ಆ್ಯಪ್ನಗರ

ಕೋಚ್ ರವಿಶಾಸ್ತ್ರಿಗೆ ವೀರು ಪರೋಕ್ಷ ಟಾಂಗ್

ಇಂಗ್ಲೆಂಡ್ ನೆಲದಲ್ಲಿ ಎದುರಾದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕೋಚ್ ರವಿಶಾಸ್ತ್ರಿ ಅವರನ್ನು ಭಾರತದ ಮಾಜಿ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಪರೋಕ್ಷವಾಗಿ ಟೀಕಿಸಿದ್ದಾರೆ.

Times Now 4 Sep 2018, 12:57 pm
ಹೊಸದಿಲ್ಲಿ: ಇಂಗ್ಲೆಂಡ್ ನೆಲದಲ್ಲಿ ಎದುರಾದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕೋಚ್ ರವಿಶಾಸ್ತ್ರಿ ಅವರನ್ನು ಭಾರತದ ಮಾಜಿ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಪರೋಕ್ಷವಾಗಿ ಟೀಕಿಸಿದ್ದಾರೆ.
Vijaya Karnataka Web sehwag-shastri


"ಅತ್ಯುತ್ತಮ ಪ್ರವಾಸಿ ತಂಡವು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಹೊರತು ಡ್ರೆಸ್ಸಿಂಗ್ ಕೊಠಡಿಯಲ್ಲಲ್ಲ. ಓರ್ವ ಏನೇ ಬೇಕಾದರೂ ಮಾತನಾಡಬಹುದು. ಆದರೆ ಬ್ಯಾಟ್ ಸದ್ದು ಮಾಡದಿರದ ಹೊರತು ಅತ್ಯುತ್ತಮ ಪ್ರವಾಸಿ ತಂಡವಾಗಲು ಸಾಧ್ಯವಿಲ್ಲ" ಎಂದು ವೀರು ಹೇಳಿದರು.

ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ 60 ರನ್ ಅಂತರದ ಸೋಲಿಗೆ ಗುರಿಯಾಗಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 1-3ರ ಅಂತರದ ಸರಣಿ ಸೋಲಿಗೆ ಶರಣಾಗಿತ್ತು.

ಎರಡು ಪಂದ್ಯಗಳಲ್ಲಿ ಗೆಲ್ಲುವ ಅವಕಾಶವಿದ್ದರೂ ಟೀಮ್ ಇಂಡಿಯಾ ಕೈಚೆಲ್ಲಿತ್ತು. ಮೊದಲ ಪಂದ್ಯದಲ್ಲಿ 194 ರನ್ ಗುರಿ ಬೆನ್ನತ್ತಿದ ಭಾರತ ತಂಡವು 31 ರನ್ ಅಂತರ ಸೋಲಿಗೆ ಗುರಿಯಾಗಿತ್ತು. ಹಾಗೆಯೇ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ 245 ರನ್ ಬೆನ್ನಟ್ಟುವಲ್ಲಿ ವೈಫಲ್ಯ ಅನುಭವಿಸಿತ್ತು.

ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಅವರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ಅನಿಲ್ ಕುಂಬ್ಳೆ ತ್ಯಜಿಸಿದ್ದರು. ಬಳಿಕ ಈ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಪ್ರಬಲ ಸ್ಪರ್ಧಿ ಎನಿಸಿದ್ದರೂ ಕೊಹ್ಲಿ ಇಚ್ಛೆಯ ಮೆರೆಗೆ ರವಿಶಾಸ್ತ್ರಿ ಕೋಚ್ ಹುದ್ದೆಯನ್ನೇರಿದ್ದರು. ಇದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತು.

ಒಟ್ಟಾರೆಯಾಗಿ ಕೊಹ್ಲಿ-ರವಿಶಾಸ್ತ್ರಿ ಅಡಿಯಲ್ಲೂ ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ಕೆಟ್ಟ ಪ್ರದರ್ಶನ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌