ಆ್ಯಪ್ನಗರ

ವಾಡೇಕರ್ ಪಿತೃ ಸಮಾನ: ಕುಂಬ್ಳೆ ಸಂತಾಪ

ಬುಧವಾರ ರಾತ್ರಿ ನಿಧನರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಅವರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.

Times Now 16 Aug 2018, 3:41 pm
ಮುಂಬಯಿ: ಬುಧವಾರ ರಾತ್ರಿ ನಿಧನರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಅವರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.
Vijaya Karnataka Web kumble-wadekar


ತಮ್ಮ ಸಂತಾಪದಲ್ಲಿ ಅತೀವ ದು:ಖ ವ್ಯಕ್ತಪಡಿಸಿರುವ ಜಂಬೋ, ವಾಡೇಕರ್ ಅವರು ತಮ್ಮ ತಂಡದ ಪಾಲಿಗೆ ಕೋಚ್‌ಗಿಂತಲೂ ಮಿಗಿಲಾಗಿ 'ಪಿತೃ ಸಮಾನ' ಎಂದು ಹೇಳಿದ್ದಾರೆ.

ವಾಡೇಕರ್ ಅವರನ್ನು ಕ್ರಿಕೆಟ್‌ನ 'ಚತುರ ತಂತ್ರಜ್ಞ' ಎಂದು ಹಾಡಿ ಹೊಗಳಿರುವ ಕುಂಬ್ಳೆ, ತಮ್ಮ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

ವಾಡೇಕರ್ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಅವರನ್ನು ಹುರಿದುಂಬಿಸಿದ್ದರು. ಬಳಿಕ ಓರ್ವ ಶ್ರೇಷ್ಠ ಲೆಗ್ ಸ್ಪಿನ್ನರ್ ಆಗಿ ಹೊರಹೊಮ್ಮುವಲ್ಲಿ ಸಾಧ್ಯವಾಗಿತ್ತು.

1971ರಲ್ಲಿ ವಾಡೇಕರ್ ನಾಯಕತ್ವದಲ್ಲಿ ಭಾರತ ತಂಡವು ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿತ್ತು. ಅಲ್ಲದೆ ಭಾರತ ಏಕದಿನ ತಂಡವನ್ನು ಮೊತ್ತ ಮೊದಲ ಬಾರಿಗೆ ಮುನ್ನಡೆಸಿದ ದಾಖಲೆಯು ಅವರ ಹೆಸರಲ್ಲಿದೆ.

ಅಷ್ಟಕ್ಕೂ ವಾಡೇಕರ್ ಹಾಗೂ ಕುಂಬ್ಳೆ ಅವರಿಬ್ಬರಿಗೂ ಸಾಮ್ಯತೆಯಿದೆ. ಅದೇನೆಂದರೆ ಅವರಿಬ್ಬರೂ ಟೀಮ್ ಇಂಡಿಯಾದ ನಾಯಕ ಹಾಗೂ ಕೋಚ್ ಹುದ್ದೆಯನ್ನು ನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌