತ್ವದ ಟೀಮ್ ಇಂಡಿಯಾದ ಎದುರು ಕ್ರಿಕೆಟ್ ಕೂಸು ಆಫ್ಘನ್ ತಂಡ ಪೈಪೋಟಿ ನೀಡಬಲ್ಲದೆ ಎಂಬುದನ್ನು ಕಾದು ನೋಡಬೇಕಿದೆ.
ಅಂಕಿ ಅಂಶಗಳನ್ನು ಗಮನಿಸಿ ಹೇಳುವುದಾದರೆ ಭಾರತಕ್ಕಿದು ಸುಲಭದ ತುತ್ತು. ಎಲ್ಲವೂ ಸಹಜ ರೀತಿಯಲ್ಲಿ ಸಾಗಿದರೆ ಟೀಮ್ ಇಂಡಿಯಾ ಸುಲಭವಾಗಿ ಜಯ ದಾಖಲಿಸುತ್ತದೆ. ಆದರೆ, ಪ್ರವಾಸಿ ತಂಡಕ್ಕೆ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ಇದಾಗಿದ್ದು, ಟಿ20 ಕ್ರಿಕೆಟ್ನಲ್ಲಿ ಸೈ ಎನಿಸಿಕೊಂಡಿರುವ ಹಾಗೆ ಟೆಸ್ಟ್ನಲ್ಲೂ ತನ್ನದೇ ಛಾಪು ಮೂಡಿಸಲು ಎದುರು ನೋಡುತ್ತಿದೆ.
ವಿರಾಟ್ ಇಲ್ಲದೆ ಟೆಸ್ಟ್
ಪಂದ್ಯ ಗೆಲ್ಲುವ ಫೇವರಿಟ್ ಆಗಿರುವ ಟೀಮ್ ಇಂಡಿಯಾ ತನ್ನ ಎಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಮುಖ ವೇಗದ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಮುಂಬರುವ ಇಂಗ್ಲೆಂಡ್ ಪ್ರವಾಸದ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರರು ವಿಶ್ರಾಂತಿ ಪಡೆದಿದ್ದಾರೆ. ಮತ್ತೊಂದೆಡೆ ಕೈ ಬೆರಳಿನ ಮೂಳೆ ಮುರಿತದಿಂದ ಚೇತರಿಸುತ್ತಿರುವ ಪ್ರಮುಖ ವಿಕೆಟ್ಕೀಪರ್ ವೃದ್ಧಿಮಾನ್ ಸಹಾ ಮತ್ತು ಯೋಯೋ ಫಿಟ್ನೆಸ್ ಟೆಸ್ಟ್ನಲ್ಲಿ ವಿಫಲಗೊಂಡಿರುವ ವೇಗಿ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿದ್ದಾರೆ.
ಯುದ್ಧದ ನೆರಳಲ್ಲಿ ಅರಳಿದ ಕ್ರಿಕೆಟ್
ಅಫಘಾನಿಸ್ತಾನದ ಕ್ರಿಕೆಟ್ ಇತಿಹಾಸವೇ ರೋಚಕ. ತಾಲೀಬಾನ್ ಆಳ್ವಿಕೆಯಲ್ಲಿ ಕ್ರಿಕೆಟ್ ಸಹಿತ ಎಲ್ಲಾ ಕ್ರೀಡೆಗಳಿಗೆ ಅಫಘಾನಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಆದರೂ, 1995ರಲ್ಲಿ ಸ್ಥಾಪನೆಗೊಂಡ ಅಫಘಾನಿಸ್ತಾನ ಕ್ರಿಕೆಟ್ ಒಕ್ಕೂಟಕ್ಕೆ 2000ದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಗಸಂಸ್ಥೆ ಸದಸ್ಯತ್ವ ಪಡೆಯುವಲ್ಲಿ ಯಶಸ್ವಿಯಾಯಿತು. ಅಂದಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಫ್ಘನ್ ತಂಡದ ಸಾಧನೆ ಮೇಲೇರುತ್ತಲೇ ಇದೆ. ಪ್ರಮುಖವಾಗಿ ಟಿ20 ಕ್ರಿಕೆಟ್ನಲ್ಲಿ ಗಮನಾರ್ಹ ಸಾಧನೆ ಮೆರೆದಿರುವ ಅಫಘಾನಿಸ್ತಾನ, ಇತ್ತೀಚೆಗಷ್ಟೇ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಫೈನಲ್ನಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ಗೆ ಸೋಲುಣಿಸಿ ಬಲಿಷ್ಠರನ್ನು ಬಗ್ಗು ಬಡಿಯುವ ಸಾಮರ್ಥ್ಯ ಹೊಂದಿರುವುದಾಗಿ ಸಾಬೀತು ಪಡಿಸಿದೆ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲೂ ಇಂಥದ್ದೇ ಮೋಡಿ ಮಾಡುವುದೇ ಎಂಬುದನ್ನು ಕಾದು ನೋಡಬೇಕು.
ಲೋಕಲ್ ಬಾಯ್ಸ್ ಆಕರ್ಷಣೆ
ಮನೆಯಂಗಣದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೆ.ಎಲ್ ರಾಹುಲ್ ಸ್ಥಳೀಯ ಪ್ರೇಕ್ಷಕರ ಪ್ರಧಾನ ಆಕರ್ಷಣೆಯಾಗಿದ್ದಾರೆ. ಕಳೆದ ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿರುವ ರಾಹುಲ್, ಟೆಸ್ಟ್ನಲ್ಲೂ ಅಂಥದ್ಧೇ ಸ್ಥಿರತೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ರಶೀದ್ಗೆ ಅಗ್ನಿ ಪರೀಕ್ಷೆ
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತ್ಯಂತ ಪ್ರಭಾವಿ ಹಾಗೂ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿರುವ ಅಫಘಾನಿಸ್ಥಾನದ ಯುವ ಸ್ಪಿನ್ನರ್ ರಶೀದ್ ಖಾನ್, ಇದೀಗ ನೈಜ ಪರೀಕ್ಷೆಗೆ ಒಳಪಡಲಿದ್ದಾರೆ. ಟೆಸ್ಟ್ ಕ್ರಿಕೆಟ್ ಸಂಪೂರ್ಣ ವಿಭಿನ್ನ ಮಾದರಿ. ಇಲ್ಲಿ ತಾಳ್ಮೆ ಕಾಯ್ದುಕೊಂಡರಷ್ಟೇ ಯಶಸ್ಸು ಸಾಧ್ಯವಾಗುತ್ತದೆ. ಟಿ20ಯಲ್ಲಿ ಮಿಂಚಿರುವ 19 ವರ್ಷದ ಲೆಗ್ ಸ್ಪಿನ್ನರ್ ರಶೀದ್, ಕೆಂಪು ಚೆಂಡಿನಲ್ಲೂ ದೂಸ್ರಾ ಎಫೆಕ್ಟ್ ತರಬಲ್ಲರೇ ಎಂದು ಕುತೂಹಲ ಕೆರಳಿಸಿದೆ. ರಶೀದ್ಗೆ ಮತ್ತೊಬ್ಬ ಯುವ ಸ್ಪಿನ್ನರ್ 17 ವರ್ಷದ ಮುಜೀಬ್ ಉರ್ ರಹ್ಮಾನ್ ಉತ್ತಮ ಸಾಥ್ ನೀಡುವ ಸಾಧ್ಯತೆ ಇದೆ.
ಪಿಚ್ ರಿಪೋರ್ಟ್
ಕಳೆದ ಐಪಿಎಲ್ನಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ರೀತಿಯ ಪಿಚ್ ಬಳಕೆ ಮಾಡಲಾಗಿತ್ತು. ಒಂದರಲ್ಲಿ ಹೆಚ್ಚು ರನ್ ಹರಿದು ಬಂದರೆ ಮತ್ತೊಂದು ಪಿಚ್ನಲ್ಲಿ ಬೌಲರ್ಗಳಿಗೆ ಯಶಸ್ಸು ಲಭ್ಯವಾಗಿತ್ತು. ಆದರೆ, ಭಾರತ ಮತ್ತು ಆಫ್ಘನ್ ನಡುವಣ ಟೆಸ್ಟ್ ಪಂದ್ಯಕ್ಕೆ ಕೊಂಚ ವಿಭಿನ್ನ ಪಿಚ್ ಒದಗಿಸಲಾಗಿದೆ. ಪಿಚ್ನ ಮೇಲ್ಮೈ ಕೊಂಚ ಹಸಿರಿನಿಂದ ಕೂಡಿದ್ದು, ಆರಂಭದಲ್ಲಿ ವೇಗದ ಬೌಲರ್ಗಳಿಗೆ ನೆರವಾಗಿ 2 ದಿನದ ಬಳಿಕ ಸ್ಪಿನ್ ಬೌಲರ್ಗಳಿಗೆ ಪೂರಕವಾಗಲಿದೆ. ಹೀಗಿರುವಾಗ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ಬೃಹತ್ ಮೊತ್ತ ದಾಖಲಿಸುವತ್ತ ಎದುರು ನೋಡಲಿದೆ.
ಮಳೆ ಅಡಚಣೆ ಸಾಧ್ಯತೆ
ರಾಜ್ಯದಲ್ಲಿ ಮುಂಗಾರು ಜೋರಾಗಿದ್ದು, ಹವಾಮಾನ ವರದಿಯಂತೆ ಬೆಂಗಳೂರಿನಲ್ಲಿ ಗುರುವಾರ ಮೋಡ ಮುಸುಕಿದ ವಾತಾವರಣ ಇರಲಿದೆ. ಶುಕ್ರವಾರ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಪಂದ್ಯದ 2ನೇ ದಿನದಾಟಕ್ಕೆ ಮಳೆ ಅಡಚಣೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಶನಿವಾರ, ಭಾನುವಾರ ಮತ್ತು ಸೋಮವಾರವೂ ಮೋಡ ಮುಚ್ಚಿದ ವಾತಾವರಣ ಮುಂದುವರಿಯಲಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಭಾರತ ಮತ್ತು ಅಫಘಾನಿಸ್ಥಾನ ನಡುವಣ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ವೇದಿಕೆ ಒದಗಿಸಿದೆ. ಇಂದಿನಿಂದ ಆರಂಭವಾದ ಐದು ದಿನಗಳ ಕಾಲ ನಡೆಯಲಿರುವ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುಂದಾಳತ್ವದ ಟೀಮ್ ಇಂಡಿಯಾದ ಎದುರು ಕ್ರಿಕೆಟ್ ಕೂಸು ಆಫ್ಘನ್ ತಂಡ ಪೈಪೋಟಿ ನೀಡಬಲ್ಲದೆ ಎಂಬುದನ್ನು ಕಾದು ನೋಡಬೇಕಿದೆ.
ಅಂಕಿ ಅಂಶಗಳನ್ನು ಗಮನಿಸಿ ಹೇಳುವುದಾದರೆ ಭಾರತಕ್ಕಿದು ಸುಲಭದ ತುತ್ತು. ಎಲ್ಲವೂ ಸಹಜ ರೀತಿಯಲ್ಲಿ ಸಾಗಿದರೆ ಟೀಮ್ ಇಂಡಿಯಾ ಸುಲಭವಾಗಿ ಜಯ ದಾಖಲಿಸುತ್ತದೆ. ಆದರೆ, ಪ್ರವಾಸಿ ತಂಡಕ್ಕೆ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ಇದಾಗಿದ್ದು, ಟಿ20 ಕ್ರಿಕೆಟ್ನಲ್ಲಿ ಸೈ ಎನಿಸಿಕೊಂಡಿರುವ ಹಾಗೆ ಟೆಸ್ಟ್ನಲ್ಲೂ ತನ್ನದೇ ಛಾಪು ಮೂಡಿಸಲು ಎದುರು ನೋಡುತ್ತಿದೆ.
ವಿರಾಟ್ ಇಲ್ಲದೆ ಟೆಸ್ಟ್
ಪಂದ್ಯ ಗೆಲ್ಲುವ ಫೇವರಿಟ್ ಆಗಿರುವ ಟೀಮ್ ಇಂಡಿಯಾ ತನ್ನ ಎಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಮುಖ ವೇಗದ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಮುಂಬರುವ ಇಂಗ್ಲೆಂಡ್ ಪ್ರವಾಸದ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರರು ವಿಶ್ರಾಂತಿ ಪಡೆದಿದ್ದಾರೆ. ಮತ್ತೊಂದೆಡೆ ಕೈ ಬೆರಳಿನ ಮೂಳೆ ಮುರಿತದಿಂದ ಚೇತರಿಸುತ್ತಿರುವ ಪ್ರಮುಖ ವಿಕೆಟ್ಕೀಪರ್ ವೃದ್ಧಿಮಾನ್ ಸಹಾ ಮತ್ತು ಯೋಯೋ ಫಿಟ್ನೆಸ್ ಟೆಸ್ಟ್ನಲ್ಲಿ ವಿಫಲಗೊಂಡಿರುವ ವೇಗಿ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿದ್ದಾರೆ.
ಯುದ್ಧದ ನೆರಳಲ್ಲಿ ಅರಳಿದ ಕ್ರಿಕೆಟ್
ಅಫಘಾನಿಸ್ತಾನದ ಕ್ರಿಕೆಟ್ ಇತಿಹಾಸವೇ ರೋಚಕ. ತಾಲೀಬಾನ್ ಆಳ್ವಿಕೆಯಲ್ಲಿ ಕ್ರಿಕೆಟ್ ಸಹಿತ ಎಲ್ಲಾ ಕ್ರೀಡೆಗಳಿಗೆ ಅಫಘಾನಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಆದರೂ, 1995ರಲ್ಲಿ ಸ್ಥಾಪನೆಗೊಂಡ ಅಫಘಾನಿಸ್ತಾನ ಕ್ರಿಕೆಟ್ ಒಕ್ಕೂಟಕ್ಕೆ 2000ದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಗಸಂಸ್ಥೆ ಸದಸ್ಯತ್ವ ಪಡೆಯುವಲ್ಲಿ ಯಶಸ್ವಿಯಾಯಿತು. ಅಂದಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಫ್ಘನ್ ತಂಡದ ಸಾಧನೆ ಮೇಲೇರುತ್ತಲೇ ಇದೆ. ಪ್ರಮುಖವಾಗಿ ಟಿ20 ಕ್ರಿಕೆಟ್ನಲ್ಲಿ ಗಮನಾರ್ಹ ಸಾಧನೆ ಮೆರೆದಿರುವ ಅಫಘಾನಿಸ್ತಾನ, ಇತ್ತೀಚೆಗಷ್ಟೇ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಫೈನಲ್ನಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ಗೆ ಸೋಲುಣಿಸಿ ಬಲಿಷ್ಠರನ್ನು ಬಗ್ಗು ಬಡಿಯುವ ಸಾಮರ್ಥ್ಯ ಹೊಂದಿರುವುದಾಗಿ ಸಾಬೀತು ಪಡಿಸಿದೆ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲೂ ಇಂಥದ್ದೇ ಮೋಡಿ ಮಾಡುವುದೇ ಎಂಬುದನ್ನು ಕಾದು ನೋಡಬೇಕು.
ಲೋಕಲ್ ಬಾಯ್ಸ್ ಆಕರ್ಷಣೆ
ಮನೆಯಂಗಣದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೆ.ಎಲ್ ರಾಹುಲ್ ಸ್ಥಳೀಯ ಪ್ರೇಕ್ಷಕರ ಪ್ರಧಾನ ಆಕರ್ಷಣೆಯಾಗಿದ್ದಾರೆ. ಕಳೆದ ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿರುವ ರಾಹುಲ್, ಟೆಸ್ಟ್ನಲ್ಲೂ ಅಂಥದ್ಧೇ ಸ್ಥಿರತೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ರಶೀದ್ಗೆ ಅಗ್ನಿ ಪರೀಕ್ಷೆ
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತ್ಯಂತ ಪ್ರಭಾವಿ ಹಾಗೂ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿರುವ ಅಫಘಾನಿಸ್ಥಾನದ ಯುವ ಸ್ಪಿನ್ನರ್ ರಶೀದ್ ಖಾನ್, ಇದೀಗ ನೈಜ ಪರೀಕ್ಷೆಗೆ ಒಳಪಡಲಿದ್ದಾರೆ. ಟೆಸ್ಟ್ ಕ್ರಿಕೆಟ್ ಸಂಪೂರ್ಣ ವಿಭಿನ್ನ ಮಾದರಿ. ಇಲ್ಲಿ ತಾಳ್ಮೆ ಕಾಯ್ದುಕೊಂಡರಷ್ಟೇ ಯಶಸ್ಸು ಸಾಧ್ಯವಾಗುತ್ತದೆ. ಟಿ20ಯಲ್ಲಿ ಮಿಂಚಿರುವ 19 ವರ್ಷದ ಲೆಗ್ ಸ್ಪಿನ್ನರ್ ರಶೀದ್, ಕೆಂಪು ಚೆಂಡಿನಲ್ಲೂ ದೂಸ್ರಾ ಎಫೆಕ್ಟ್ ತರಬಲ್ಲರೇ ಎಂದು ಕುತೂಹಲ ಕೆರಳಿಸಿದೆ. ರಶೀದ್ಗೆ ಮತ್ತೊಬ್ಬ ಯುವ ಸ್ಪಿನ್ನರ್ 17 ವರ್ಷದ ಮುಜೀಬ್ ಉರ್ ರಹ್ಮಾನ್ ಉತ್ತಮ ಸಾಥ್ ನೀಡುವ ಸಾಧ್ಯತೆ ಇದೆ.
ಪಿಚ್ ರಿಪೋರ್ಟ್
ಕಳೆದ ಐಪಿಎಲ್ನಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ರೀತಿಯ ಪಿಚ್ ಬಳಕೆ ಮಾಡಲಾಗಿತ್ತು. ಒಂದರಲ್ಲಿ ಹೆಚ್ಚು ರನ್ ಹರಿದು ಬಂದರೆ ಮತ್ತೊಂದು ಪಿಚ್ನಲ್ಲಿ ಬೌಲರ್ಗಳಿಗೆ ಯಶಸ್ಸು ಲಭ್ಯವಾಗಿತ್ತು. ಆದರೆ, ಭಾರತ ಮತ್ತು ಆಫ್ಘನ್ ನಡುವಣ ಟೆಸ್ಟ್ ಪಂದ್ಯಕ್ಕೆ ಕೊಂಚ ವಿಭಿನ್ನ ಪಿಚ್ ಒದಗಿಸಲಾಗಿದೆ. ಪಿಚ್ನ ಮೇಲ್ಮೈ ಕೊಂಚ ಹಸಿರಿನಿಂದ ಕೂಡಿದ್ದು, ಆರಂಭದಲ್ಲಿ ವೇಗದ ಬೌಲರ್ಗಳಿಗೆ ನೆರವಾಗಿ 2 ದಿನದ ಬಳಿಕ ಸ್ಪಿನ್ ಬೌಲರ್ಗಳಿಗೆ ಪೂರಕವಾಗಲಿದೆ. ಹೀಗಿರುವಾಗ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ಬೃಹತ್ ಮೊತ್ತ ದಾಖಲಿಸುವತ್ತ ಎದುರು ನೋಡಲಿದೆ.
ಮಳೆ ಅಡಚಣೆ ಸಾಧ್ಯತೆ
ರಾಜ್ಯದಲ್ಲಿ ಮುಂಗಾರು ಜೋರಾಗಿದ್ದು, ಹವಾಮಾನ ವರದಿಯಂತೆ ಬೆಂಗಳೂರಿನಲ್ಲಿ ಗುರುವಾರ ಮೋಡ ಮುಸುಕಿದ ವಾತಾವರಣ ಇರಲಿದೆ. ಶುಕ್ರವಾರ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಪಂದ್ಯದ 2ನೇ ದಿನದಾಟಕ್ಕೆ ಮಳೆ ಅಡಚಣೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಶನಿವಾರ, ಭಾನುವಾರ ಮತ್ತು ಸೋಮವಾರವೂ ಮೋಡ ಮುಚ್ಚಿದ ವಾತಾವರಣ ಮುಂದುವರಿಯಲಿದೆ.